ಖರೀದಿಗೆ ಸ್ಪಷ್ಟ ನೀತಿ ಬೇಕು 


Team Udayavani, Feb 15, 2019, 12:30 AM IST

34.jpg

ಕಳೆದೊಂದು ವರ್ಷದಿಂದ ಭಾರೀ ಗದ್ದಲ ಮಾಡುತ್ತಿರುವ ರಫೇಲ್‌ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಮಹಾಲೇಖಪಾಲರ ವರದಿ ವ್ಯವಹಾರವನ್ನು ಸಮರ್ಥಿಸುತ್ತಿರುವ ಸರಕಾರ ಮತ್ತು ವಿರೋಧಿಸುತ್ತಿರುವ ವಿಪಕ್ಷಗಳಿಗೆ ಕಚ್ಚಾಟವನ್ನು ಮುಂದುವರಿಸಲು ಇನ್ನಷ್ಟು ವಿಷಯಗಳನ್ನು ನೀಡಿದೆ. ವರದಿಯಲ್ಲಿ ಇತ್ತಂಡಗಳಿಗೆ ಅನುಕೂಲ ಕರವಾದ ಅಂಶಗಳಿದ್ದರೂ ಇಬ್ಬರೂ ತಮಗೆ ಬೇಕಾದ ಅಂಶಗಳನ್ನು ಮಾತ್ರ ಎತ್ತಿಕೊಂಡು ವಾದಿಸುತ್ತಿದ್ದಾರೆ. ಸಮಸ್ಯೆಯ ಮೂಲ ಇರುವುದೇ ಇಲ್ಲಿ. ಯಾರೂ ಒಟ್ಟಾರೆ ವ್ಯವಹಾರದ ಸಮಗ್ರ ಅಂಶಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ವಿಪಕ್ಷದಷ್ಟೇ ಸರಕಾರವೂ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತದೆ. ವರದಿ ಮಂಡನೆಯಾದ ಬಳಿಕವೂ ಹಲವು ಪ್ರಶ್ನೆಗಳು ಬಾಕಿ ಉಳಿದಿದ್ದು ಅವುಗಳಿಗೆ ಉತ್ತರಿಸಬೇಕಾದ ಹೊಣೆಯಿಂದ ಸರಕಾರ ಜಾರಿಕೊಳ್ಳುವುದು ಸರಿಯಲ್ಲ. 

ಹಾಗೇ ಹೇಳುವುದಾದರೆ ಸಿಎಜಿ ವರದಿಯಲ್ಲಿ ಒಟ್ಟು 11 ರಕ್ಷಣಾ ಖರೀದಿಯ ಬಗ್ಗೆ ಮಾಹಿತಿಯಿದೆ. ಆದರೆ ಎಲ್ಲರೂ ಮಾತನಾಡುತ್ತಿರುವುದು ರಫೇಲ್‌ ಬಗ್ಗೆ ಮಾತ್ರ. ಈ ಅಂಶವೇ ಎಲ್ಲರಿಗೂ ರಾಷ್ಟ್ರೀಯ ಭದ್ರತೆ ಅಥವಾ ಸೇನೆಯ ಸಾಮರ್ಥ್ಯವರ್ಧನೆ ಬಗ್ಗೆ ಇರುವ ಕಾಳಜಿಗಿಂತ ಹೆಚ್ಚಾಗಿ ವಿವಾದಗಳನ್ನು ಹುಡುಕುವುದರಲ್ಲಿ ಇದೆ ಎನ್ನುವುದಕ್ಕೆ ಸಾಕ್ಷಿ. 2007ರಲ್ಲಿ ಯುಪಿಎ ಸರಕಾರ ಮಾಡಿರುವ ಒಪ್ಪಂದಕ್ಕಿಂತ 2016ರಲ್ಲಿ ಎನ್‌ಡಿಎ ಸರಕಾರ ಮಾಡಿದ ರಫೇಲ್‌ ಒಪ್ಪಂದ ಶೇ. 2.86 ಅಗ್ಗವಾಗಿದೆ ಎಂದು ಹೇಳಿರುವ ಸಿಎಜಿ ಇದೇ ವೇಳೆ ಫ್ರಾನ್ಸ್‌ ಸರಕಾರದ ಖಾತರಿ ಪಡೆಯದೆ ಲೆಟರ್‌ ಆಫ್ ಕಂಫ‌ರ್ಟ್‌ಗೆ ತೃಪ್ತಿ ಪಟ್ಟುಕೊಂಡಿರುವುದನ್ನು ಆಕ್ಷೇಪಿಸಿದೆ. ಈ ಮಾದರಿಯ ಹಲವು ವಿಚಾರಗಳನ್ನು ಸಿಎಜಿ ಉಲ್ಲೇಖೀಸಿದ್ದು, ಮೇಲ್ನೋಟಕ್ಕೆ ವರದಿ ನಿಷ್ಪಕ್ಷಪಾತವಾಗಿರುವಂತೆ ಕಾಣಿಸುತ್ತಿದೆ. ಯುಪಿಎ 126 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲುದ್ದೇಶಿಸಿತ್ತು. ಆದರೆ ಫ್ರೆಂಚ್‌ನ ಡಸಾಲ್ಟ್ ಏವಿಯೇಶನ್‌ ಕಂಪೆನಿ ರಫೇಲ್‌ ಬಿಡಿಭಾಗಗಳನ್ನು ಮತ್ತು ತಂತ್ರಜ್ಞಾನವನ್ನು ಪೂರೈಸಿ ಅದನ್ನು ಇಲ್ಲಿ ಜೋಡಿಸಿಕೊಳ್ಳಬೇಕಿತ್ತು. ಆದರೆ ಎನ್‌ಡಿಎ 36 ಹಾರಾಟಕ್ಕೆ ಸಿದ್ಧವಾದ ರಫೇಲ್‌ ಅನ್ನು ಖರೀದಿಸುವ ಒಪ್ಪಂದವನ್ನು ಅಂತಿಮಗೊಳಿಸಿತ್ತು. ಅದೇ ರೀತಿ ಪೂರೈಕೆ ಅವಧಿಯಲ್ಲೂ ವ್ಯತ್ಯಾಸವಿದೆ. ಈ ಎಲ್ಲ ಅಂಶಗಳತ್ತ ಮಹಾಲೇಖಪಾಲರು ಗಮನ ಹರಿಸಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ ರಫೇಲ್‌ನಲ್ಲಿ ಎನ್‌ಡಿಎ ಸರಕಾರ ಹಿಂದಿನ ಯುಪಿಎ ಸರಕಾರಕ್ಕಿಂತ ಉತ್ತಮ ಡೀಲ್‌ ಮಾಡಿಲ್ಲ. ಮೂಲ ವಿಮಾನದ ಬೆಲೆ, ಪೂರೈಕೆ ಅವಧಿ ಇತ್ಯಾದಿ ಅಂಶಗಳೆಲ್ಲ ಹಿಂದಿನ ಡೀಲ್‌ನಲ್ಲಿರುವಂತೆಯೇ ಇದೆ. ಹೀಗಿರುವಾಗ ಹಿಂದಿನ ಒಪ್ಪಂದವನ್ನು ರದ್ದುಗೊಳಿಸಿ ಹೊಸ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆಗೆ ಉತ್ತರಿಸ ಬೇಕಾದ ಹೊಣೆ ಸರಕಾರದ್ದು. ಪ್ರತಿಪಕ್ಷಗಳು ಎತ್ತಿರುವ ಈ ಮಾದರಿಯ ಹಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫ‌ಲವಾದದ್ದೇ ಈ ವಿವಾದ ಇಷ್ಟು ಬೆಳೆಯಲು ಕಾರಣವಾಯಿತು. ಆರಂಭದಲ್ಲೇ ಸಂಶಯಗಳನ್ನು ನಿವಾರಿಸಿ ದ್ದರೆ ಇಂದು ತಿಣುಕಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. 

