ಇಮೇಜ್ ಬದಲಿಸುವ ಸಿನ್ಮಾ


Team Udayavani, Apr 2, 2018, 11:16 AM IST

huchcha2.jpg

“ಡಾರ್ಲಿಂಗ್‌ ಡಾರ್ಲಿಂಗ್‌ ಕಮ್‌ ಕಮ್‌ ಡಾರ್ಲಿಂಗ್‌…’ ಈ ಹಾಡು ಕೇಳಿದವರಿಗೆ ಹಾಗೊಮ್ಮೆ ಹೀರೋ “ಮದರಂಗಿ’ ಕೃಷ್ಣ ಅವರ ನೆನಪಾಗದೇ ಇರದು. ಬಹಳ ದಿನಗಳ ಬಳಿ ಕೃಷ್ಣ ಪುನಃ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣ, “ಹುಚ್ಚ 2′. ಹೌದು, ಓಂ ಪ್ರಕಾಶ್‌ರಾವ್‌ ನಿರ್ದೇಶನದ ಈ ಚಿತ್ರದಲ್ಲಿ ಮದರಂಗಿ ಕೃಷ್ಣ ಹೀರೋ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಕಾಣುತ್ತಿದೆ. “ಹುಚ್ಚ 2′ ಪಾತ್ರದ ಕುರಿತು ಸ್ವತಃ ಕೃಷ್ಣ ಅವರು ಉದಯವಾಣಿಯ “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

* ನಿಮ್ಮ “ಹುಚ್ಚ 2′ ಜರ್ನಿ ಬಗ್ಗೆ ಹೇಳಿ?
ನನಗೆ ಈ ಅವಕಾಶ ಬಂದಾಗ, ನಿರ್ದೇಶಕರು ಒಂದು ಹೊಟೇಲ್‌ಗೆ ಕರೆಸಿ ಕಥೆ ಹೇಳಿದ್ರು. ಟೈಟಲ್‌ ಏನು ಅಂದಾಗ, “ಹುಚ್ಚ 2′ ಅಂದ್ರು. ಆಗ ಗಾಬರಿಯಾಗಿದ್ದಂತೂ ನಿಜ. ಯಾಕಂದ್ರೆ, “ಹುಚ್ಚ’ ಅನ್ನೋದೇ ಒಂದು ಪವರ್‌ಫ‌ುಲ್‌ ಟೈಟಲ್‌. ಅದರಲ್ಲೂ ಆ ಹೆಸರು ಕೇಳಿದೊಡನೆ ಸುದೀಪ್‌ ಸರ್‌ ನೆನಪಾಗುತ್ತೆ. ಅಂಥದ್ದೊಂದು ಟೈಟಲ್‌ನಡಿ ಸಿನಿಮಾ ಮಾಡುವಾಗ, ಎಲ್ಲರಿಗೂ ನಿರೀಕ್ಷೆ ಇದ್ದೇ ಇರುತ್ತೆ. ಆ ಜವಾಬ್ದಾರಿ ನನಗ‌ೂ ಇತ್ತು. ಮೊದಲ ದಿನದ ಚಿತ್ರೀಕರಣದಲ್ಲೇ ಗೊಂದಲವಿತ್ತು. ಒಂದಷ್ಟು ಎಡವಟ್ಟು ಆಗೋಯ್ತು. ಸುಮಾರು 25 ಟೇಕ್‌ ತಗೊಂಡೆ. ಎಲ್ಲೋ ಒಂದು ಕಡೆ ನನಗೆ ಆ್ಯಕ್ಟಿಂಗ್‌ ಬರಲ್ವಾ ಅಥವಾ ಆ ಪಾತ್ರ ನಿರ್ವಹಿಸೋಕೆ ಆಗ್ತಾ ಇಲ್ವಾ ಎಂಬ ಪ್ರಶ್ನೆ ಕಾಡಿತು. ಅಷ್ಟೊಂದು ಪಕ್ವತೆ ಬರೋವರೆಗೂ ನಿರ್ದೇಶಕರು ಬಿಡಲಿಲ್ಲ. ಎರಡನೇ ದಿನದಿಂದ ಪಾತ್ರಕ್ಕೆ ಹೊಂದಿಕೊಂಡೆ. ಅದೊಂದು ಮರೆಯಲಾಗದ ಜರ್ನಿ.

* ನಿಮ್ಮ ಪಾತ್ರ ತುಂಬಾ ವಿಚಿತ್ರವಾಗಿದೆಯಂತಲ್ಲಾ?
ಹೌದು, ಅದೊಂದು ಅಬ್‌ನಾರ್ಮಲ್‌ ಹುಡುಗನ ಪಾತ್ರ. ಹುಟ್ಟಿದಾಗಿನಿಂದಲೂ ಅವನೊಂಥರಾ ವಿಚಿತ್ರ ಮ್ಯಾನರಿಸಂ ಹುಡುಗ. ಆ ಪಾತ್ರಕ್ಕೆ  ಓವರ್‌ ಮಾಡಂಗಿಲ್ಲ. ನೋಡಿದವರು ಇನ್ನೇನೋ ಅಂದುಕೊಳ್ಳುತ್ತಾರೆ ಎಂಬ ಭಯವಿತ್ತು. ಇನ್ನು, ಅಂಡರ್‌ಪ್ಲೇ ಕೂಡ ಮಾಡಂಗಿಲ್ಲ. ಅದಕ್ಕೆ ಇನ್ನೊಂದು ಭಯ ಕಾಡುತ್ತಿತ್ತು. ನಿರ್ದೇಶಕರು ಪ್ರತಿಯೊಂದು ದೃಶ್ಯದಲ್ಲೂ ಹೀಗೇ ಇರಬೇಕು, ಹೀಗೇ ಬರಬೇಕು ಅಂತ ಸ್ವತಃ ಆ್ಯಕ್ಟ್ ಮಾಡಿ ತೋರಿಸೋರು. ಸಂಜೆಯಾಗುತ್ತಿದ್ದಂತೆಯೇ, ಇವತ್ತು ನಿಮ್ಮ ನಟನೆ ಚೆನ್ನಾಗಿತ್ತು. ನೀವು ಒಳ್ಳೇ ಆರ್ಟಿಸ್ಟ್‌ ಅನ್ನುವ  ಕಾರಣಕ್ಕೆ ನಾನು ಹಾಕಿಕೊಂಡೆ ಅಂತ ಹೇಳ್ಳೋರು. ಮರುದಿನ ನಾನು ಒಳ್ಳೇ ಆರ್ಟಿಸ್ಟ್‌ ಅನ್ನುವುದನ್ನು ಸಾಬೀತುಪಡಿಸಬೇಕಿತ್ತು. ಹಾಗಾಗಿ, ಆ ಪಾತ್ರವನ್ನು ತುಂಬಾ ಜೀವಿಸಿ ಮಾಡಿದ್ದೇನೆ. 

