ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ…

ಇಂದು ವಿಶ್ವ ಸಂಗೀತ ದಿನ

Team Udayavani, Jun 21, 2021, 6:30 AM IST

ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ…

ಸಂಗೀತವೆಂದರೆ ಒಂದು ಅದ್ಭುತ. ಅದಕ್ಕೆ ವಯೋಮಾನದ ಭೇದಭಾವವಿಲ್ಲ. ಅದನ್ನು ಎಲ್ಲರೂ ಕೇಳಬಹುದು, ಆನಂದಿಸಬಹುದು. ರಾಗ ತಾಳದ ಸಂಯೋಜನೆಯ ಜತೆಗೆ ಮನಸ್ಸಿನ ಆಲಾಪ ಮೊಳಗುವಾಗ ಎಲ್ಲೆಲ್ಲೂ ಸಂಗೀತವೇ ಕೇಳಿಸುತ್ತದೆ. ಯೋಗ ಮತ್ತು ಸಂಗೀತವೆರಡು ಒಳ್ಳೆಯ ಸ್ನೇಹಿತರೂ ಕೂಡ. ಯೋಗ ಆರೋಗ್ಯ ಕಾಪಾಡಿದರೆ, ಸಂಗೀತ ಚೈತನ್ಯ ತುಂಬುತ್ತದೆ. ನೇರವಾಗಿ ಹೇಳುವುದಾದರೆ ಇವೆರಡಕ್ಕೂ ಅವಿನಾಭಾವ ಸಂಬಂಧ. ಈ ಕಾರಣದಿಂದಲೋ ಏನೋ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನಗಳೆರಡೂ ಜೂ. 21ರಂದೇ ಆಚರಿಸಲ್ಪಡುತ್ತಿರುವುದು.

ನಮ್ಮಲ್ಲಿ ಹೊಸತನ ಮೂಡಿಸಲು, ನೋವಿನಲ್ಲೂ ಖುಷಿ ನೀಡಲು ಸಂಗೀತ ಒಂದು ಮಂತ್ರದಂಡವಿದ್ದಂತೆ. ಸಂಗೀತಕ್ಕೆ ಪೊಡವಿಗೊಡೆಯ ಶ್ರೀಕೃಷ್ಣನೇ ಮನಸೋತಿರುವಾಗ ಸಂಗೀತ ಕ್ಕಿರುವ ಶಕ್ತಿ, ಸೆಳೆತದ ಅಗಾಧತೆ ನಮ್ಮ ಅರಿವಿಗೆ ಬರಲು ತುಸು ಕಷ್ಟಸಾಧ್ಯವೇ. ಹೀಗಾಗಿಯೇ ಏನೋ ಸಂಗೀತ ದೇವರ ಭಾಷೆ ಎನ್ನುವುದು. ಸಂಗೀತಕ್ಕೆ ಸ್ಪಷ್ಟವಾದ ವ್ಯಾಖ್ಯಾನಗಳಿಲ್ಲ. ಅವು ಮನಸ್ಸಿನಿಂದ ಮನಸ್ಸಿಗೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರಬಹುದು. ಏಕೆಂದರೆ ಜಾನಪದದಿಂದ ಹಿಡಿದು ಇಂದಿನ ಪಾಶ್ಚಾತ್ಯ ಸಂಗೀತದವರೆಗೆ ಎಲ್ಲವೂ ಒಂದೇ, ಆದರೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ತನ್ನದೇ ಆದ ರೂಪವನ್ನು ಪಡೆಯುತ್ತವೆ. ರೂಪ ಯಾವುದಾದರೂ ಏನು? ಎಲ್ಲ ಸಂಗೀತವೂ ಸ್ಪುರಿಸುವ ಭಾವನೆ ಒಂದೇ. ಆದರೆ ಇದು ಸಂಗೀತವನ್ನು ಆಸ್ವಾದಿಸುವವರನ್ನು ಅವಲಂಬಿಸಿರುತ್ತದೆ ಅಷ್ಟೆ.

