ರುಚಿಕರವಾದ ಅಡುಗೆ…ಶುಂಠಿ ತಂಬುಳಿ, ಶುಂಠಿ ಬರ್ಫಿ ಮಾಡೋದು ಹೇಗೆ?
ಶ್ರೀರಾಮ್ ನಾಯಕ್, May 28, 2020, 8:07 PM IST
ಶುಂಠಿಯ ರುಚಿ ಎಷ್ಟು ತೀಕ್ಷ್ಣವೋ ಪರಿಮಳವೂ ಅಷ್ಟೇ ಆಕರ್ಷಕ. ಆರೋಗ್ಯ ದೃಷ್ಟಿಯಿಂದ ಅಲ್ಲದೆ ಅಡುಗೆಯ ರುಚಿಯಲ್ಲೂ ವಿಶೇಷ ಸ್ಥಾನ ಪಡೆದ ಶುಂಠಿಯು ಬರೀ ಆಯುರ್ವೇದ ವೈದ್ಯರು ಮಾತ್ರವಲ್ಲ ಇಂದು ಅಲೋಪತಿ ವೈದ್ಯ ಪದ್ಧತಿಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಕ್ಯಾಲ್ಸಿಯಂ ಅಂಶ ಜಾಸ್ತಿ ಇರುವುದರಿಂದ ಬಾಣಂತಿಯರಿಗೂ ಇದು ತುಂಬಾನೇ ಒಳ್ಳೆಯದು. ಎಲ್ಲೆಂದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಶೀತಬಾಧೆ ಸರ್ವೆ ಸಾಮಾನ್ಯ ಇದನ್ನು ತಡೆಗಟ್ಟಲು ಹಾಗೂ ನಿವಾರಣೆಗೆ ದಿನನಿತ್ಯದ ಆಹಾರದಲ್ಲಿ ಅಡುಗೆಯ ಮೂಲಕ ಶುಂಠಿ ಬಳಕೆ ಒಳ್ಳೆಯದು. ಸಿಹಿತಿಂಡಿಯಲ್ಲೂ ಶುಂಠಿಯನ್ನು ಬಳಸುವುದು ನಮ್ಮ ಅಡುಗೆಯ ವಿಶೇಷತೆ. ಆದ್ದರಿಂದ ಶುಂಠಿ ಪ್ರಧಾನವಾಗಿರುವ ಕೆಲವೊಂದು ರುಚಿಕರವಾದ ಅಡುಗೆಯನ್ನು ನೀವೂ ಮನೆಯಲ್ಲೇ ಮಾಡಿ ನೋಡಿ ಸವಿಯಿರಿ.
ಶುಂಠಿ ತಂಬುಳಿ
ತುಂಬುಳಿ ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ಸವಿದರೆ ಆರೋಗ್ಯಕ್ಕೆ ಒಳ್ಳೆಯದು .ಮನೆಯಲ್ಲಿ ಇರುವ ಸಾಮಗ್ರಿಗಳೊಂದಿಗೆ ಈ ತಂಬುಳಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ತೆಂಗಿನ ಕಾಯಿ ತುರಿ 1 ಕಪ್, ಹಸಿ ಶುಂಠಿ 1 ಸಣ್ಣ ತುಂಡು, ಮೊಸರು 1 ಕಪ್,ಜೀರಿಗೆ ಸ್ವಲ್ಪ, ಕರಿಬೇವು ಸೊಪ್ಪು 2ರಿಂದ 4, ಸಾಸಿವೆ ಸ್ವಲ್ಪ, ರುಚಿಗೆ ಉಪ್ಪು.
ತಯಾರಿಸುವ ವಿಧಾನ
ತೆಂಗಿನ ತುರಿ,ಶುಂಠಿಯನ್ನು ಸಣ್ಣಗೆ ರುಬ್ಬಿರಿ. ತದನಂತರ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕರಿಬೇವು, ಜೀರಿಗೆ, ಸಾಸಿವೆ ಒಗ್ಗರಣೆ ಕೊಟ್ಟರೆ ರುಚಿಯಾದ ಆರೋಗ್ಯಕರ ಶುಂಠಿ ತಂಬುಳಿ ಅನ್ನದ ಜೊತೆ ಸವಿಯಲು ಸಿದ್ಧ.
ಶುಂಠಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಮೈದಾ ಅಥವಾ ಗೋಧಿ ಹಿಟ್ಟು 1 ಕಪ್, ತುಪ್ಪ 1/2 ಕಪ್,ಶುಂಠಿ ರಸ ಸ್ವಲ್ಪ, ಹಾಲಿನ ಕೆನೆ 1/4 ಕಪ್,ಸಕ್ಕರೆ 2 ಕಪ್
ತಯಾರಿಸುವ ವಿಧಾನ
ಮೈದಾ ಅಥವಾ ಗೋಧಿಯನ್ನು ತುಪ್ಪದಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಸಕ್ಕರೆ ನೂಲು ಪಾಕ ಮಾಡಿಟ್ಟು ಕೊಳ್ಳಿ. ಅದಕ್ಕೆ ಶುಂಠಿ ರಸ, ಹಾಲಿನ ಕೆನೆ, ಹುರಿದಿಟ್ಟ ಮೈದಾ/ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ. ಬಾಣಲೆಯಿಂದ ತಳಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಿದ ಮೇಲೆ ಕತ್ತರಿಸಿ ಸವಿಯಿರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Jammu Kashmir: ಗುಲ್ ಮಾರ್ಗ್, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…
ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ
Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
MUST WATCH
ಹೊಸ ಸೇರ್ಪಡೆ
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!