21 ದಿನಗಳ ಅವಧಿಗೆ ಗಡಿ ಪಾಸ್
Team Udayavani, Aug 13, 2020, 10:47 PM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಕಾಸರಗೋಡು-ಕರ್ನಾಟಕ ನಡುವೆ ಪ್ರತಿನಿತ್ಯ (ರಾಜ್ಯ ಸರಕಾರ ಅನುಮತಿ ನೀಡಿರುವ ರೆಗ್ಯುಲರ್ ಪಾಸ್) ಸಂಚಾರಕ್ಕಾಗಿ ಆರ್ಟಿ-ಪಿಸಿಆರ್ ತಪಾಸಣೆ ನಡೆಸಿ 21 ದಿನಗಳ ಅವಧಿಗೆ ಪಾಸ್ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ಬಾಬು ತಿಳಿಸಿದ್ದಾರೆ.
ಪಾಸ್ ಪಡೆದುಕೊಂಡವರು ಕಡ್ಡಾಯವಾಗಿ 7 ದಿನಗಳಿಗೊಮ್ಮೆ ಆ್ಯಂಟಿಜೆನ್ ಟೆಸ್ಟ್ಗೆ ಒಳಗಾಗಿ ನೆಗೆಟಿವ್ ಪ್ರಮಾಣಪತ್ರ ಹಾಜರುಪಡಿಸಬೇಕು ಎಂಬ ಹಿಂದಿನ ನಿಯಮವನ್ನು ಪರಿಷ್ಕರಿಸಿ 21 ದಿನಗಳ ಬಳಿಕ ತಪಾಸಣೆ ಮಾಡಿಸಿ ಪಾಸ್ ನವೀಕರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಬಿಪಿಎಲ್ ಪಟ್ಟಿಯಲ್ಲಿರುವವರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಉಚಿತವಾಗಿರುತ್ತದೆ. ಇತರರು ಸ್ವಂತ ವೆಚ್ಚದಲ್ಲಿ, ಜಿಲ್ಲೆಯಲ್ಲಿ ಯಾ ಕರ್ನಾಟಕದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬೇಕು. ಸರಕಾರಿ ವ್ಯವಸ್ಥೆಯಲ್ಲಿ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡು ಪ್ರದೇಶಗಳಲ್ಲಿ ತಪಾಸಣೆ ಸೌಲಭ್ಯ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ವಾಹನಗಳಿಗೆ ಸ್ಟಿಕ್ಕರ್
ಪ್ರತಿನಿತ್ಯ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳುವವರು ಖಾಸಗಿ ವಾಹನಗದಲ್ಲಿ ಸಂಚರಿಸುವುದಿದ್ದರೆ ಆ ವಾಹನಗಳಲ್ಲಿ ಈ ಸಂಬಂಧ ಸ್ಟಿಕ್ಕರ್ ಲಗತ್ತಿಸಬೇಕು ಎಂದು ಜಿಲ್ಲಾ ಎಸ್ಪಿ ಡಿ. ಶಿಲ್ಪಾ ತಿಳಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ಹೆಚ್ಚುವರಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