ರಫೇಲ್‌ ಎಂದಲ್ಲ ಇತ್ತೀಚೆಗಿನ ವರ್ಷಗಳಲ್ಲಿ ಬಹುತೇಕ ರಕ್ಷಣಾ ಖರೀದಿ ವ್ಯವಹಾರಗಳು ವಿವಾದಕ್ಕೀಡಾಗುತ್ತಿರುವುದು ಮಾತ್ರ ದೇಶದ ದುರದೃಷ್ಟ. ಪ್ರತಿಯೊಂದು ಖರೀದಿಯೂ ಅಂತಿಮಗೊಳ್ಳಲು ವರ್ಷಾನುಗಟ್ಟಲೆ ತೆಗೆದು ಕೊಳ್ಳುತ್ತಿರುವುದು ನೇರವಾಗಿ ಸೇನೆಯ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ರಫೇಲ್‌ ಅನ್ನೇ ತೆಗೆದುಕೊಂಡರೂ ಇದರ ಪ್ರಕ್ರಿಯೆ ಶುರುವಾಗಿದ್ದು 2007ರಲ್ಲಿ. ಇದೀಗ 12 ವರ್ಷವಾದರೂ ವ್ಯವಹಾರವೇ ಅಂತಿಮಗೊಂಡಿಲ್ಲ. ಒಂದೆಡೆ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಇರುವ ಒಂದಷ್ಟು ವಿಮಾನಗಳು ಹಳೆಯ ದಾಗಿವೆ. ತುರ್ತಾಗಿ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ವರ್ಷಗಳಿಂದ ಒತ್ತಾಯಿ ಸಲಾಗುತ್ತಿದೆ. ಇನ್ನೊಂದೆಡೆ ಖರೀದಿ ಒಪ್ಪಂದಗಳೆಲ್ಲ ವಿವಾದ ಕ್ಕೊಳಗಾಗಿ ಅನಗತ್ಯ ವಿಳಂಬವಾಗುತ್ತಿದೆ. ಪ್ರತಿ ಸಲ ಸರಕಾರ ಬದಲಾ ದಾಗ ಹೊಸ ಹೊಸ ಒಪ್ಪಂದಗಳು ಏರ್ಪಡುವುದು ಕೂಡಾ ರಕ್ಷಣಾ ಖರೀದಿ ಯಲ್ಲಾಗುತ್ತಿರುವ ಹಿನ್ನಡೆಗೆ ಕಾರಣ. ದೇಶದ ಭದ್ರತೆಯಂಥ ವಿಚಾರದಲ್ಲೂ ನಮ್ಮ ರಾಜಕೀಯ ಪಕ್ಷಗಳಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಸ್ಪಷ್ಟವಾದ ರಕ್ಷಣಾ ಖರೀದಿ ನೀತಿ ಇಲ್ಲದಿರುವುದೂ ಆಗಾಗ ವಿವಾದಗಳು ಭುಗಿಲೇಳಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರವಾದ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ.

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.