ಮಾಂಸಭಕ್ಷಕ ಸಸ್ಯಗಳು!


Team Udayavani, Aug 9, 2018, 6:00 AM IST

5.jpg

ಸಸ್ಯಗಳೇ ಮಾಂಸಾಹಾರಿಗಳಾದರೆ, ಅದನ್ನು ಸೇವಿಸುವ ಮನುಷ್ಯರನ್ನು ಸಸ್ಯಾಹಾರಿಗಳೆಂದು ಕರೆಯಬೇಕೋ, ಮಾಂಸಾಹಾರಿಗಳೆಂದು ಕರೆಯಬೇಕೋ? 

ನಮ್ಮಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂಬ ವಿಂಗಡನೆಯಿದೆ. ಹೋಟೆಲ್‌, ಸಭೆ ಸಮಾರಂಭಗಳಲ್ಲಿ ಇವೆರಡಕ್ಕೂ ಪ್ರತ್ಯೇಕ ಮೆನು ಅಥವಾ ಕೌಂಟರ್‌ ನೀಡಲಾಗುತ್ತದೆ. ಸಸ್ಯಗಳೇ ಮಾಂಸಾಹಾರಿಗಳಾದರೆ ಅದನ್ನು ಸೇವಿಸುವವರನ್ನು ಸಸ್ಯಾಹಾರಿಗಳೆಂದು ಕರೆಯಬೇಕೋ, ಮಾಂಸಾಹಾರಿಗಳೆಂದು ಕರೆಯಬೇಕೋ? ಈ ಪ್ರಶ್ನೆ ಬರುವುದಕ್ಕೆ ಕಾರಣ ಮಾಂಸಾಹಾರಿ ಸಸ್ಯಗಳು ನಿಜಕ್ಕೂ ಇರುವುದು. ಈ ಸಸ್ಯಗಳನ್ನು ಸದ್ಯದ ಮಟ್ಟಿಗೆ ಮನುಷ್ಯರು ಸೇವಿಸುವುದಿಲ್ಲವಾದ ಕಾರಣ ಮೇಲಿನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಬೇಕಿಲ್ಲ.

ಇಬ್ಬನಿ ಗಿಡ (ಡ್ರಾಸೆರ)
ಇಬ್ಬನಿ ಗಿಡದ ಎಲೆಗಳ ಸುತ್ತಲೂ ತಂತಿಯಂಥ ಎಳೆಗಳು ಚಾಚಿಕೊಂಡಿದ್ದು, ಎಳೆಗಳ ತುದಿಯಲ್ಲಿ ದ್ರವರೂಪದ ಅಂಟು ಹನಿಯಿರುತ್ತದೆ. ಈ ಎಲೆಗಳು ಬಿಸಿಲಿನಲ್ಲಿ ಬಲುಸುಂದರವಾಗಿ ಹೊಳೆಯುತ್ತಿರುತ್ತವೆ. ಇಬ್ಬನಿಯ ಹನಿಯಂತೆ ಕಾಣುವ ಈ ಅಂಟನ್ನು ಮಕರಂದವೆಂದು ಭ್ರಮಿಸಿ ಕೀಟಗಳು ಕುಳಿತಾಗ ಅಂಟಿಕೊಳ್ಳುತ್ತವೆ. ಕೀಟಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲೇ ಬಂಧಿಯಾಗಿ ಇಬ್ಬನಿ ಗಿಡದ ಆಹಾರವಾಗುತ್ತದೆ.

ಹೂಜಿಗಿಡ
ಇದರ ಎಲೆಗಳು ನೋಡಲು ಕೊಳವೆಯಾಕಾರದ ಉದ್ದ ಕತ್ತಿನ ಮುಚ್ಚಳರುವ ಹೂಜಿಯಂತೆ ಕಾಣುತ್ತವೆ. ಈ ಸಸ್ಯವು ಹೂಜಿಯ ತೆರೆದ ಅಂಚಿನ ಆಸುಪಾಸಿನಿಂದ ಆಕರ್ಷಕ ದ್ರವ್ಯವನ್ನು ಹೊರಸೂಸುತ್ತದೆ. ಇದಕ್ಕೆ ಆಕರ್ಷಿತರಾಗಿ ಆ ದ್ರವವನ್ನು ಸವಿಯಲು ಬರುವ ಕೀಟಗಳು ಹೂಜಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ನಂತರ ಹೂಜಿ ತಂತಾನೇ ಮುಚ್ಚಿಕೊಂಡುಬಿಡುತ್ತದೆ. ಕಪ್ಪೆ ಹಾಗೂ ಹಲ್ಲಿಯನ್ನೂ ಜೀರ್ಣಿಸಿಕೊಳ್ಳುವ ಹೂಜಿ ಗಿಡಗಳಿವೆ. 

ನೊಣದ ಬೋನು (ವೀನಸ್‌ ಫ್ಲೈಟ್ರಾಪ್‌)
ಇದರ ಎಲೆಗಳು ಇಬ್ಟಾಗಗೊಂಡಂತಿದ್ದು, ಮಡಚಿಕೊಳ್ಳುವಂತಹ ವಿನ್ಯಾಸವನ್ನು ಹೊಂದಿರುತ್ತವೆ. ಪ್ರತಿ ಎಲೆಯ ಅಂಚಿನುದ್ದಕ್ಕೂ ಸೂಕ್ಷ್ಮ ಸಂವೇದಿ ತಂತುಗಳಿದ್ದು. ಕೀಟವೊಂದು ಈ ತಂತನ್ನು ಸ್ಪರ್ಶಿಸಿದಾಗ ಸಸ್ಯದಲ್ಲಿ ವಿದ್ಯುತ್‌ ವಿಸರ್ಜನೆಯಾಗಿ ಕ್ಷಣಾರ್ಧದಲ್ಲಿ ಎಲೆಗಳನ್ನು ಭದ್ರವಾಗಿ ಮಡಚಿಕೊಂಡು ಅದನ್ನು ಜೀರ್ಣಿಸಿಕೊಳ್ಳುತ್ತದೆ.

ಕೀಟಗಳನ್ನೇ ಏಕೆ ಹಿಡಿಯುತ್ತವೆ?
ಈ ಕೀಟಾಹಾರಿ ಸಸ್ಯಗಳು ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತವೆ. ಆ ಪ್ರದೇಶದ ಮಣ್ಣಿನಲ್ಲಿ ಸಾರಜನಕ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಾಂಸಾಹಾರಿ ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ಸಾರಜನಕವನ್ನು ಪಡೆದುಕೊಳ್ಳಲು ಕೀಟಗಳನ್ನು ಭಕ್ಷಿಸುತ್ತವೆ. ದಕ್ಷಿಣ ಅಮೆರಿಕಾ, ಕ್ಯಾಲಿಫೋರ್ನಿಯಾ, ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಮಾತ್ರ ಬೃಹತ್‌ ಪ್ರಮಾಣದಲ್ಲಿ ಕಂಡುಬರುವ ಈ ಸಸ್ಯಗಳ ಹಲವಾರು ಪ್ರಭೇಧಗಳು ಈಶಾನ್ಯ ಭಾರತದ ರಾಜ್ಯಗಳಲ್ಲೂ ಕಾಣುತ್ತವೆ. ಅಲಂಕಾರಿಕ ಸಸ್ಯಗಳನ್ನು ಬೆಳೆಸಿದಷ್ಟು ಸುಲಭವಾಗಿ ಇವುಗಳನ್ನು ಮನೆಯ ಕೈತೋಟಗಳಲ್ಲಿ ಬೆಳೆಸಲಾಗದು.

ಹರೀಶ್‌

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.