‘ಜೀರ್ಣಾವಸ್ಥೆಯಲ್ಲಿರುವ ದೇಗುಲಗಳ ಅಭಿವೃದ್ಧಿಗೊಳಿಸಿ’
Team Udayavani, May 12, 2018, 4:27 PM IST
ಕಿಲೆಂಜೂರು: ಹೊಸ ದೈವ, ದೇವಸ್ಥಾನ ನಿರ್ಮಿಸುವುದಕ್ಕಿಂತ ಜೀರ್ಣಾವಸ್ಥೆಯಲ್ಲಿರುವ ಹಳೆಯ ದೈವ,
ದೇವಸ್ಥಾನ ಜೀರ್ಣೋದ್ಧಾರಗೊಳಿಸುವುದು ಉತ್ತಮ ಎಂದು ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು ಹೇಳಿದರು.
ಅತ್ತೂರು ಮಾಗಣೆಯ ಗೋಳಿದಡಿ ಸಮೀಪದಲ್ಲಿ ಜೀರ್ಣಾವಸ್ಥೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂರ್ವಭಾವಿಯಾಗಿ ನಡೆದ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರು ಇಲ್ಲಿ ದೇವಸ್ಥಾನ ಇದೆ ಎಂಬ ಬಗ್ಗೆ ಹೇಳುತ್ತಿದ್ದರು. ಅಲ್ಲದೆ ಮಾಗಣೆಯ ಅನೇಕ ಕಡೆಗಳಲ್ಲಿ ಪ್ರಶ್ನೆಗಳಲ್ಲಿ ಈ ದೇವಸ್ಥಾನ ಇದ್ದ ಬಗ್ಗೆ ತಿಳಿದು ಬಂದಿದೆ. ಸರ್ವರ ಸಹಕಾರದಿಂದ ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಬಹುದು ಎಂದರು.
ಅತ್ತೂರಬೈಲು ನಟರಾಜ ಉಡುಪ ಮಾತನಾಡಿ, ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ, ಇದರಿಂದ ನಮ್ಮ ಮಾಗಣೆಯ ಭಕ್ತರ ಸರ್ವ ದೋಷ ನಿವಾರಣೆಯಾಗಲಿದೆ ಎಂದರು.
ಮುಂದಿನ ಮೇ 27 ಮತ್ತು 28ರಂದು ದೈವಜ್ಞ ಪದ್ಮರಾಮ ಶರ್ಮ ಹಾಗೂ ಮಧೂರು ರಂಗ ಭಟ್ಟರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇಡುವ ಬಗ್ಗೆ ತೀರ್ಮಾನಿಸಲಾಯಿತು. ಪ್ರಸನ್ನ ಶೆಟ್ಟಿ ಅತ್ತೂರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶ್ಯಾಮರಾಯ ಶೆಟ್ಟಿ ಗೋಳಿದಡಿ, ಮಹಾಬಲ ಶೆಟ್ಟಿ ಪಡುಮನೆ, ಸುರೇಶ್ ಶೆಟ್ಟಿ ದೇವಸ್ಯ, ಶ್ರೀಧರ ಶೆಟ್ಟಿ ಬಾಂಜಾಲಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ಪ್ರಶಾಂತ್ ಮಾಡರ ಮನೆ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!