ಜಾಂಡಿಸ್‌ ಅಥವಾ ಕಾಮಾಲೆ


Team Udayavani, Aug 12, 2018, 6:00 AM IST

jaundice-test.jpg

ಹಿಂದಿನ ವಾರದಿಂದ-  ವೈರಸ್‌ಗಳ ಹೊರತಾಗಿ ಜಾಂಡಿಸ್‌ ಉಂಟಾಗಲು ಇನ್ನೊಂದು ಮುಖ್ಯ ಕಾರಣ ಎಂದರೆ ಮದ್ಯಪಾನ. ಅತಿಯಾದ ಮದ್ಯ ಸೇವನೆಯು ಜಾಂಡಿಸ್‌ ಮಾತ್ರವಲ್ಲದೆ ಪಿತ್ತಕೋಶದ ಸಿರೋಸಿಸ್‌ಗೂ ಕಾರಣವಾಗಬಲ್ಲದು. ದೇಹದ ಈ ಭಾಗದಲ್ಲಿ ಸಿರೋಸಿಸ್‌ಗೆ ಮದ್ಯಪಾನವೇ ಮುಖ್ಯ ಕಾರಣವಾಗಿರುತ್ತದೆ.

ಮದ್ಯಪಾನದಿಂದ ಉಂಟಾಗುವ ಪಿತ್ತಕೋಶದ ಸಿರೋಸಿಸ್‌ಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಪರಿಣಾಮಕಾರಿಯಾದ ಔಷಧಗಳು ಇಲ್ಲ. ಮದ್ಯಪಾನವನ್ನು ನಿಲ್ಲಿಸುವುದಲ್ಲದೆ ಬೇರೆ ದಾರಿಯೇ ಇಲ್ಲ.ಇದು ಮದ್ಯಪಾನದಿಂದ ಉಂಟಾಗುವ ಜಾಂಡಿಸ್‌. ಇನ್ನೊಂದು ವಿಧವಾದ ಜಾಂಡಿಸ್‌ ಇದೆ – ಅಬ್‌ಸ್ಟ್ರಕ್ಟಿವ್‌ ಜಾಂಡಿಸ್‌ ಅಥವಾ ಪ್ರತಿಬಂಧಾತ್ಮಕ ಜಾಂಡಿಸ್‌. ಇದು ಪಿತ್ತರಸ ಹರಿಯುವ ಮಾರ್ಗದಲ್ಲಿ ತಡೆ ಉಂಟಾಗಿ ಪಿತ್ತರಸದ ಹರಿವು ಅಡಚಣೆಗೆ ಒಳಗಾಗುವುದರಿಂದ ಉಂಟಾಗುತ್ತದೆ. ಈ ಅಡಚಣೆ ಉಂಟಾಗುವುದಕ್ಕೆ ಎರಡು ಮುಖ್ಯ ಕಾರಣಗಳೆಂದರೆ, ಪಿತ್ತಕೋಶದ ಕಲ್ಲುಗಳು. ಇವು ಪಿತ್ತಕೋಶದಲ್ಲಿ ಉಂಟಾಗಿ ಅಲ್ಲಿಂದ ಹೊರಜಾರಿ ಪಿತ್ತರಸ ಹರಿಯುವ ಮಾರ್ಗದಲ್ಲಿ ಅಡಚಣೆ ಸೃಷ್ಟಿಸುತ್ತವೆ. ಇನ್ನೊಂದು, ಪಿತ್ತರಸ ಹರಿಯುವ ಮಾರ್ಗದಲ್ಲಿ ಸೃಷ್ಟಿಯಾಗಿ ಅಡಚಣೆ ಉಂಟು ಮಾಡುವ ಗಡ್ಡೆಗಳು. ಈ ಗಡ್ಡೆಗಳು ಪಿತ್ತಕೋಶದಿಂದ ಉಂಟಾಗಬಹುದು, ಪಿತ್ತರಸ ಹರಿಯುವ ಮಾರ್ಗದಲ್ಲಿ ಉಂಟಾಗಬಹುದು ಮತ್ತು ಮೇದೋಜೀರಕ ಗ್ರಂಥಿಯಲ್ಲಿ ಉಂಟಾಗಬಹುದು. ಇವು ಪಿತ್ತರಸ ಹರಿಯುವಿಕೆಗೆ ಅಡಚಣೆ ಉಂಟು ಮಾಡುವ ಒಬ್‌ಸ್ಟ್ರಕ್ಟಿವ್‌ ಜಾಂಡಿಸ್‌ಗೆ ಉದಾಹರಣೆಗಳು. 

ನಾವು ಈ ವಿಧವಾದ ಜಾಂಡಿಸ್‌ 
ಗುರುತಿಸುವುದು ಹೇಗೆ?

