55 ಕೇಂದ್ರಗಳಲ್ಲಿ ಹಸುರು ಯೋಜನೆ: ಸಚಿವ

ಹಸುರು ಉದ್ಯಾನ ಕಾರ್ಯಕ್ರಮ ಉದ್ಘಾಟನೆ

Team Udayavani, Jun 8, 2019, 6:00 AM IST

07-BDK-01

ಬದಿಯಡ್ಕ: ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸುರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞರಪಳ್ಳಿ ಜಿಎಚ್‌ಎಸ್‌ನಲ್ಲಿ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.

ಮಡಿಕೈ ಗ್ರಾ.ಪಂ., ಜಿಲ್ಲಾ ಸಾಮಾ ಜಿಕ ಅರಣ್ಯೀಕರಣ ವಿಭಾಗ, ಹಸಿರು ಕೇರಳ ಮಿಷನ್‌, ಜೀವ ವೈವಿಧ್ಯ ಮಂಡಳಿ, ಎಂ.ಜಿ.ಎನ್‌.ಆರ್‌.ಇ.ಜಿ., ಕುಟುಂಬಶ್ರೀ ಮೊದಲಾದವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆ ಯಿತು. ಬರಿದಾಗುತ್ತಿರುವ ಗ್ರಾಮೀಣ ಸ್ವರೂಪವನ್ನು ಪುನಃ ಸ್ಥಾಪಿಸಲು ಮತ್ತು ನಗರ ಪ್ರದೇಶಗಳಲ್ಲಿ ಹಸುರೀಕರಣದ ಜೀವ ವೈವಿಧ್ಯವನ್ನು ಪುನಃ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಪಂಚಾಯತ್‌ಗಳಲ್ಲಿ ಆಯ್ಕೆ ಮಾಡಿದ 55 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ಉದ್ಯಾನ ಸೃಷ್ಟಿಸುವುದು. ಅರಣ್ಯ ಮಾದರಿಯಲ್ಲಿ ಸಸಿ ನೆಟ್ಟು ರಕ್ಷಿಸುವುದು. ಈ ರೀತಿ ಯಲ್ಲಿ ಅರಣ್ಯವನ್ನು ಸೃಷ್ಟಿಸುವ ಮೂಲಕ ವಾತಾವರಣದ ತಾಪವನ್ನು ನಿಯಂತ್ರಿಸುವುದರೊಂದಿಗೆ ಪಕ್ಷಿಗಳ ಸಹಿತ ಇತರ ವನ್ಯಜೀವಿಗಳಿಗೆ ಆವಾಸ ಸ್ಥಾನವನ್ನು ಒದಗಿಸಿದಂತಾಗುವುದು. ಜೀವ ವೈವಿಧ್ಯ ಉದ್ಯಾನಗಳು, ಕಾಡುಗಳ ಸಂರಕ್ಷಣೆ, ಪುನರ್‌ಜೀವ, ಜಲಸಂರಕ್ಷಣೆ ಮೊದಲಾದವುಗಳು ಯೋಜನೆಯ ಪ್ರಧಾನ ಅಂಶಗಳಾಗಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್‌ ಪಂಚಾಯತಿ ಅದ್ಯಕ್ಷ ಎಂ. ಗೌರಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ನಡೆದ ಹಲಸು ಫೆಸ್ಟ್‌ ಉದ್ಘಾಟನೆಯನ್ನು ಮಾಜಿ ಸಂಸದ ಪಿ. ಕರುಣಾಕರನ್‌ ನಿರ್ವಹಿಸಿದರು.

ನಕ್ಷತ್ರ ಅರಣ್ಯೀಕರಣ ಸಾರ್ವಜನಿಕ ಬನ ಸಂರಕ್ಷಣೆಯ ಉದ್ಘಾಟನೆಯನ್ನು ಎಂ.ಗೌರಿ, ಔಷಧ ಸಸ್ಯ ತೋಟವನ್ನು, ಫೋಟೋ ಸಿನಿಮಾ ಪ್ರದರ್ಶನವನ್ನು ಮಡಿಕೈ ಗ್ರಾ.ಪಂ. ಅಧ್ಯಕ್ಷ ಸಿ. ಪ್ರಭಾ ಕರನ್‌ ನಿರ್ವಹಿಸಿದರು. ಕೆ. ಪ್ರಮೀಳಾ, ಎಂ. ಕುಂಞಂಬು, ಶಶೀಂದ್ರನ್‌ ಮಡಿಕೈ, ಎಂ.ಅಬ್ದುಲ್‌ ರಹಮಾನ್‌, ಸಿ. ಇಂದಿರಾ, ಓಮನಾ, ಪಿ.ಕೆ. ಅನೂಪ್‌, ವಿ.ಕೆ. ದಿಲೀಪ್‌, ಎಂ.ಪಿ. ಸುಬ್ರಹ್ಮಣ್ಯನ್‌, ಟಿ.ಟಿ. ಸುರೇಂದ್ರನ್‌, ಪಿ. ಕೃಷ್ಣನ್‌, ಪಿ. ಪ್ರಸೀತಾ, ಬೇಬಿ ಬಾಲಕೃಷ್ಣನ್‌, ಎಂ. ರಾಜನ್‌ ಮತ್ತಿತರರು ಭಾಗವಹಿಸಿದ್ದರು.

ಕಾಸರಗೋಡು ಫಾರೆಸ್ಟ್‌ ಸಹಾಯಕ ಅಧಿಕಾರಿ ಪಿ. ಬಿಜು ಸ್ವಾಗತಿಸಿ, ಸಂಘಟಕ ಸಮಿತಿ ಸಂಚಾಲಕ ಸನಲ್‌ ಷಾ ಮಾಸ್ಟರ್‌ ವಂದಿಸಿದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.