ನಗರಕ್ಕೆ ಅರ್ಧ ಲಕ್ಷ ಎಲ್ಇಡಿ ಬಲ್ಬ್ ಅಳವಡಿಸಲು ಬಾಕಿ
ಟೆಂಡರ್ ಪೂರ್ಣ ಅವಧಿ ವಿಸ್ತರಣೆಗೆ ಸಂಸ್ಥೆ ಮನವಿ
Team Udayavani, Nov 26, 2022, 8:43 AM IST
ಮಹಾನಗರ: ಈಗಾಗಲೇ ಎಲ್ ಇಡಿ ಬಲ್ಬ್ ಅಳವಡಿಸಿ ಬೆಳಗಬೇಕಿದ್ದ ನಗರದಲ್ಲಿ ಇನ್ನೂ ಶೇ.90ರಷ್ಟು ಬಲ್ಬ್ ಅಳವಡಿಸಲು ಬಾಕಿ ಇದೆ. ಗಡುವು ಸಮೀಪಿಸುತ್ತಿದ್ದರೂ ಇನ್ನೂ ಆರಂಭಿಕ ಲಕ್ಷಣವೇ ಕಾಣಿಸುತ್ತಿಲ್ಲ. ಈ ಹಂತದಲ್ಲಿ ಮತ್ತೆ ಮೂರು ತಿಂಗಳು ಇಒಟಿ ನೀಡಬೇಕೆಂದು ಗುತ್ತಿಗೆ ಕಂಪೆನಿ ಮಂಗಳೂರು ಪಾಲಿಕೆಯನ್ನು ಕೇಳಿಕೊಂಡಿದೆ.
ಟೆಂಡರ್ ವಹಿಸಿಕೊಂಡ ಸಂಸ್ಥೆಯು ಕೋವಿಡ್ ನೆಪವನ್ನಿಟ್ಟು ಕೆಲವು ತಿಂಗಳ ಹಿಂದೆ ಇಒಟಿ (ಟೆಂಡರ್ ಪೂರ್ಣ ಅವಧಿಯ ವಿಸ್ತರಣೆಗೆ) ಕೇಳಿತ್ತು. ಈ ಕುರಿತಂತೆ ಮಂಗಳೂರು ಪಾಲಿಕೆಯಿಂದ ಕೆಯುಐಡಿಎಫ್ಸಿಗೆ ಪತ್ರ ಬರೆದು ಅನುಮತಿ ಗಿಟ್ಟಿಸಲಾಗಿತ್ತು. ಬಳಿಕ ಟೆಂಡರ್ ವಹಿಸಿದ ಸಂಸ್ಥೆಯು ಹಣಕಾಸಿನ ವ್ಯವಸ್ಥೆ ಮಾಡಿ ಕಾಮಗಾರಿ ಆರಂಭಿಸಬೇಕಿತ್ತು. ಮೂರು ತಿಂಗಳ ಇಒಟಿ ಅವಧಿ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇನ್ನೂ ಹಣಕಾಸು ಹೊಂದಿಸಲಾಗಿಲ್ಲ. ಇದೀಗ ಮತ್ತೆ ಮೂರು ತಿಂಗಳು ಇಒಟಿಯನ್ನು ಕೇಳಲಾಗಿದೆ.
ಈ ಯೋಜನೆಯ ಪ್ರಕಾರ 60 ಕೋಟಿ ರೂ. ವೆಚ್ಚದಲ್ಲಿ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದೆ. ನಗರದ 60 ವಾರ್ಡ್ ಗಳಲ್ಲಿ ಸುಮಾರು 66,000 ಎಲ್ಇಡಿ ಬೀದಿ ದೀಪ ಅಳವಡಿಸಬೇಕು. 2021ರ ಡಿಸೆಂಬರ್ ತಿಂಗಳಾಂತ್ಯಕ್ಕೆ ಅಳವಡಿಕೆ ಪೂರ್ಣಗೊಳ್ಳಬೇಕು. ಟೆಂಡರ್ ವಹಿಸಿದ ಸಂಸ್ಥೆ 7 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು. ಅದಕ್ಕೆಂದು 7 ವರ್ಷಗಳವರೆಗೆ ಪಾಲಿಕೆಯಿಂದ ತಿಂಗಳಿಗೆ ಸುಮಾರು 80 ಲಕ್ಷ ರೂ. ಇಎಂಐ ಸಂದಾಯವಾಗಲಿದೆ. ಆದರೆ ಗುತ್ತಿಗೆ ಅವಧಿ ಪೂರ್ಣಗೊಂಡು ವರ್ಷ ಸಮೀಪಿಸುತ್ತಿದೆ. ಆಯ್ದ ವಾರ್ಡ್ ಗಳಲ್ಲಿ ಸುಮಾರು 14,000 ಬೀದಿ ದೀಪ ಮಾತ್ರ ಅಳವಡಿಸಲಾಗಿದೆ. ಹಣಕಾಸಿನ ಮುಗ್ಗಟ್ಟು, ಉಪಕರಣದ ಕೊರತೆ ಸಹಿತ ವಿವಿಧ ನೆಪದಿಂದ ಕಾಮಗಾರಿ ಸದ್ಯಕ್ಕೆ ನಿಂತಿದೆ.
ಸದ್ಯದಲ್ಲಿ ಸಚಿವರ ಜತೆ ಮೀಟಿಂಗ್
ಮಂಗಳೂರಿನಲ್ಲಿ ಎಲ್ಇಡಿ ಬಲ್ಬ್ ಅಳವಡಿಸುವ ಸಂಬಂಧ ಪಾಲಿಕೆ ಮತ್ತು ಗುತ್ತಿಗೆ ವಹಿಸಿದ ಸಂಸ್ಥೆಯೊಂದಿಗೆ ಸದ್ಯದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರೊಂದಿಗೆ ಮಾತುಕತೆ ನಡೆಯಲಿದೆ. ಮುಂದಿನ ಗಡುವು ನೀಡುವುದು ಸಹಿತ ಎಲ್ಇಡಿ ಅಳವಡಿಕೆಗೆ ಇರುವ ತೊಡಕುಗಳ ಕುರಿತು ಸಭೆಯಲ್ಲಿ ಪ್ರಸ್ತಾವವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