ಈ ವಿಧವಾದ ಜಾಂಡಿಸ್‌ಗೆ ತುತ್ತಾಗಿರುವ ರೋಗಿಗಳಿಗೆ ದೇಹದಲ್ಲೆಲ್ಲ ತುರಿಕೆ ಉಂಟಾಗುತ್ತದೆ. ಹೊಟ್ಟೆಯ ಭಾಗದ ಅಲ್ಟ್ರಾಸೌಂಡ್‌ ತಪಾಸಣೆ ನಡೆಸಿದಾಗ ಅಡಚಣೆಯಿಂದಾಗಿ ಪಿತ್ತರಸ ಹರಿಯುವ ಮಾರ್ಗವು ಊದಿಕೊಂಡಿರುವುದು ಅಥವಾ ದೊಡ್ಡದಾಗಿರುವುದು ಗಮನಕ್ಕೆ ಬರುತ್ತದೆ. ಅಡಚಣೆಗೆ ಕಾರಣ ಗಡ್ಡೆಯೇ ಅಥವಾ ಕಲ್ಲೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ತಪಾಸಣೆ ನಡೆಸಬಹುದು. ಗಡ್ಡೆಯಾಗಿದ್ದಲ್ಲಿ, ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐಯಂತಹ ಸುಧಾರಿತ ತಪಾಸಣಾ ವಿಧಾನಗಳು ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಗುರಿಪಡಿಸಬಹುದೇ ಬೇಡವೇ ಎಂಬ ಮಾಹಿತಿಯನ್ನೂ ಒದಗಿಸುತ್ತವೆ. ಪಿತ್ತರಸ ಹರಿಯುವ ಮಾರ್ಗದಲ್ಲಿನ ಈ ಅಡಚಣೆಯನ್ನು ಇಆರ್‌ಸಿಪಿ ವಿಧಾನದಿಂದ ನಿವಾರಿಸಬಹುದು. ಇಆರ್‌ಸಿಪಿಯು ಎಂಡೊಸ್ಕೊಪಿಕ್‌ ಚಿಕಿತ್ಸೆಯಾಗಿದ್ದು, ನಮನೀಯ ಸೂಕ್ಷ್ಮ ಕೊಳವೆಯೊಂದನ್ನು ಡ್ನೂಡೆನಮ್‌ ಒಳಕ್ಕೆ ಕಳುಹಿಸಿ ಒಂದು ಸೂಕ್ಷ್ಮ ಬಲೂನ್‌ ಅಥವಾ ಬಾಸ್ಕೆಟ್‌ನ ಸಹಾಯದಿಂದ ಕಲ್ಲನ್ನು ತೆಗೆದುಹಾಕಲಾಗುತ್ತದೆ. ಗಡ್ಡೆಯಾಗಿದ್ದಲ್ಲಿ, ಪ್ಲಾಸ್ಟಿಕ್‌ ಅಥವಾ ಲೋಹದ ಕೊಳವೆಯನ್ನು ಪಿತ್ತರಸ ಹರಿಯುವ ಮಾರ್ಗದಲ್ಲಿ ಅಡಚಣೆಯ ಮೂಲಕ ಸ್ಥಾಪಿಸಿ ಪಿತ್ತರಸದ ಹರಿವಿಗೆ ಮಾರ್ಗ ಮಾಡಿಕೊಡಲಾಗುತ್ತದೆ. ಇದರಿಂದ ಜಾಂಡಿಸ್‌ ಕಡಿಮೆಯಾಗುತ್ತದೆ. ಆದರೆ ಗಡ್ಡೆಯು ಕ್ಯಾನ್ಸರ್‌ನ ಪ್ರಾಥಮಿಕ ಹಂತವಾಗಿದ್ದರೆ ಶಸ್ತ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. 

ಹೀಗಾಗಿ ಜಾಂಡಿಸ್‌ ಎನ್ನುವುದು ಸ್ವತಃ ಒಂದು ಕಾಯಿಲೆ ಅಲ್ಲ. ಜಾಂಡಿಸ್‌ನಲ್ಲಿ ಹಲವಾರು ವಿಧಗಳಿವೆ. ಜಾಂಡಿಸ್‌ ಉಂಟಾದಾಗ ವೈದ್ಯರ ಬಳಿಗೆ, ಅದರಲ್ಲೂ ಗ್ಯಾಸ್ಟ್ರೊ ಎಂಟರಾಲಜಿಸ್ಟ್‌ ಬಳಿಗೆ ತೆರಬೇಕಾಗುತ್ತದೆ. ಅವರು ಅಗತ್ಯ ತಪಾಸಣೆಗಳನ್ನು ನಡೆಸಿ ಉಂಟಾಗಿರುವುದು ಪ್ರಿಹೆಪಾಟಿಕ್‌ ಜಾಂಡಿಸ್‌ ಅಥವಾ ಪಿತ್ತಕೋಶದ ಕಾಯಿಲೆಗಳಿಂದ ಜಾಂಡಿಸ್‌ ಉಂಟಾಗಿದೆಯೇ ಯಾ ಪಿತ್ತರಸದ ಮಾರ್ಗದಲ್ಲಿ ಉಂಟಾಗಿರುವ ಅಡಚಣೆಯಿಂದ ಅದು ಕಾಣಿಸಿಕೊಂಡಿದೆಯೇ ಎಂಬುದನ್ನು ನಿರ್ಧರಿಸುತ್ತಾರೆ. ಅವರು ರಕ್ತ ಪರೀಕ್ಷೆಗಳನ್ನು ನಡೆಸಬಹುದು, ಹೊಟ್ಟೆಯ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ನಡೆಸಬಹುದು ಮತ್ತು ಅಗತ್ಯವಿದ್ದರೆ ಸಿಟಿ ಅಥವಾ ಎಂಆರ್‌ಐ ಸ್ಕ್ಯಾನಿಂಗ್‌ ಕೂಡ ನಡೆಸಬಹುದು. ಚಿಕಿತ್ಸೆಯು ಜಾಂಡಿಸ್‌ ಉಂಟಾಗಲು ಏನು ಕಾರಣ ಎಂಬುದನ್ನು ಆಧರಿಸಿರುತ್ತದೆ.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.