ಬಿಷಪ್ ಅಲೋಶಿಯಸ್ರಿಗೆ ಹುಟ್ಟು ಹಬ್ಬದ ಶುಭಾಶಯ
Team Udayavani, Jun 22, 2018, 12:20 PM IST
ಮಹಾನಗರ: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅವರು ಗುರುವಾರ ಕೊಡಿಯಾಲಬೈಲ್ ನಲ್ಲಿರುವ ಬಿಷಪ್ಸ್ ಹೌಸ್ಗೆ ಭೇಟಿ ನೀಡಿ ಬಿಷಪ್ ವಂ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರಿಗೆ 77ನೇ ಜನ್ಮ ದಿನಾಚರಣೆಯ ಶುಭಾಶಯ ಕೋರಿದರು.
ಬಿಷಪ್ ಅವರಿಗೆ ಪುಷ್ಪಗುಚ್ಛ ನೀಡಿ ಹಾರ ಹಾಕಿ ಫಲ ಕಾಣಿಕೆಯನ್ನು ನೀಡಿದ ಸಚಿವರು ಬಿಷಪ್ ಅವರ ಪ್ರತಿಯೊಂದು ಕೆಲಸಗಳೂ ಶುಭಪ್ರದವಾಗಲಿ ಎಂದರು. ಅಲ್ಲದೆ ತನಗೆ ಬಿಷಪ್ ಅವರು ನಿರಂತರ ಮಾರ್ಗದರ್ಶನ ನೀಡುವಂತೆ ಸಚಿವರು ವಿನಂತಿಸಿದರು.
ತಾನು ಈ ಹಿಂದೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವನಾಗಿದ್ದಾಗ ತನ್ನನ್ನು ಹಲವಾರು ಕಾರ್ಯಕ್ರಮಗಳಿಗೆ ಬಿಷಪ್ ಅವರು ಆಹ್ವಾನ ನೀಡಿರುವುದನ್ನು ನೆನಪಿಸಿದ ಸಚಿವ ಖಾದರ್ ಈ ಬಾರಿ ಚುನಾವಣೆಯಲ್ಲಿ ಗೆದ್ದಾಗ ತಾನು ಬಿಷಪ್ಸ್ ಹೌಸ್ಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೆ. ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಿಷಪ್ ಅವರನ್ನು ಭೇಟಿಯಾಗಲು ಬಯಸಿದ್ದೆನು. ಇದೀಗ ಅವರ ಜನ್ಮ ದಿನದಂದೇ ಭೇಟಿ ಮಾಡಿ ಶುಭಾಶಯ ಸಲ್ಲಿಸಲು ಸಂತಸವಾಗುತ್ತದೆ ಎಂದರು. ತಾ. ಪಂ. ಅಧ್ಯಕ್ಷ ಮಹಮದ್ ಮೋನು, ಪಿಯುಸ್ ಮೊಂತೇರೊ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್