ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಇಟಲಿ ಎಡವಿದ ಕಥೆ ಉಳಿದವರಿಗೆ ಪಾಠ

Team Udayavani, Apr 7, 2020, 5:25 PM IST

ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಮಣಿಪಾಲ: ಇಟಲಿ ಕೋವಿಡ್-19 ಸೋಂಕು ತಡೆ ವಿಚಾರದಲ್ಲಿ ಕೊಂಚ ತಡವಾಗಿ ಎಚ್ಚೆತ್ತು ಕೊಂಡಿದ್ದು, ತನ್ನ ಮೊಂಡುತನಕ್ಕೆ ಈಗ ಪಶ್ಚಾತಾಪ ಪಡುತ್ತಿದೆ. ಆದರೆ ಉಳಿದ ದೇಶಗಳು ಇಟಲಿಯ ಅನುಭವದಿಂದ ಕಲಿತು ಕೊಳ್ಳಬೇಕಾದದ್ದು ಬಹಳಷ್ಟಿದೆ. ಇಟಲಿಯ ತಪ್ಪುಗಳನ್ನು ಲೆಕ್ಕ ಹಾಕಿದರೆ, ಉಳಿದ ರಾಷ್ಟ್ರಗಳಿಗೆ ನಡೆಯುವ ಹಾದಿ ಸ್ಪಷ್ಟವಾಗುತ್ತದೆ.

ಸಾಮಾಜಿಕ ಅಂತರ ನಿಯಮಕ್ಕೆ ತಿಲಾಂಜಲಿ
ಸರಕಾರ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಂತಹ ಆಘಾತಕಾರಿ ಘಟ್ಟದಲ್ಲೂ ರಾಜಕೀಯ ನಾಯಕರ ಒಂದು ಗುಂಪು ಕೋವಿಡ್-19 ಸೋಂಕಿನ ಲಕ್ಷಣಗಳ ಬಗ್ಗೆ ಅರಿವಿದ್ದರೂ ಹಸ್ತಲಾಘವ ನಡೆಸಿದರು. ಈ ಪೈಕಿ ಒಬ್ಬರಿಗೆ ಒಂದು ವಾರದ ನಂತರ ಸೋಂಕು ಕಾಣಿಸಿಕೊಂಡಿತ್ತು.

ಲಾಕ್‌ಡೌನ್‌ ಘೋಷಣೆಗೆ ವಿಳಂಬ
ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಅಧಿಕ ಮಟ್ಟದಲ್ಲಿ ವ್ಯಾಪಿಸುವ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವುದು ಅತ್ಯಂತ ಕಷ್ಟಕರ. ಈ ರೋಗವನ್ನು ತಡೆಗೆ ಮೊದಲೇ ಅತ್ಯಂತ ಕಠಿನ ಕ್ರಮ ಕೈಗೊಳ್ಳಬೇಕು. ಆದರೆ ಇಟಲಿ ಕೋವಿಡ್-19 ವೈರಸ್‌ ಕಾಣಿಸಿಕೊಂಡಾಗ ಸಣ್ಣ ಪ್ರಮಾಣದಲ್ಲಿ ತಡೆ ಕ್ರಮಗಳನ್ನು ಕೈಗೊಂಡಿತು. ಸಮಸ್ಯೆ ವ್ಯಾಪಕವಾಗಿ ಹರಡುತ್ತಾ ಹೋದಂತೆ, ಇನ್ನಷ್ಟು ಕ್ರಮಗಳನ್ನು ಕೈಗೊಂಡಿತಾದರೂ ಕಾಲ ಮಿಂಚಿ ಹೋಗಿತ್ತು. ಹೆಚ್ಚಿನ ಪ್ರಕರಣಗಳು ದಾಖಲಾದ ಪ್ರದೇಶವನ್ನು ರೆಡ್‌ ಝೋನ್‌ ಎಂದು ಗುರುತಿಸಿತು. ಆ ಪ್ರದೇಶದಲ್ಲೂ ತೀವ್ರತೆಯನ್ನು ಆಧರಿಸಿ ಲಾಕ್‌ಡೌನ್‌ಗಳನ್ನು ಘೋಷಿಸಿತು. ಅಂತಿಮವಾಗಿ ಇಡೀ ದೇಶಕ್ಕೆ ಲಾಕ್‌ಡೌನ್‌ ವಿಸ್ತರಿಸಲಾಯಿತು. ಆದರೆ ಈ ಕಾರ್ಯವನ್ನು ಮೊದಲೇ ಮಾಡಿದ್ದರೆ ಪರಿಸ್ಥಿತಿ ನಿಯಂತ್ರ ಣಗೊಳ್ಳುತ್ತಿತ್ತು ಎಂಬ ಮಾತು ಈಗ ಕೇಳಿ ಬರುತ್ತಿದೆ.

