ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್
Team Udayavani, Jul 13, 2018, 11:01 AM IST
ಕೈಕಂಬ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗುರುಪುರ ಕೈಕಂಬ ಜಂಕ್ಷನ್ನ ಸಾರ್ವಜನಿಕ ಶೌಚಾಲಯ ಬೀಗದ ಮುದ್ರೆ ಹಾಗೂ ನಾಗರಿಕರು ಬ್ಯಾನರ್ ಹಾಕಿ ಪಂಚಾಯತ್ ಆಡಳಿತ ವಿರುದ್ಧ ತಮ್ಮ ಆಕ್ರೋಶದ ಬಗ್ಗೆ ಉದಯವಾಣಿಯಲ್ಲಿ ಪ್ರಕಟಗೊಂಡ ವರದಿಗೆ ಪಡುಪೆರಾರ ಗ್ರಾಮ ಪಂಚಾಯತ್ ಗುರುವಾರ ಸ್ಪಂದಿಸಿದೆ.
ಗುರುವಾರ ಬೆಳಗ್ಗೆ ಪಡುಪೆರಾರ ಗ್ರಾಮ ಪಂಚಾಯತ್ ಎಚ್ಚೆತ್ತು ಶೌಚಾಲಯದ ಬೀಗ ತೆರೆದು ಪರಿಸರ ಹಾಗೂ ಶೌಚಾಲಯವನ್ನು ಸ್ವತ್ಛ ಮಾಡಿ, ಟ್ಯಾಂಕಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ಶೌಚಾಲಯ ಸೇವೆ ಸಿಗುವಂತೆ ಮಾಡಿದೆ. ಇದರ ನಿರ್ವಹಣೆಯ ಬಗ್ಗೆ ಪಂಚಾಯತ್ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.