ಉಡುಪಿ ಜಿಲ್ಲೆಯಲ್ಲಿ 17,824 ಹೆಕ್ಟೇರ್‌ ಭತ್ತ ನಾಟಿ


Team Udayavani, Jul 17, 2019, 5:23 AM IST

battada-nati1

ಕೋಟ: ಮುಂಗಾರು ಮಳೆಯ ಕೊರತೆಯಿಂದ ಕರಾವಳಿಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಆದರೆ ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಅಲ್ಪ ಮಳೆಯ ಮಧ್ಯೆಯೇ ರೈತರು ನಾಟಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.

ಇಲಾಖೆಯ ಅಂಕಿ ಅಂಶದ ಪ್ರಕಾರ ಜು. 12ರ ತನಕ ಉಡುಪಿ ಜಿಲ್ಲೆಯಲ್ಲಿ 17,824 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ನಡೆದಿದ್ದು ಇನ್ನೂ ಹೇರಳ ಪ್ರಮಾಣದ ನಾಟಿ ಬಾಕಿ ಇದೆ.

ಗುರಿ ಸಾಧನೆಗೆ ಶೇ. 50ರಷ್ಟು ಬಾಕಿ
ಕೃಷಿ ಇಲಾಖೆಯ ಲೆಕ್ಕಾಚಾರದಂತೆ 2019-20ನೇ ಸಾಲಿನ ಮುಂಗಾರು ಋತುವಿನಲ್ಲಿ ಉಡುಪಿ ಜಿಲ್ಲೆಯಲ್ಲಿ 36,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆವ ಗುರಿ ಹೊಂದಲಾಗಿದೆ. ಹೀಗಾಗಿ ಈ ಗುರಿ ಸಾಧನೆಯಾಗಬೇಕಾದರೆ ಇನ್ನೂ ಶೇ. 50ರಷ್ಟು ಕೃಷಿ ಚಟುವಟಿಕೆ ನಡೆಯಬೇಕಿದೆ.

ಒಂದು ತಿಂಗಳು ವಿಳಂಬ
ಹಿಂದೆ ಜೂನ್‌ನಲ್ಲಿ ನಾಟಿ ಕಾರ್ಯ ಆರಂಭ ಗೊಂಡು ಜು. 15ರೊಳಗೆ ಶೇ. 85ರಿಂದ 90ರಷ್ಟು ನಾಟಿ ಪೂರ್ಣಗೊಳ್ಳುತಿತ್ತು. ಆದರೆ ಈ ಬಾರಿ ಮಳೆ ಸಮಸ್ಯೆಯಿಂದಾಗಿ ನಾಟಿ ಒಂದು ತಿಂಗಳು ವಿಳಂಬ ವಾಗಿದ್ದು ಮುಂದೆ ಕಟಾವು ಕೂಡ ತಡವಾಗಲಿದೆ.

ಯಂತ್ರ ನಾಟಿಗೆ ಬೇಡಿಕೆ
ವರ್ಷದಿಂದ ವರ್ಷಕ್ಕೆ ಯಂತ್ರ ನಾಟಿಗೆ ಬೇಡಿಕೆ ಹೆಚ್ಚುತಿದೆ. ಈ ಸಾಲಿನಲ್ಲಿ ಈಸಿ ಲೈಫ್ ಯಂತ್ರಧಾರೆ ಕೇಂದ್ರಗಳ ಮೂಲಕ ಕೋಟ ಹೋಬಳಿಯಲ್ಲಿ 194 ಎಕ್ರೆ, ಕುಂದಾಪುರದಲ್ಲಿ 318 ಎಕ್ರೆ, ಕಾರ್ಕಳದಲ್ಲಿ 36 ಎಕ್ರೆ ನಾಟಿ ಕಾರ್ಯ ನಡೆದಿದೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಧಾರೆ ಕೇಂದ್ರಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 571ಎಕ್ರೆ ಯಂತ್ರ ನಾಟಿ ನಡೆದಿದೆ. ಇವೆಲ್ಲವು ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿದೆ. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದಿಂದ ಕಳೆದ ಬಾರಿ 100 ಎಕ್ರೆ ಯಾಂತ್ರೀಕೃತ ನಾಟಿ ಮಾಡಲಾಗಿದ್ದು, ಈ ಬಾರಿ 200 ಎಕ್ರೆ ನಡೆದಿದೆ. ಖಾಸಗಿ ಗುತ್ತಿಗೆದಾರರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು ಸುಮಾರು 7ಕ್ಕೂ ಹೆಚ್ಚು ಹೊಸ ನಾಟಿ ಯಂತ್ರಗಳನ್ನು ಜಿಲ್ಲೆಯಲ್ಲಿ ಖರೀದಿಸಲಾಗಿದೆ.

