ನಿಕ್ಕಿ ಯಾದವ್ ಮರ್ಡರ್ ಕಹಾನಿ: ಪೋಲಿಸ್ ಕಾನ್ಸ್ಟೇಬಲ್ನಿಂದಲೇ ಕೊಲೆಗೆ ಸ್ಕೆಚ್
ತನಿಖೆ ವೇಳೆ ಹೊರಬಿತ್ತು ಆಘಾತಕಾರಿ ಮಾಹಿತಿ
Team Udayavani, Feb 19, 2023, 10:48 AM IST
ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯ ಮತ್ತೊಂದು ಹತ್ಯೆಯಲ್ಲಿ ಸಾಹಿಲ್ ಗೆಹ್ಲೋಟ್ ತನ್ನ ಲೀವ್ ಇನ್ ಪಾರ್ಟ್ನರ್ ನಿಕ್ಕಿ ಯಾದವ್ನನ್ನು ಚಾರ್ಜರ್ ಕೇಬಲ್ನಿಂದ ಕೊಂದು ಫ್ರೀಡ್ಜ್ನಲ್ಲಿಟ್ಟು ಇನ್ನೊಂದು ಮದುವೆಯಾದ ಘಟನೆಯಲ್ಲಿ ಪೋಲಿಸರು ಸಾಹಿಲ್ ಗೆಹ್ಲೋಟ್ನ ತಂದೆ, ಇಬ್ಬರು ಸೋದರರನ್ನು ಮತ್ತು ಇಬ್ಬರು ಸ್ನೇಹಿತನನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಸಾಹಿಲ್ನ ಸಹೋದರ ನವೀನ್ ದೆಹಲಿಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿದ್ದು, ಕೊಲೆ ಮತ್ತು ಶವವನ್ನು ಅಡಗಿಸಿಡುವ ಬಗ್ಗೆ ನವೀನ್ನೇ ಸ್ವತಃ ಪ್ಲಾನ್ ಮಾಡಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅಲ್ಲದೇ ಈ ಮೊದಲೇ 2020ರಲ್ಲೇ ನಿಕ್ಕಿ ಮತ್ತು ಸಾಹಿಲ್ ಮದುವೆಯೂ ನಡೆದಿತ್ತು ಎಂದು ಪೋಲಿಸರು ಹೇಳಿಕೆ ಬಿಡುಗಡೆ ಮಾಡಿದ್ದರು.
2022 ರ ಡಿಸೆಂಬರ್ನಲ್ಲೇ ಸಾಹಿಲ್ಗೆ ಬೇರೆ ಮದುವೆಯ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ ನಿಕ್ಕಿಗೆ ಇದನ್ನು ತೀಳಿಸಿರಲಿಲ್ಲ.
ಕೊಲೆಗೈಯ್ಯುವ ಮುನ್ನಾ ದಿನ ಸಾಹಿಲ್ ಮತ್ತು ಇತರೆ ಆರೋಪಿಗಳು ನಿಕ್ಕಿಯನ್ನು ಕೊಲೆಗೈಯ್ಯುವ ಬಗ್ಗೆ ಯೋಜನೆ ರೂಪಿಸಿದ್ದರು. ನಿಕ್ಕಿಯ ಕೊಲೆ ಬಳಿಕ ಈ ಐವರೂ ಸೇರಿಕೊಂಡು ಆಕೆಯ ದೇಹವನ್ನು ಫ್ರಿಡ್ಜ್ನಲ್ಲಿ ಭದ್ರವಾಗಿ ಅಡಗಿಸಿಟ್ಟಿದ್ದರು.
ಫ್ರಿಡ್ಜ್ನಲ್ಲಿ ದೇಹವನ್ನು ಇಡುವುದರಿಂದ ಮೃತದೇಹ ಯಾವುದೇ ರೀತಿಯ ದುರ್ನಾತವನ್ನು ಹೊರಸೂಸುವುದಿಲ್ಲ. ಆದ್ದರಿಂದ ಯಾರೂ ಅದರ ಬಗ್ಗೆ ಸಂಶಯಿಸುವುದಿಲ್ಲ. ಸಾಹಿಲ್ನ ಮದುವೆಯಲ್ಲಿ ಎಲ್ಲರೂ ಮಗ್ನರಾಗಿರುವುದರಿಂದ ಇನ್ನು ಮೂರು ದಿನ ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲವಾದ್ದರಿಂದ ಮದುವೆಯ ಬಳಿಕ ಆಕೆಯ ದೇಹವನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ ದೆಹಲಿ ಪೊಲಿಸ್ ಕಾನ್ಸಸ್ಟೇಬಲ್ ನವೀನ್ ಸುಮಾರಷ್ಟು ಸಲಹೆಗಳನ್ನು ನೀಡಿದ್ದ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 2020ರಲ್ಲೇ ಮದುವೆಯಾಗಿದ್ದ ನಿಕ್ಕಿ-ಸಾಹಿಲ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