ಕುಂಡಡ್ಕ: ಮಾತೆಯರಿಂದ ಕುಂಕುಮಾರ್ಚನೆ
Team Udayavani, Feb 9, 2019, 9:25 AM IST
ವಿಟ್ಲಮುಟ್ನೂರು : ಕುಳ, ವಿಟ್ಲ ಮುಟ್ನೂರು ಗ್ರಾಮಗಳ ವಿಷ್ಣುನಗರ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಮತ್ತು ಶ್ರೀ ಮಲರಾಯ- ಮೂವರ್ ದೈವಂಗಳ ದೈವಸ್ಥಾನ ಶಿಬರಿಕಲ್ಲ ಮಾಡದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭ ಸಹಸ್ರಾರು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.
ಸಭಾಂಗಣದಲ್ಲಿ ಊರಿನ ಎಲ್ಲ ಮಾತೆಯರೂ ಸಮವಸ್ತ್ರ ಧರಿಸಿ ಕುಂಕುಮಾರ್ಚನೆ ನಡೆಸಿದರೆ, ಪರವೂರ ಮಾತೆಯರು ಸೇರಿ ಸಹಸ್ರಾರು ಸಂಖ್ಯೆಯ ಕುಂಕುಮಾರ್ಚನೆ ನೆರವೇರಿಸಿದರು.
ಯಜ್ಞ-ಯಾಗಾದಿಗಳು
ಬ್ರಹ್ಮಕಲಶ ನಿಮಿತ್ತ ಪ್ರತಿದಿನವೂ ದೇಗುಲದ ಸುತ್ತಲೂ ಯಜ್ಞ-ಯಾಗಾದಿ ಗಳು ನಡೆಯುತ್ತಿವೆ. ಗಣಪತಿ ಹವನ, ರಾಮತಾರಕ ಹವನ, ವಿಷ್ಣುಸಹಸ್ರನಾಮ ಹವನ, ಲಲಿತಾಸಹಸ್ರನಾಮ ಹವನ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಭಾಗವತ, ದೇವೀ ಭಾಗವತ, ರಾಮಾಯಣ, ವಿಷ್ಣು ಪುರಾಣ, ಸಪ್ತಸತೀ ಪಾರಾಯಣ, ಭಜನೆ ನಡೆಯುತ್ತಿದೆ. ಬುಧವಾರ ಮೃತ್ಯುಂ ಜಯ ಹವನ, ಗುರುವಾರ ಮನ್ಯುಸೂಕ್ತ ಹವನ, ಚಂಡೀ ಜಪ, ಶುಕ್ರವಾರ ನವಚಂಡೀ ಹವನ ನೆರವೇರಿಸಲಾಗಿದೆ.
ಬಸ್ ವ್ಯವಸ್ಥೆ
ಬ್ರಹ್ಮಕಲಶ ಪ್ರಯುಕ್ತ ಕೆಎಸ್ಆರ್ಟಿಸಿ ಬಸ್ಗಳ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಫೆ. 6ರಿಂದ ಪುತ್ತೂರು, ಬಿ.ಸಿ. ರೋಡ್ ಘಟಕಗಳಿಂದ 3 ವಿಶೇಷ ಬಸ್ಸುಗಳು ಸಂಚರಿ ಸುತ್ತಿವೆ. ಪುತ್ತೂರು ವಯಾ ಬಪ್ಪಳಿಗೆ, ಕರ್ಕುಂಜ, ವಿನಾಯಕ ನಗರ, ಬಲ್ನಾಡು, ಉಜ್ರುಪಾದೆ, ಬೇರಿಕೆ, ಕುಂಡಡ್ಕ, ಬದನಾಜೆ, ಕಬಕ, ಪೋಳ್ಯ ಮಾರ್ಗವಾಗಿ ಬೆಳಗ್ಗೆ 11ರಿಂದ ರಾತ್ರಿ 10.30ರ ತನಕ ಒಂದೂ ಕಾಲು ಗಂಟೆಗೊಮ್ಮೆ ಪುತ್ತೂರಿ ನಿಂದ ಹೊರಟು, 1 ಗಂಟೆ ಪ್ರಯಾಣ ಮಾಡಿ ಕುಂಡಡ್ಕಕ್ಕೆ, ಕುಂಡಡ್ಕದಿಂದ 1 ಗಂಟೆ ಬಳಿಕ ಮತ್ತೆ ಪುತ್ತೂರು ಸೇರಲಿದೆ.
ಮೈಸೂರು ಅರಮನೆಯ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಉಪಸ್ಥಿತಿಯಲ್ಲಿ ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಪುಂಡಿಕಾೖ ಗಣಪತಿ ಭಟ್ ಅವರು ಅರಸು ಮನೆತನ-ವಿಟ್ಲ ಸೀಮೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