ಸೀಮಿತ ನಿಯಮಗಳು
ಭಾಗಶಃ ಲಾಕ್‌ಡೌನ್‌ ಘೋಷಿಸಿದಾಗ ದೇಶದಲ್ಲಿ ಕಡಿಮೆ ನಿರ್ಬಂಧ ಇರುವ ಪ್ರದೇಶಗಳಿಗೆ ಜನರು ಪ್ರಯಾಣಿಸ ತೊಡಗಿದರು. ಈ ಸೀಮಿತ ಲಾಕ್‌ಡೌನ್‌ಗಳು ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಯಿತು. ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಪ್ರಯಾಣಿಸುವರ ಜತೆ ಸೋಂಕೂ ಸಹ ಹರಡಿರಬಹುದು ಎಂದು ಹಾವರ್ಡ್ ಸಂಶೋಧಕರು ಹೇಳಿದ್ದಾರೆ. ಉತ್ತರ ಇಟಲಿಯನ್ನು ಮುಚ್ಚುವ ಆದೇಶವು ಜನರಿಗೆ ತಿಳಿಯುತ್ತಿದ್ದಂತೆಯೇ ದಕ್ಷಿಣ ಇಟಲಿಗೆ ಭಾರಿ ಸಂಖ್ಯೆಯ ಜನರು ತೆರಳಿದ್ದು, ಈ ಬೆಳವಣಿಗೆಯಿಂದ ಇಲ್ಲಿಯೂ ವೈರಸ್‌ನ ಹಬ್ಬಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಇಟಲಿಯ ಜನರ ನಡೆಯಿಂದಾಗಿ ಸಮಸ್ಯೆ ಭೀಕರ ಸ್ವರೂಪ ತಾಳಿತು ಎಂಬುದು ಸಂಶೋಧಕರ ಅಭಿಪ್ರಾಯ.

ಯಶಸ್ವಿಯಾದ ವೆನಟೋ ವ್ಯಾಪಕ ಪರೀಕ್ಷೆ
ಗುಣಲಕ್ಷಣ ಕಾಣಿಸಿಕೊಂಡವರು ಮತ್ತು ಗುಣಲಕ್ಷಣ ಕಾಣಿಸಿಕೊಳ್ಳದವರಲ್ಲಿ ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಯಿತು.

ಸ್ವಯಂ ಟ್ರೇಸಿಂಗ್‌
ಯಾರಾದರೂ ಒಬ್ಬರಿಗೆ ರೋಗ ಕಾಣಿಸಿಕೊಂಡಲ್ಲಿ, ಅವರೊಂದಿಗೆ ವಾಸಿಸುತ್ತಿರುವ ಎಲ್ಲರೂ, ಅವರು ಪಾಸಿಟಿವ್‌ ಆಗಿರಲಿ ಅಥವಾ ನೆಗೆಟಿವ್‌ ಆಗಿರಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು.

ಮನೆಯಲ್ಲೇ ಟೆಸ್ಟಿಂಗ್‌
ಕೋವಿಡ್‌-19 ಶಂಕಿತರ ಮನೆಗೆ ಆರೋಗ್ಯ ಕಾರ್ಯಕರ್ತರು ತೆರಳಿ ಅವರ ಸ್ಯಾಂಪಲ್‌ಗ‌ಳನ್ನು ಸಂಗ್ರಹಿಸುತ್ತಾರೆ. ಇದರಿಂದ ಅವರು ಆಸ್ಪತ್ರೆಗೆ ಪ್ರಯಾಣಿಸುವಾಗ ಇತರರಿಗೆ ಹರಡಿಸುವ ಅಪಾಯ ಇರುವುದಿಲ್ಲ. ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರು, ನರ್ಸ್‌ಗಳು, ನರ್ಸಿಂಗ್‌ ಹೋಮ್‌ಗಳಲ್ಲಿನ ದಾದಿಯರು, ದಿನಸಿ ಅಂಗಡಿ ಸಿಬಂದಿ ಮತ್ತು ಔಷಧ ಅಂಗಡಿಯಲ್ಲಿ ಕೆಲಸ ಮಾಡು  ವವರ ಮೇಲೂ ಬಗ್ಗೆ ನಿಗಾ ಇಡಲಾಯಿತು. ಅವರಿಗೆ ರೋಗ ಹರಡುವುದನ್ನು ತಡೆಯಲು ರಕ್ಷಣಾ ಸಲಕರಣೆ ಗಳನ್ನು ಒದಗಿಸಲಾಯಿತು.

