ಒಂದೇ ತಟ್ಟೆ: ಹಂಚಿ ತಿಂತಾರೆ ಮಕ್ಕಳು ಹಣ್ಣು, ಮೊಟ್ಟೆ
Team Udayavani, Dec 16, 2021, 3:42 PM IST
ವಾಡಿ: ಒಂದೆಡೆ ಮೊಟ್ಟೆ ವಿರೋಧಿಸಿ ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಮಕ್ಕಳು ಶಾಲೆಯಲ್ಲಿ ಮೊಟ್ಟೆ ಮತ್ತು ಹಣ್ಣು ಹಂಚಿ ತಿನ್ನುತ್ತಿದ್ದಾರೆ. ಒಬ್ಬ ವಿದ್ಯಾರ್ಥಿನಿ ಕೈಯಲ್ಲಿ ಮೊಟ್ಟೆ ಹಿಡಿದು ಕುಳಿತರೆ, ಇನ್ನೋರ್ವ ವಿದ್ಯಾರ್ಥಿನಿ ಬಾಳೆಹಣ್ಣು ಹಿಡಿದುಕೊಂಡು ಬಿಸಿಯೂಟವನ್ನು ಒಂದೇ ತಟ್ಟೆಯಲ್ಲಿ ತಿನ್ನುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸರಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ವಿದ್ಯಾರ್ಥಿಗಳಿಬ್ಬರು ಪರಸ್ಪರ ಮುಖಾಮುಖಿಯಾಗಿ ಕುಳಿತು ಬಿಸಿಯೂಟ ಸವಿಯುತ್ತಿದ್ದ ಅಪರೂಪದ ದೃಶ್ಯ ಉದಯವಾಣಿ ಕಣ್ಣಿಗೆ ಬಿದ್ದಿದೆ.
ಶಾಲೆಯ 8 ನೇ ತರಗತಿಯ ಮಹೆರಾಬೇಗಂ ಮತ್ತು ಭಾಗ್ಯ ಈ ಸೌಹಾರ್ದತೆ ಮೆರೆದ ಮಕ್ಕಳು. ನಮ್ಮಿಬ್ಬರ ಆಹಾರದ ರುಚಿ ಭಿನ್ನವಾಗಿರಬಹುದು ಆದರೆ ನಮ್ಮ ಸ್ನೇಹ ಸೌಹಾರ್ದತೆ ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿದೆ. ನಾವು ಜತೆಗೂಡಿಯೇ ಮೊಟ್ಟೆ ಹಣ್ಣು ಸೇವಿಸುತ್ತೇವೆ. ಇದರಿಂದ ನಮಗೇನೂ ಮುಜುಗರವಿಲ್ಲ. ಮೊಟ್ಟೆ ಕೈಬಿಡಬೇಡಿ. ಹಣ್ಣು ಕೂಡ ನಿಲ್ಲಿಸಬೇಡಿ. ಆಯ್ಕೆ ನಮಗೆ ಬಿಡಿ ಎನ್ನುತ್ತಾರೆ ಮುಗ್ದ ಮಕ್ಕಳು.
ಮೊಟ್ಟೆ ಮತ್ತು ಹಣ್ಣು ವಿತರಣೆ ಯೋಜನೆ ಆರಂಭವಾದ ಗಳಿಗೆಯಿಂದ ಶಾಲೆಯಲ್ಲಿ ಶೇ.10 ದಾಖಲಾತಿ ಹೆಚ್ಚಿದೆ. ಶಾಲೆಗೆ ಬಿಟ್ಟ ವಲಸೆ ಕುಟುಂಬಗಳ ಮಕ್ಕಳೂ ತರಗತಿಗೆ ಹಾಜರಾಗುತ್ತಿದ್ದಾರೆ. -ಭೋಜಪ್ಪ ಜೇವೂರ ಮುಖ್ಯಶಿಕ್ಷಕ ಕೊಂಚೂರು ಶಾಲೆ
– ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ರಾಜಿ ಸಂಧಾನದಲ್ಲಿ ಒಂದಾದ ಮೂರು ದಂಪತಿಗಳು
Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ ಸಾವು?
Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