ವರ್ಕಾಡಿ: ಕಾರಿನಲ್ಲಿ ಬಂದ ತಂಡದಿಂದ ಕಾಲೇಜು ವಿದ್ಯಾರ್ಥಿಯ ಅಪಹರಣ
Team Udayavani, Jul 22, 2019, 6:56 PM IST
ಮಂಜೇಶ್ವರ: ಕಾಲೇಜಿಗೆಂದು ಸ್ಕೂಟರ್ನಲ್ಲಿ ತೆರಳುತ್ತಿದ್ದ ಕಳಿಯೂರು ಕೋರಿಕ್ಕಾರ್ ನಿವಾಸಿ, ಕೊಲ್ಲಿ ಉದ್ಯೋಗಿ ಹಸನ್ ಕುಂಞಿ ಅವರ ಪುತ್ರ ಅಬ್ದುಲ್ ರಹಮಾನ್ ಹಾರೀಸ್ ನನ್ನು (17) ಕಾರಿನಲ್ಲಿ ಬಂದ ತಂಡವೊಂದು ವರ್ಕಾಡಿ ಸಮೀಪದ ಕಳಿಯೂರಿನಿಂದ ಅಪಹರಿಸಿದೆ.
ತೊಕ್ಕೊಟ್ಟು ಬೆಸೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಸೋಮ ವಾರ ಬೆಳಗ್ಗೆ ಸ್ಕೂಟರ್ನಲ್ಲಿ ಸಹೋದರಿ ಜತೆಯಲ್ಲಿ ಸಂಚರಿಸುತ್ತಿದ್ದಾಗ ಅಪಹರಣ ಮಾಡಲಾಗಿದೆ.
ಸಹೋದರಿಯು ಧರ್ಮನಗರ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಕಪ್ಪು ಬಣ್ಣದ ಕಾರೊಂದು ನಿಂತಿತ್ತು. ಅದರಲ್ಲಿದ್ದವರು ಹಾರೀಸ್ನಲ್ಲಿ ಆತನ ಅಜ್ಜನ ಮನೆಗೆ ತೆರಳುವ ದಾರಿ ಕೇಳಿದರು. ಈ ಸಮಯದಲ್ಲಿ ಓರ್ವನು ಹಾರೀಸ್ನನ್ನು ಬಲವಂತವಾಗಿ ಕಾರಿನೊಳಗೆ ಎಳೆದು ಹಾಕಿದ್ದು, ಬಳಿಕ ಕಾರು ಪರಾರಿಯಾಗಿದೆ ಎಂದು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