WhatsApp: ಇನ್ನು ವಾಟ್ಸ್ಆ್ಯಪ್ ಸಂದೇಶಗಳು ಗೂಗಲ್ನಲ್ಲಿ ಉಚಿತವಾಗಿ ಸಂಗ್ರಹವಾಗಲ್ಲ!
ಬ್ಯಾಕಪ್ ಆಯ್ಕೆಯಡಿ ಸಂದೇಶ ಜಿ-ಡ್ರೈವ್ನಲ್ಲಿ ಉಳಿಯುತ್ತಿದ್ದ ಅವಕಾಶ ಈ ವರ್ಷ ರದ್ದು
Team Udayavani, Jan 2, 2024, 10:05 PM IST
ನವದೆಹಲಿ: ವಾಟ್ಸ್ಆ್ಯಪ್ ಮತ್ತು ಗೂಗಲ್ಗೆ ನಾವು ಎಷ್ಟರಮಟ್ಟಿಗೆ ಅಂಟಿಕೊಂಡಿದ್ದೇವೆಂದು ನಮಗೆ ಚೆನ್ನಾಗಿ ಗೊತ್ತು. ಇಂತಹ ಹೊತ್ತಿನಲ್ಲಿ ಗೂಗಲ್ ಮತ್ತು ವಾಟ್ಸ್ಆ್ಯಪ್ಗ್ಳು ಸಣ್ಣದೊಂದು ಆಘಾತಕಾರಿ ಬದಲಾವಣೆ ಬಗ್ಗೆ ಮಾಹಿತಿ ನೀಡಿವೆ. ಇಲ್ಲಿಯವರೆಗೆ ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರು; ಗೂಗಲ್ ಡ್ರೈವ್ನಲ್ಲಿ ವಾಟ್ಸ್ಆ್ಯಪ್ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಬ್ಯಾಕಪ್ ಆಯ್ಕೆಯಡಿ ಉಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಅವಕಾಶವಿತ್ತು. 2024ರ ಪ್ರಸ್ತುತ ವರ್ಷದಲ್ಲಿ ಈ ಆಯ್ಕೆ ರದ್ದಾಗಲಿದೆ. ಅರ್ಥಾತ್ ನೀವಿನ್ನು ಗೂಗಲ್ಗೆ ಹಣ ನೀಡಿ ಸ್ಥಳ ಖರೀದಿಸಬೇಕಾಗುತ್ತದೆ! ಹಾಗಂತ ಗಾಬರಿಯಾಗಬೇಡಿ, ಮಾಹಿತಿ ಉಳಿಸಿಕೊಳ್ಳಲು ನಿಮ್ಮ ಮುಂದೆ ಹಲವು ಆಯ್ಕೆಗಳಿವೆ.
ಇಲ್ಲಿಯವರೆಗೇನಿತ್ತು?:
ಗೂಗಲ್ ಡ್ರೈವ್ನಲ್ಲಿ ನಮ್ಮ ವಾಟ್ಸ್ಆ್ಯಪ್ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಬ್ಯಾಕಪ್ ಆಯ್ಕೆಯಡಿ ಸಹಜವಾಗಿ ಉಳಿಸಿಕೊಳ್ಳಬಹುದಿತ್ತು. ಇದಕ್ಕಾಗಿ ನಾವು, ನಮಗೆ ಗೂಗಲ್ ನೀಡಿರುವ ಉಚಿತ 15 ಜಿಬಿಯನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ಇನ್ನು ಮುಂದೆ ನಾವು ಸಂದೇಶಗಳನ್ನು ಕಾಪಿಟ್ಟುಕೊಳ್ಳಲು ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಒಂದು ತಿಂಗಳು ಮುಂಚಿತವಾಗಿಯೇ ವಾಟ್ಸ್ಆ್ಯಪ್ ನಮಗೆ ಸಂದೇಶಗಳನ್ನು ಕಳುಹಿಸಿ ಈ ಬಗ್ಗೆ ಎಚ್ಚರಿಸಲಿದೆ.
ಮುಂದೇನು ಮಾಡಬಹುದು?
1. ವಾಟ್ಸ್ಆ್ಯಪ್ನ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ, ಅಲ್ಲಿ ಸ್ಟೋರೇಜ್ ಆ್ಯಂಡ್ ಡಾಟಾಕ್ಕೆ ಹೋಗಬೇಕು. ಅಲ್ಲಿ ಮ್ಯಾನೇಜ್ ಸ್ಟೋರೇಜನ್ನು ಆಯ್ದುಕೊಳ್ಳಬೇಕು. ಇದರ ಮೂಲಕ ಗೂಗಲ್ ಖಾತೆಗಳಲ್ಲಿ ನಿಮಗೆ ಉಚಿತವಾಗಿರುವ 15 ಜಿಬಿ ಸ್ಥಳಕ್ಕೆ ಮಾಹಿತಿಗಳನ್ನು ರವಾನಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.
2. ವಾಟ್ಸ್ಆ್ಯಪ್ನಲ್ಲಿ ಸ್ಟೋರೇಜ್ ರಿವ್ಯೂ ಆಯ್ಕೆಯಡಿ ಎಷ್ಟು ದತ್ತಾಂಶವನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಯಬಹುದು. ಒಂದು ವೇಳೆ ಗೂಗಲ್ಗೆ ಹಣ ಪಾವತಿಸಲು ಬಯಸುವುದಿಲ್ಲವಾದರೆ, ವಾಟ್ಸ್ಆ್ಯಪ್ ಚಾಟ್ ಟ್ರಾನ್ಸ್ಫರ್ ಆಯ್ಕೆಯಡಿ ಮಾಹಿತಿಗಳನ್ನು ಆ್ಯಂಡ್ರಾಯ್ಡ ಆ್ಯಪ್ಗಳಿಗೆ ಕಳಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?