ಕೋವಿಡ್ ಹಾವಳಿ: ಮಲ್ಲಿಗೆ ಕೃಷಿಕರು ಕಂಗಾಲು !
ಸೀಸನ್ ಸಮಯದಲ್ಲೇ ಎದುರಾದ ಸಮಸ್ಯೆ
Team Udayavani, Apr 15, 2020, 1:10 PM IST
ಬಂಟ್ವಾಳ: ಮದುವೆ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಮಾರ್ಚ್-ಎಪ್ರಿಲ್ ಸಮಯದಲ್ಲೇ ಕೋವಿಡ್ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಮಲ್ಲಿಗೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಸೀಸನ್ ಸಮಯದಲ್ಲಿ ಹೂವುಗಳ ಮಾರುಕಟ್ಟೆಯೇ ನಿಂತುಹೋಗಿದೆ.
ಇತರ ಬೆಳೆಗಳ ಕೃಷಿಕರಿಗೆ ಧಾರಣೆಯಲ್ಲಿ ವ್ಯತ್ಯಾಸವಿದ್ದರೂ ಇಂದಲ್ಲ ನಾಳೆ ಅದಕ್ಕೆ ಮಾರುಕಟ್ಟೆ ಸಿಗುತ್ತದೆ. ಆದರೆ ಮಲ್ಲಿಗೆಗೆ ಅದನ್ನು ಗಿಡದಿಂದ ತೆಗೆದ ದಿನ ಅಥವಾ ಮರುದಿನ ಮಾತ್ರ ಮಾರುಕಟ್ಟೆ ಇರುವ ಕಾರಣ ಪ್ರಸ್ತುತ ಪರಿಸ್ಥಿತಿಯಿಂದಾಗಿ ಮಲ್ಲಿಗೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲೂ ಸಾಕಷ್ಟು ಮಂದಿ ಕೃಷಿಕರು ಮಲ್ಲಿಗೆ ಕೃಷಿ ಮಾಡುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಇಲ್ಲದಿರುವುದರಿಂದ ಕೃಷಿಕರು ಗಿಡಗಳಲ್ಲಿ ಹೂವು ಬಾರದಂತೆ ಆರೈಕೆ ಮಾಡಬಹುದು ಎಂದು ತೋಟಗಾರಿಕಾ ಇಲಾಖೆಯವರು ಸಲಹೆ ನೀಡುತ್ತಾರೆ. ಗೊಬ್ಬರ ಹಾಕುವುದನ್ನು ಕಡಿಮೆ ಮಾಡುವುದು ಸಹಿತ ಇತರ ವಿಧಾನಗಳ ಮೂಲಕ ಗಿಡಗಳು ಹೂವು ಬಿಡುವುದನ್ನು ಕಡಿಮೆ ಮಾಡಬಹುದು. ಮುಂದೆ ಮಾರು ಕಟ್ಟೆಗಳು ತೆರೆದುಕೊಂಡಾಗ ಮತ್ತೆ ಹಿಂದಿನ ರೀತಿಯಲ್ಲೇ ಹೂವು ಬಿಡುವಂತೆ ಮಾಡಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಕೃಷಿಕರು ಮಾಹಿತಿ ನೀಡಿ
ಮಲ್ಲಿಗೆ ಕೃಷಿಕರು ತಮ್ಮಲ್ಲಿರುವ ಮಲ್ಲಿಗೆ ಗಿಡಗಳ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಿದರೆ ಅದರಿಂದ ಕೃಷಿಕರಿಗೆ ಸಾಕಷ್ಟು ಪ್ರಯೋಜನಗಳು ಸಿಗುವ ಸಾಧ್ಯತೆ ಇರುತ್ತದೆ. ಇಲಾಖೆಯಲ್ಲಿ ಕೃಷಿಕರ ಕುರಿತು ಮಾಹಿತಿ ಇದ್ದಾಗ, ಅವರಿಗೆ ಬೇಕಾದ ಸೌಲಭ್ಯಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ನೀಡಲು ಸಹಾಯಕವಾಗು ತ್ತದೆ. ಮತ್ತೂಂದೆಡೆ ವಿವಿಧ ತರಬೇತಿ ಗಳಿದ್ದಾಗ ಮಾಹಿತಿ ನೀಡಲೂ ಅನು ಕೂಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