ನೇರ ಬಿತ್ತನೆ ಕೂಡ ಅಧಿಕ
ಯಾಂತ್ರಿಕ ವಿಧಾನದ ಜತೆಗೆ ನೇರ ಬಿತ್ತನೆಯನ್ನು ಅನುಸರಿಸಿದ ರೈತರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿದೆ. ಸಾಂಪ್ರದಾಯಿಕ ಕೈ ಬಿತ್ತನೆ, ಡ್ರಮ್‌ಶಿಲ್ಡ್‌, ಕೂರಿಗೆ ವಿಧಾನ, ಸಾಲು ಬೀಜ ಮುಂತಾದ ವಿಧಾನಗಳನ್ನು ರೈತರು ಅಳವಡಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ನಾಟಿಗೆ ಆಸಕ್ತಿ ಕಡಿಮೆ
ವರ್ಷದಿಂದ ವರ್ಷಕ್ಕೆ ಯಂತ್ರ ನಾಟಿ ಬಹಳಷ್ಟು ಬೇಡಿಕೆ ಪಡೆಯುತ್ತಿದ್ದು ಈ ಬಾರಿ ಕೋಟ ಹೋಬಳಿ ವ್ಯಾಪ್ತಿಯಲ್ಲೇ 4ಕ್ಕೂ ಹೆಚ್ಚು ನಾಟಿ ಯಂತ್ರಗಳ ಖರೀದಿ ನಡೆದಿದೆ ಹಾಗೂ ನಾಟಿಯ ಪ್ರಮಾಣ ಕಳೆದ ವರ್ಷಕ್ಕಿಂತ ಅಧಿಕವಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಸಾಂಪ್ರದಾಯಿಕ ನಾಟಿಗೆ ಬೇಡಿಕೆ ಇಲ್ಲ.
-ಶಿವ ಪೂಜಾರಿ ಮಣೂರು, ಯಂತ್ರನಾಟಿ ಗುತ್ತಿಗೆದಾರರು

ಗುರಿಸಾಧನೆ ಸಾಧ್ಯವಿದೆ
ಈ ಬಾರಿ ಮಳೆ ವಿಳಂಬವಾದ್ದರಿಂದ ನಾಟಿ ಸ್ವಲ್ಪ ತಡವಾಗಿದೆ. ಆದರೆ ಪ್ರಸ್ತುತ ವೇಗವಾಗಿ ನಡೆಯುತ್ತಿದೆ. ಆಗಸ್ಟ್‌ ತನಕ ನಾಟಿ ನಡೆಸುವವರಿದ್ದಾರೆ. ಹೀಗಾಗಿ ಇಲಾಖೆಯ ನಿರ್ದಿಷ್ಟ ಗುರಿ ಸಾಧನೆ ಯಾಗಲಿದೆ. ರೈತರಿಗೆ ಅಗತ್ಯವಿರುವ ಅವಶ್ಯ ವಸ್ತುಗಳು ಇಲಾಖೆಯಲ್ಲಿ ಲಭ್ಯವಿದೆ.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.