ಪರ್ಯಾಯ ನಾಯಕರು ಕಾಣಿಸುತ್ತಿಲ್ಲ


Team Udayavani, Aug 9, 2018, 6:00 AM IST

24.jpg

1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

ಮುಖಂಡರು ತೀರಿಕೊಂಡಾಗ ಶೂನ್ಯವೊಂದು ಸೃಷ್ಟಿಯಾಗಿದೆ ಮತ್ತು ಈ ಶೂನ್ಯವನ್ನು ತುಂಬುವುದು ಅಸಾಧ್ಯ ಎನ್ನುವುದು ಗೌರವ ಸಲ್ಲಿಸುವ ಒಂದು ವಾಡಿಕೆಯ ಹೇಳಿಕೆ ಎಂದಷ್ಟೆ ಪರಿಗಣಿಸಲ್ಪಡುತ್ತದೆ. ಆದರೆ ಕರುಣಾನಿಧಿ ವಿಚಾರದಲ್ಲಿ ಮಾತ್ರ ಇದು ಬರೀ ಔಪಚಾರಿಕ ಮಾತಲ್ಲ. ಅವರ ಅಗಲಿಕೆಯಿಂದ ಕನಿಷ್ಠ ತಮಿಳುನಾಡಿನ ರಾಜಕೀಯದಲ್ಲಾದರೂ ದೊಡ್ಡದೊಂದು ಶೂನ್ಯ ನಿರ್ಮಾಣವಾಗಿದ್ದು, ಅದನ್ನು ತುಂಬುವ ನಾಯಕ ಸದ್ಯ ಅಲ್ಲಿ ಕಾಣಿಸುತ್ತಿಲ್ಲ. ಜಯಲಲಿತಾ ಮತ್ತು ಕರುಣಾನಿಧಿ ತಮಿಳುನಾಡಿನ ರಾಜಕೀಯವನ್ನು ಆವರಿಸಿಕೊಂಡ ಪರಿ ಆ ರೀತಿಯಿತ್ತು. ಈಗ ಅವರಿಬ್ಬರೂ ಇಲ್ಲದಿರುವುದರಿಂದ ಅಲ್ಲಿನ ರಾಜಕೀಯ ಹೊಸ ಆಯಾಮದತ್ತ ಹೊರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ಎಂ.ಜಿ. ರಾಮಚಂದ್ರನ್‌ ನಿಧನರಾದಾಗ ಆ ಸ್ಥಾನವನ್ನು ತುಂಬಲು ಕರುಣಾನಿಧಿ ಇದ್ದರು. ಆದರೆ ಜಯಲಲಿತಾ ನಿಧನ ರಾದಾಗ ಅವರ ಪಕ್ಷದಲ್ಲಿ ಆ ಮಟ್ಟದ ಇನ್ನೋರ್ವ ನಾಯಕ ಇರಲಿಲ್ಲ. ಅದೇ ರೀತಿ ಈಗ ಕರುಣಾನಿಧಿ ನಿಧನರಾದಾಗ ಅವರ ಸರಿಸಮಾನ ನಾಯಕ ಇನ್ನೊಬ್ಬರಿಲ್ಲದಂತಾಗಿದೆ. ಮಗ ಸ್ಟಾಲಿನ್‌ ಉತ್ತರಾಧಿಕಾರಿಯ ಸ್ಥಾನದಲ್ಲಿ ಈಗಾಗಲೇ ಇದ್ದರೂ ಅವರಿಂದ ಕರುಣಾನಿಧಿಯ ರೀತಿಯಲ್ಲಿ ರಾಜಕೀಯ ದಾಳಗಳನ್ನು ಉರುಳಿಸುವ ಸಾಮರ್ಥ್ಯ ಇರುವುದು ಇನ್ನೂ ಸಾಬೀತಾಗಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭೆ ಸ್ಟಾಲಿನ್‌ ಸಾಮರ್ಥ್ಯ ಪರೀಕ್ಷಿಸುವ ವೇದಿಕೆ ಯಾಗಿತ್ತು. ಇದರಲ್ಲಿ ಅವರು ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ಜತೆಗೆ ಅಧಿಕಾರಕ್ಕಾಗಿ ಸಹೋದರರೊಳಗೆ ಕಚ್ಚಾಟವೂ ಇರುವುದರಿಂದ ಕ‌ರುಣಾನಿಧಿ ಬಳಿಕ ಯಾರು ಎಂಬ ಪ್ರಶ್ನೆ ಈಗಲೇ ಡಿಎಂಕೆಯಲ್ಲಿ ಮೂಡಿದೆ. 