* ಓಂ ಪ್ರಕಾಶ್‌ರಾವ್‌ ಅವರ ಜೊತೆಗಿನ ಕೆಲಸ ಹೇಗಿತ್ತು?
ನಿಜವಾದ ಚಿತ್ರೀಕರಣ ಅಂದರೆ, ಓಂ ಪ್ರಕಾಶ್‌ರಾವ್‌ ನಿರ್ದೇಶನದಲ್ಲಿ ಗೊತ್ತಾಯ್ತು. ಶೂಟಿಂಗ್‌ ಟೈಮ್‌ ಅಂದರೆ ಟೈಮ್‌. ಹಿರಿಯ ನಿರ್ದೇಶಕರು ಅಷ್ಟೇ ಜೋಶ್‌ನಿಂದ ಕೆಲಸ ಮಾಡೋರು. ಬೇರೆ ಸಿನಿಮಾ ಮಾಡುವಾಗ ಮುಂದಿನ ಚಿತ್ರ ಯಾವುದು ಅಂತಂದಾಗ, “ಹುಚ್ಚ 2′ ಮಾಡುತ್ತಿದ್ದೇನೆ. ಓಂ ಪ್ರಕಾಶ್‌ರಾವ್‌ ನಿರ್ದೇಶಕರು ಅನ್ನುತ್ತಿದ್ದಂತೆಯೇ, ಎಷ್ಟೋ ಮಂದಿ ಹೆದರಿಸಿದ್ದು ನಿಜ. ಶೂಟಿಂಗ್‌ ಹೋಗು ನಿಂಗೆ ಐತೆ ಅಂತ ಹೆದರಿಸಿದವರೇ ಹೆಚ್ಚು. ಆದರೆ, ಶೂಟಿಂಗ್‌ಗೆ ಹೋದಾಗಲಷ್ಟೇ ಗೊತ್ತಾಗಿದ್ದು, ನಿರ್ದೇಶಕರ ಕೆಲಸ ಹೇಗೆಂಬುದು. 55 ದಿನಗಳ ಚಿತ್ರೀಕರಣದಲ್ಲಿ ಒಂದು ದಿನವೂ ಬೇಸರವಾಗದಂತೆ ನೋಡಿಕೊಂಡಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದರೆ ಅವರಿಂದ ಬೈಯಿಸಿಕೊಳ್ಳುವುದನ್ನಂತೂ ತಪ್ಪಿಸಿಕೊಂಡಿದ್ದೇನೆ.

* “ಹುಚ್ಚ 2’ನಿಂದ  ಹೊಸ ಇಮೇಜ್‌ ಸಿಗಬಹುದಾ? 
ನನ್ನ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇದು ಬೇರೆ ರೀತಿಯ ಚಿತ್ರವಾಗಿ ನಿಲ್ಲುತ್ತೆ. ಅದು ಕಥೆಯಾಗಲಿ, ಅಭಿನಯವಿರಲಿ, ತಾಂತ್ರಿಕತೆಯಲ್ಲೇ ಇರಲಿ, ನಾನು ಇದುವರೆಗೆ ಮಾಡಿರುವ ಚಿತ್ರಗಳಿಗಿಂತಲೂ ದಿ ಬೆಸ್ಟ್‌ ಚಿತ್ರವಿದು. ಬಹುಶಃ ಮುಂದೆಂದೂ ಇಂತಹ ಪಾತ್ರ ಸಿಗಲಿಕ್ಕಿಲ್ಲ. ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಮಿಕ್ಕಿದ್ದು ಜನರಿಗೆ ಬಿಟ್ಟಿದ್ದೇವೆ. ಒಂದಂತೂ ನಿಜ, ಈ ಚಿತ್ರ ನನಗೊಂದು ರೀ ಬರ್ತ್‌ ಇದ್ದಂತೆ. ನಾನೂ ಚಿತ್ರ ಎದುರು ನೋಡುತ್ತಿದ್ದೇನೆ. ನಿರ್ಮಾಪಕ ಉಮೇಶ್‌ರೆಡ್ಡಿ ಅವರ ಪ್ರೀತಿಯಿಂದ ಈ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ನನ್ನ ತಂದೆ ಬಿಟ್ಟರೆ, ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದೇನೆ. ಒಬ್ಬ ನಿರ್ಮಾಪಕರಾಗಿ ಒಂದು ಸಿನಿಮಾ ಹೇಗೆ ಮಾಡಬೇಕು ಎಂಬುದಕ್ಕೆ ಅವರು ಉದಾಹರಣೆ.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.