ಲಾಂಬಾರ್ಡಿಯ ವೈಫಲ್ಯಕ್ಕೆ ಕಾರಣಗಳು
ಇದೇ ಮಾದರಿಯನ್ನು ಲಾಂಬಾರ್ಡಿಯಲ್ಲಿ ಜಾರಿ ಮಾಡಲಾಯಿತು. ಆದರೆ ಈ ಎಲ್ಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಮತ್ತು ಸಕ್ರಿಯವಾಗಿ ಅನುಷ್ಠಾನಗೊಳ್ಳಲಿಲ್ಲ. ಪರೀಕ್ಷೆ, ಸ್ವಯಂ ಟ್ರೇಸಿಂಗ್‌, ಮನೆಯಲ್ಲೇ ಆರೈಕೆ ಮತ್ತು ಕಾರ್ಯ ಕರ್ತರ ಮೇಲೆ ಸರಿಯಾಗಿ ನಿಗಾ ವಹಿಸಲಿಲ್ಲ. ಪರಿಣಾಮ ಇಲ್ಲಿನ ಆಸ್ಪತ್ರೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರೆ, ವೆನೆಟೋ ನಗರ ಚೇತರಿಸಿಕೊಳ್ಳುತ್ತಿದೆ.

ಲಾಂಬಾರ್ಡಿ ಮತ್ತು ವೆನಟೋ ಅಕ್ಕಪಕ್ಕದ ನಗರಗಳಾ ದರೂ 2 ನಗರಗಳ ಕೊರೊನಾ ಚಿತ್ರಣ ವಿಭಿನ್ನ. ಲಾಂಬಾ ರ್ಡಿ ಯಲ್ಲಿ 10 ಮಿಲಿಯನ್‌ ಜನರಿದ್ದು, ಇಲ್ಲಿ 35 ಸಾವಿರ ಕೋವಿಡ್‌ 19 ಪ್ರಕರಣಗಳು ಕಂಡು ಬಂದಿವೆ. 5 ಸಾವಿರ ಜನರು ಸಾವನ್ನಪ್ಪಿದ್ದಾರೆ. ವೆನೆಟೋದಲ್ಲಿ 5 ಮಿಲಿ ಯನ್‌ ಜನರಿದ್ದಾರೆ. ಆದರೆ, ಇಲ್ಲಿ ಕೇವಲ 7 ಸಾವಿರ ಪ್ರಕರಣ ಗ ‌ಳು ಕಂಡು ಬಂದಿವೆ. 300ಕ್ಕೂ ಕಡಿಮೆ ಜನರು ಸಾವನ್ನಪ್ಪಿದ್ದಾರೆ.

ಪರಿಣಾಮಕಾರಿ ಅನುಷ್ಠಾನ
2 ವಿಭಿನ್ನ ಪ್ರದೇಶಗಳಲ್ಲಿ ಒಂದೇ ಮಾದರಿ ಸೂಚನೆಗಳನ್ನು ನೀಡಿದರೂ ಪರಿಣಾಮಕಾರಿ ಅನುಷ್ಠಾನದಿಂದ ವಿಭಿನ್ನ ಫ‌ಲಿ ತಾಂಶ ಬಂದಿದೆ. ಒಂದು ಲೆಕ್ಕದಲ್ಲಿ ಇದು ಒಳ್ಳೆಯ ಪಾಠವಾಗಿದ್ದು, ಕಠಿಣತೆ ಮುಂದಿನ ಒಳಿತಿಗೆ ಭದ್ರ ಬುನಾದಿ ಆಗುತ್ತದೆ ಎಂಬುದನ್ನು ಮನದಟ್ಟು ಮಾಡಿಸುವಂತಿದೆ.

ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲ 
ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತದೆ. ಇದರ ಸಂಪರ್ಕಕ್ಕೆ ಬಂದ ವರಿಗೆ ತತ್‌ಕ್ಷಣ ಅದರ ಗುಣ ಲಕ್ಷಣ ಗೋಚರಿಸದು. ಒಂದು ವಾರ ಅಥವಾ ಎರಡು ವಾರಗಳ ನಂತರ ಸೋಂಕಿನ ಗುಣ ಲಕ್ಷಣಗಳು ಸ್ಪಷ್ಟವಾಗಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದೆಲ್ಲ ತಿಳಿದಿದ್ದರೂ ಇಟಲಿಯ ರಾಜಕೀಯ ನಾಯಕರು ಲಘುವಾಗಿ ಪರಿಗಣಿಸಿದರು.

ಟಾಪ್ ನ್ಯೂಸ್

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.