ಕಾಲಕ್ಕೆ ತಕ್ಕಂತೆ ಬದಲಾಗಬೇಕು ಸುಡಗಾಡು ಸಿದ್ಧರು 


Team Udayavani, Jul 9, 2018, 5:34 PM IST

9-july-24.jpg

ಕುಷ್ಟಗಿ: ಸುಡಗಾಡು ಸಿದ್ಧರು ಸಂಪ್ರದಾಯ ಕಲೆಯ ಸಂಸ್ಕಾರಕ್ಕೆ ಅಂಟಿಕೊಳ್ಳದೇ ಕಾಲ ಬದಲಾದಂತೆ ಶಿಕ್ಷಣ ಹೊಂದುವ ಮೂಲಕ ಪರಿವರ್ತಿತಗೊಳ್ಳಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಹೇಳಿದರು. ಇಲ್ಲಿನ ಶ್ರೀ ರೇಣುಕಾಚಾರ್ಯ ಮಂಗಲಭವನದಲ್ಲಿ ಕುಷ್ಟಗಿ ತಾಲೂಕು ಸುಡುಗಾಡು ಸಿದ್ಧರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಡುಗಾಡು ಸಿದ್ಧರ ಕಲೆಯೂ ಇರಲಿ ಕಲೆಯ ಜೊತೆಗೆ ಶಿಕ್ಷಣವೂ ಇರಲಿ. ಶಿಕ್ಷಣ ಪಡೆದು ಅಭಿವೃದ್ಧಿ ಕಾಣಬೇಕಿದೆ ಎಂದರು.

ಸುಡಗಾಡು ಸಿದ್ಧರು ಪ್ರದರ್ಶಿಸುವ ಜಾದೂ, ಮನರಂಜನೆ, ಹೇಳುವ ಭವಿಷ್ಯದಿಂದ ಸದ್ಯದ ಜೀವನ ನಿರ್ವಹಣೆ ಸಾಧ್ಯವಿಲ್ಲ. ಜಗತ್ತು ಬದಲಾಗುತ್ತಿದ್ದು, ಬದಲಾವಣೆ ತಕ್ಕಂತೆ ಬದುಕಬೇಕಿದೆ. ಈ ಸಮಾಜಕ್ಕೆ ಜಮೀನು ಇಲ್ಲ, ಅಲೆಮಾರಿ ಜೀವನದ ಹಿನ್ನೆಲೆಯಲ್ಲಿ ಸರ್ಕಾರ ವಸತಿ, ವಸತಿ ಶಾಲೆ ಕಲ್ಪಿಸಿದೆ. ತಾವರಗೇರಾ ಭಾಗದಲ್ಲಿ ಎರಡು ಎಕರೆ ಜಮೀನು ನೀಡಿದ್ದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಜಮೀನು ಹೆಸರಿಗೆ ಮಾತ್ರ, ಪರ್ಯಾಯ ಉದ್ಯೋಗಕ್ಕೆ ಒತ್ತು ನೀಡಬೇಕಿದೆ. ಸರ್ಕಾರ 34 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದೆ. ಈ ಸಾಲದಿಂದ ರೈತರ ಬದುಕು ಹಸನಾಗದು. ನಿತ್ಯದ ಬದುಕಿನಲ್ಲಿ ರೈತರ ಬವಣೆ ಬದಲಾಗದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಮಾರಂಭ ಉದ್ಘಾಟಿಸಿ, ಸುಡುಗಾಡು ಎನ್ನುವುದು ಭಯ ಹುಟ್ಟಿಸುವ ಪದ. ಸಮಾಜದ ಕಂದಾಚಾರಗಳನ್ನು ಮೀರಿ ಸಿದ್ಧರಾಗಿ ಬದುಕು ಸಾಗಿಸುತ್ತಿದ್ದಾರೆ. ಸುಡಗಾಡು ಸಿದ್ಧರ ಜಾದೂ ಈಗಿನ ಕಾಲಘಟ್ಟದಲ್ಲಿ ನಡೆಯದು, ಸರ್ಕಾರದ ಸೌಲಭ್ಯ ಬಳಸಿಕೊಂಡು ಶಿಕ್ಷಣ ಹೊಂದಿ ಸಮಾಜದ ಮುಖ್ಯವಾಹಿಗೆ ಬರಬೇಕಿದೆ. ಅಲೆಮಾರಿಯಾಗಿರುವ ಈ ಸಮಾಜ ಒಂದೆಡೆ ನೆಲೆ ನಿಂತರೆ ಶಿಕ್ಷಣ, ಇತರೇ ಸೌಲಭ್ಯ ಹೊಂದಲು ಸಾಧ್ಯ ಎಂದರು. ಸುಡುಗಾಡು ಸಿದ್ಧರ ಸಮಾಜದ ಅಧ್ಯಕ್ಷ ಶಿವಪ್ಪ ಒಂಟೆತ್ತಿನವರ ಮಾತನಾಡಿ, ಸುಡುಗಾಡು ಸಿದ್ಧರ ಸಮಾಜದಲ್ಲಿ ಶಿಕ್ಷಣ ಕೊರತೆಯಿಂದ ಬಾಲ್ಯ ವಿವಾಹ ಪ್ರಕರಣಗಳಾಗಿದ್ದು, ಸಮಾಜದ ಒಳಿತಿಗಾಗಿ ಅನಿಷ್ಟ ಪದ್ಧತಿ ನಿಲ್ಲಿಸಲೇ ಬೇಕಿದೆ. ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಸಮಾಜದ ವ್ಯಕ್ತಿಗೆ ತೊಂದರೆಯಾದಾಗ ಒಂದಾಗಿ ಸಮಾಜಕ್ಕೆ ಶಕ್ತಿ ಕೊಡಬೇಕೆಂದರು.

