ಪಠ್ಯ ಪರಿಷ್ಕರಣೆಗೆ ತಾತ್ವಿಕ ವಿರೋಧ: ರೋಹಿತ್ ಚಕ್ರತೀರ್ಥ
Team Udayavani, Jun 24, 2023, 7:10 AM IST
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಗೆ ನೀತಿ ನಿಯಮವಿದೆ. ಆದರೆ, ಈ ನಿಯಮಗಳನ್ನು ಉಲ್ಲಂಘಿಸಿ ಸರ್ವಾಧಿಕಾರ ಧೋರಣೆ ಮೂಲಕ ಪಠ್ಯಗಳನ್ನು ರಾಜ್ಯ ಸರಕಾರ ಬದಲಾಯಿಸುತ್ತಿರುವುದನ್ನು ತಾತ್ವಿಕವಾಗಿ ವಿರೋಧ ಮಾಡುವುದಾಗಿ ಪಠ್ಯ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಠ್ಯ ಪರಿಷ್ಕರಣ ಸಮಿತಿ ಮಾಡಿ ನಾಲ್ಕಾರು ಶಿಕ್ಷಣ ತಜ್ಞರನ್ನು ಕೂರಿಸಿ ಚರ್ಚಿಸಿದ ಬಳಿಕ ಪಠ್ಯ ತೆಗೆಯುವುದು ಮತ್ತು ಸೇರ್ಪಡೆ ಮಾಡಬೇಕು. ಆದರೆ, ಏಕಾಏಕಿ ಸಾವರ್ಕರ್ ಪಠ್ಯವನ್ನು ಏಕೆ ತೆಗೆದಿದ್ದಾರೆ ಗೊತ್ತಿಲ್ಲ. ರಾಷ್ಟ್ರ ಪ್ರೇಮಿ ಭಗತ್ ಸಿಂಗ್ ಪಠ್ಯವನ್ನು ತೆಗೆಯುವ ಮೂಲಕ ದೇಶಪ್ರೇಮಿಗಳ ವಿರುದ್ಧವಿದ್ದೇವೆ ಎಂಬುದನ್ನು ರಾಜ್ಯ ಸರಕಾರ ತೋರಿಸಿದೆ. ಒಂದು ಪಕ್ಷದ ವಿರುದ್ಧ ಕೆಲಸ ಮಾಡುವ ಸಲುವಾಗಿ ಮಕ್ಕಳ ಬೌದ್ಧಿಕತೆ ಹೆಚ್ಚಿಸುವ ಪಠ್ಯಗಳನ್ನು ತೆಗೆಯುತ್ತಿದ್ದಾರೆ. ತೆಗೆಯುವ ಮುನ್ನ ಈ ಪಠ್ಯಗಳಲ್ಲಿ ಏನು ಲೋಪವಿದೆ ಎಂದು ಹೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಠ್ಯ ಪರಿಷ್ಕರಣೆಯನ್ನು ಅಂದಿನ ಸರಕಾರದ ಆದೇಶದ ಮೇರೆಗೆ ಸಮಿತಿ ರಚಿಸಿ ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿತ್ತು. ಆದರೆ, ಇವರು ಯಾವ ಆಧಾರದ ಮೇಲೆ ಬದಲಾವಣೆ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾವು ಮಾಡಿರುವ ಪಠ್ಯಗಳಲ್ಲಿ ಯಾವುದೇ ಲೋಪವಿದ್ದರೂ ಯಾವುದೇ ವೇದಿಕೆ ಅಥವಾ ಸಭೆಗೆ ನನ್ನ ಕರೆದರೆ ಆ ಚರ್ಚೆಯಲ್ಲಿ ನಾನು ಭಾಗಿಯಾಗಲೂ ಸಿದ್ಧನಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು
MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು
DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್ಡಿಕೆ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು