ಬಟ್ಟಲು ಬ್ಯಾಲೆನ್ಸ್‌


Team Udayavani, Feb 28, 2019, 12:30 AM IST

1.jpg

ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್‌ ರೀಡಿಂಗ್‌, ಇಲ್ಯೂಶನ್‌, ಇತ್ಯಾದಿ… ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾತಂತ್ರಗಳು ಪ್ರಾರಂಭಿಕ ಹಂತದ್ದು ಮತ್ತು ಯಾವುದೇ ಅಪಾಯವಿಲ್ಲದೆ, ಯಾರ ನೆರವಿಲ್ಲದೆ, ಸರಳವಾಗಿ ನೀವೇ ಮಾಡಬಹುದಾದ ತಂತ್ರಗಳು. ಈ ಬಾರಿ ನಾನು ಒಂದು ಬಟ್ಟಲನ್ನು ಒಂದು ಕಾರ್ಡ್‌ ಮೇಲೆ ಬ್ಯಾಲೆನ್ಸ್ ಮಾಡುವ ಮ್ಯಾಜಿಕ್‌ ಹೇಳಿ ಕೊಡುತ್ತೇನೆ.

ಪ್ರದರ್ಶನ: 
ಯಾವುದೇ ಒಂದು ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿ, ಅದರ ಎಲ್ಲಾ ಭಾಗಗಳನ್ನೂ ಎಲ್ಲಾ ಕೋನದಲ್ಲೂ ತಿರುಗಿಸಿ ತೋರಿಸುತ್ತಾ ಉದ್ದುದ್ದವಾಗಿ ಟೇಬಲ್‌ ಮೇಲೆ ನಿಲ್ಲಿಸುತ್ತಾನೆ. ಕಾರ್ಡ್‌ ಆಶ್ಚರ್ಯಕರ ರೀತಿಯಲ್ಲಿ ನಿಲ್ಲುತ್ತದೆ. ಜಾದೂಗಾರ ಅಷ್ಟಕ್ಕೇ ತನ್ನ ಮ್ಯಾಜಿಕ್‌ ನಿಲ್ಲಿಸದೆ ಆ ಕಾರ್ಡ್‌ ಮೇಲೆ ಅರ್ಧ ನೀರು ತುಂಬಿರುವ ಪ್ಲಾಸ್ಟಿಕ್‌ ಲೋಟವೊಂದನ್ನು ನಿಲ್ಲಿಸಿ, ಛೂ ಮಂತ್ರ ಹಾಕಿ ಕೈ ಬಿಡುತ್ತಾನೆ. ಲೋಟ ಕಾರ್ಡ್‌ ಮೇಲಿಂದ ಬೀಳದೆ ಬ್ಯಾಲೆನ್ಸ್ ಪಡೆದು ನಿಲ್ಲುತ್ತದೆ. ಮಿಲಿಮೀಟರ್‌ನಷ್ಟು ಅಗಲವಿರುವ ಕಾರ್ಡ್‌ ತಾನಾಗಿಯೇ ನಿಲ್ಲುವುದು ಕಷ್ಟ, ಅದರ ಮೇಲೆ ನೀರು ತುಂಬಿರುವ ಕಪ್‌ ನಿಲ್ಲಿಸೋದೆ ಈ ಮ್ಯಾಜಿಕ್‌.

ಬೇಕಾಗುವ ಸಾಮಾನುಗಳು:
ಸ್ವಲ್ಪ ಗಟ್ಟಿಯಿರುವ (ವಿಸಿಟಿಂಗ್‌ ಕಾರ್ಡ್‌, ಇಸ್ಪೀಟ್‌ ಕಾರ್ಡ್‌ ಯಾವುದಾದರೂ ಸರಿ)ಒಂದೇ ತರಹದ ಎರಡು ಕಾರ್ಡ್‌ಗಳು, ಅಂಟು, ಪ್ಲಾಸ್ಟಿಕ್‌ ಲೋಟ, ಬಣ್ಣದ ನೀರು

ತಂತ್ರ:
ಒಂದು ಕಾರ್ಡನ್ನು ಉದ್ದುದ್ದಕ್ಕೆ  ಸರಿಯಾಗಿ ಅರ್ಧ ಭಾಗವನ್ನು ಮಡಚಿ ಗೆರೆ ಬೀಳುವಂತೆ ಕೈಯಿಂದ ತಿಕ್ಕಿ. ಈಗ ಅದರ ಮುಂದಿನ ಒಂದು ಭಾಗಕ್ಕೆ ಮಾತ್ರ ಅಂಟನ್ನು ಹಚ್ಚಿ ಅದನ್ನು ಇನ್ನೊಂದು ಕಾರ್ಡಿನ ಹಿಂಬದಿಗೆ ಹಚ್ಚಿ ಒತ್ತಿ ಹಿಡಿಯಿರಿ.(1ನೇ ಚಿತ್ರ ಗಮನಿಸಿ) ಅರ್ಧಕ್ಕೆ ಅಂಟಿಸಿರುವುದರಿಂದ ಇನ್ನರ್ಧ ಹಾಗೇ ಇರುತ್ತದೆ. ಕಾರ್ಡ್‌ ತೋರಿಸುವಾಗ ನಿಮ್ಮ ಕೈ ಆಂಟಿಸದೆ ಇರುವ ಭಾಗದ ತುದಿಯನ್ನು ಹಿಡಿದು ಪ್ರದರ್ಶಿಸಿ (2ನೇ ಚಿತ್ರ ಗಮನಿಸಿ). ಆಗ ನಿಮ್ಮ ಕೈಯಲ್ಲಿರುವುದು ಎರಡು ಕಾರ್ಡ್‌ಗಳು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಟೇಬಲ್‌ ಮೇಲೆ ಇಡುವಾಗ ಯಾರಿಗೂ ಗೊತ್ತಾಗದಂತೆ, ಅಂಟಿಸದೆ ಇರುವ ಭಾಗವನ್ನು ತೆರೆದು ಇಡಿ. ಈಗ ನಿಮಗೆ “ಖ’ ಆಕಾರದ ಪುಟಾಣಿ ಟೇಬಲ್‌ ಒಂದು ರೆಡಿಯಾಗುತ್ತದೆ (3ನೇ ಚಿತ್ರ ಗಮನಿಸಿ). ಅದರ ಮೇಲೀಗ ಪ್ಲಾಸ್ಟಿಕ್‌ ಕಪ್‌ ಮಾತ್ರವಲ್ಲ ನಿಮ್ಮ ಮೊಬೈಲ್‌ಅನ್ನು ಕೂಡ ಇಟ್ಟು ಅಚ್ಚರಿ ಪಡಿಸಬಹುದು. ನೆನಪಿರಲಿ ಪ್ರದರ್ಶನದ ವೇಳೆ ಪ್ರೇಕ್ಷಕರು ವೇದಿಕೆಯ ಮುಂದೆ ಮಾತ್ರ ಇರುವಂತೆ ನೋಡಿಕೊಳ್ಳಿ.
ಈ ಮ್ಯಾಜಿಕ್‌ ಕುರಿತು ಇನ್ನೂ ನಿಖರವಾಗಿ ತಿಳಿಯಲು ಈ ವಿಡಿಯೊ ನೋಡಿ- bit.ly/2Nrl0y6

-ಗಾಯತ್ರಿ ಯತಿರಾಜ್‌ 

ಟಾಪ್ ನ್ಯೂಸ್

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.