ಸರ್ಕಾರಿ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಡಾ| ಮಹೇಂದ್ರ ಕಿಂದರಿ ಮಾತನಾಡಿ, ಸಮಾಜ ಉಳಿಯಲು ಸಮಾಜದ ಜಾದು, ಮನರಂಜನೆ ಕಲೆ ಉಳಿಸಲೇ ಬೇಕಿದೆ. ಈ ಕಲೆ ಪ್ರೋತ್ಸಾಹಿಸಲು ಅಕಾಡೆಮಿ ಇಲ್ಲ. ಕಲೆಯನ್ನು ಕಲಿಯಲು ಯಾರು ಮುಂದೆ ಬರುವುದಿಲ್ಲ. ಹೀಗಾದಲ್ಲಿ ಈ ಕಲೆ ಉಳಿಸಲು ಹೇಗೆ ಸಾಧ್ಯ? ವೈದ್ಯಕೀಯ ಸೇವೆಯಿಂದ ಸ್ವಯಂ ನಿವೃತ್ತರಾಗಿ ಸುಡುಗಾಡು ಸಿದ್ಧರ ಸಮಾಜ ಸೇವೆಗೆ ಮೀಸಲಿಡುವುದಾಗಿ ಹೇಳಿದರು.

ಮಾಜಿ ಶಾಸಕ ಕೆ. ಶರಣಪ್ಪ, ವಸಂತ ಮೇಲಿನಮನಿ, ಚಂದ್ರಶೇಖರ ನಾಲತವಾಡ, ಲಕ್ಷ್ಮಣ  ಮುಖೀಯಾಜಿ, ಮೋಹನಲಾಲ್‌ ಜೈನ್‌, ಬಸನಗೌಡ ಮಾಲಿಪಾಟೀಲ, ಮರಿಯಪ್ಪ ಗಂಟಿ, ಬಸವರಾಜಪ್ಪ ವಿಭೂತಿ, ಸುಂಕಪ್ಪ ಶಿರಸಾಲಿ, ವೆಂಕಟರಾಮ್‌ ಶಿರಸಾಲಿ, ದುರಗಪ್ಪ ಪರಿಯವರ್‌, ಕೃಷ್ಣಪ್ಪ ವಿಭೂತಿ, ರಾಮಣ್ಣ ಪರಿಯವರ್‌ ಮತ್ತಿತರಿದ್ದರು. ಜಂಬಯ್ಯ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

ಪಾಕ್‌ಗೆ ಗೌರವ ಕೊಡಿ… ಇಲ್ಲವಾದಲ್ಲಿ ಅಣುಬಾಂಬ್ ಹಾಕುತ್ತಾರೆ: ಮಣಿಶಂಕರ್ ಅಯ್ಯರ್ ಹೇಳಿಕೆ

Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

6-sslc

Rank: ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ಪ್ರತ್ವಿತಾ ಪಿ.ಶೆಟ್ಟಿ; ಐ.ಎ.ಎಸ್ ಅಧಿಕಾರಿಯಾಗುವ ಆಸೆ

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.