ಸಿನೆಮಾ ನಟರಾದ ಕಮಲಹಾಸನ್‌ ಮತ್ತು ರಜನೀಕಾಂತ್‌ ಪ್ರವೇಶದ ಬಳಿಕ ತಮಿಳುನಾಡಿನ ರಾಜಕೀಯ ಹೊಸ ಆಯಾಮದತ್ತ ಹೊರಳಿದೆ. ಜತೆಗೆ ಟಿಟಿವಿ ದಿನಕರನ್‌ ಬಲಾಡ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಎಐಎಡಿಎಂಕೆಯಲ್ಲಿರುವ ಅಸ್ಥಿರತೆಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿಯೂ ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಡಿಎಂಕೆಯನ್ನು ಉಳಿಸಿಕೊಳ್ಳಲು ಯಾವ ತಂತ್ರಗಾರಿಕೆಯನ್ನು ಸ್ಟಾಲಿನ್‌ ಉಪಯೋಗಿಸುತ್ತಾರೆ ಎನ್ನುವುದರ ಮೇಲೆ ಅವರ ಮತ್ತು ಪಕ್ಷದ ಭವಿಷ್ಯವಿದೆ. 

ಕರುಣಾನಿಧಿ ಪ್ರಾದೇಶಿಕ ಪಕ್ಷವೊಂದರ ನಾಯಕರಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಚೆನ್ನೈಯಲ್ಲಿ ದ್ದುಕೊಂಡೇ ದಿಲ್ಲಿಯ ರಾಜಕೀಯವನ್ನು ನಿರ್ದೇಶಿಸುವ ಕಲೆಯನ್ನು ಅವರು ಸಿದ್ಧಿಸಿಕೊಂಡಿದ್ದರು. ಹಾಗೆ ನೋಡಿದರೆ 1969ರಲ್ಲಿ ಅಣ್ಣಾದೊರೆ ನಿಧನರಾಗಿ ಅಧಿಕಾರದ ಚುಕ್ಕಾಣಿ ಕೈಗೆ ಬಂದಾಗಲೇ ರಾಷ್ಟ್ರ ರಾಜಕಾರಣಕ್ಕೆ ಕರುಣಾನಿಧಿಯವರ ಪ್ರವೇಶವಾಗಿತ್ತು. ಆ ಸಂದರ್ಭದಲ್ಲಿ ವಿ. ವಿ.ಗಿರಿಯನ್ನು ರಾಷ್ಟ್ರಪತಿ ಮಾಡಲು ಇಂದಿರಾ ಗಾಂಧಿಗೆ ಕರುಣಾನಿಧಿ ಬೆಂಬಲ ನೀಡಿದ್ದರು. 

1940ರಿಂದ 1960ರ ತನಕ ಹಿಂದಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಹೊರತಾಗಿಯೂ 1996ರಲ್ಲಿ ಸಂಯುಕ್ತ ರಂಗ, 1999ರಲ್ಲಿ ಎನ್‌ಡಿಎ ಮತ್ತು 2004ರಲ್ಲಿ ಯುಪಿಎ ಮೈತ್ರಿಕೂಟದಲ್ಲಿ ಕರುಣಾನಿಧಿ ಸೇರಿಕೊಂಡಿದ್ದರು. ಹಿಂದಿ ವಿರೋಧಿ ನಿಲುವು ರಾಷ್ಟ್ರ ರಾಜಕಾರಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಮೈತ್ರಿಕೂಟದಲ್ಲಿ ಸೇರಿಕೊಳ್ಳುವುದು ಮತ್ತು ಅದರಿಂದ ತನ್ನ ರಾಜ್ಯಕ್ಕೆ ಗರಿಷ್ಠ ಪ್ರಯೋಜನವಾಗುವಂತೆ ನೋಡಿಕೊಳ್ಳುವುದರಲ್ಲಿ ಕರುಣಾನಿಧಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. 1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.