ವಿಶ್ವ ಸಂಗೀತ ದಿನದ ಹಿನ್ನೆಲೆ: ವಿಶ್ವ ಸಂಗೀತ ದಿನಾಚರಣೆಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. 1982 ಜೂನ್‌ 21ರಂದು ಪ್ಯಾರಿಸ್‌ನಲ್ಲಿ ಮೊದಲ ಬಾರಿಗೆ ಸಂಗೀತ ದಿನವನ್ನು ಆಚರಿಸಲಾಯಿತು. ಜ್ಯಾಕ್‌ ಲ್ಯಾಂಗ್‌ ಮತ್ತು ಮಾರಿಸ್‌ ಪ್ಲ್ಯುರೆಟ್‌ ಅವರ ಸಹಕಾರದೊಂದಿಗೆ ಫ್ರೆಂಚ್‌ ಸಂಸ್ಕೃತಿ ಇಲಾಖೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಂತೆ ಮೊದಲ ಬಾರಿಗೆ ಅಮೆರಿಕನ್‌ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅದಾದ ಬಳಿಕ ವಿಶ್ವಾದ್ಯಂತ ಪ್ರತೀ ವರ್ಷ ಜೂ. 21ರಂದು ವಿಶ್ವ ಸಂಗೀತ ದಿನವನ್ನು ಆಚರಿಸುತ್ತ ಬರಲಾಗಿದೆ. ಸದ್ಯ ವಿಶ್ವದ 120 ದೇಶಗಳಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ. ಎಲ್ಲ ಸಂಗೀತ ಕಲಾವಿದರಿಗೆ, ಸಂಗೀತ ಪ್ರೇಮಿಗಳಿಗೆ ಗೌರವ ಸಲ್ಲಿಸುವುದೇ ಈ ದಿನಾಚರಣೆಯ ಉದ್ದೇಶ.

ಮಾನಸಿಕ ಖನ್ನತೆ ದೂರ: ಮಾನವ ಸ್ವಭಾವಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ ಎಂಬುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಅನೇಕ ರೋಗಗಳನ್ನು ಸಂಗೀತದಿಂದ ಗುಣಪಡಿಸಬಹುದು ಎಂಬುದು ತಜ್ಞರ ಅಭಿಪ್ರಾಯ ಕೂಡ. ಅಲ್ಲದೆ ಸಂಗೀತದಿಂದ ಮಾನಸಿಕ ಖನ್ನತೆಗೆ ಒಳಗಾದವರು ತಮ್ಮ ಮಾನಸಿಕ ಸ್ಥಿತಿ ಸುಧಾರಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಸಂಗೀತಕ್ಕೆ ಪ್ರಾಣಿಗಳೂ ಕಿವಿಗೊಡುತ್ತವೆ ಮಾತ್ರವಲ್ಲದೆ ಅವುಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಇವೆಲ್ಲವೂ ಸಂಗೀತದ ಮಾಂತ್ರಿಕ ಶಕ್ತಿಯ ಕೆಲವು ಉದಾಹರಣೆಗಳಷ್ಟೆ.

ಇತ್ತೀಚೆಗಂತೂ ಸಂಗೀತದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ನಾವು ಕಾಣುತ್ತಿದ್ದು ಹೊಸತನದ ತುಡಿತ ಗಳಿಗೆ ಸಾಕ್ಷಿಯಾಗಿದೆ. ವಿಭಿನ್ನ ಮನೋಭಾವದವರನ್ನೂ ತನ್ನತ್ತ ಸೆಳೆಯುವಲ್ಲಿ ಸಂಗೀತ ಸಫ‌ಲವಾಗಿದೆ. ಸಂಗೀತ ಕೂಡ ಕಾಲಚಕ್ರ ಉರುಳಿದಂತೆ ಬದಲಾವಣೆಗಳಿಗೆ ಹೊಂದಿಕೊಂಡು ಸಾಗಿದೆ. ಈ ಕಾರಣದಿಂದಾಗಿಯೇ ಸಂಗೀತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯೇನಲ್ಲ.

– ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.