ಕದ್ರಿ ಉದ್ಯಾನವನದಲ್ಲಿ ‘ಸೋಣದ ಜೋಗಿ’ ಪ್ರದರ್ಶನ, ಉಪನ್ಯಾಸ
Team Udayavani, Sep 17, 2018, 11:22 AM IST
ಮಹಾನಗರ: ತುಳುವೆರೆ ಆಯನೊ ಕೂಟ ಕುಡ್ಲ ಇದರ ನೇತೃತ್ವದಲ್ಲಿ ‘ಸೋಣದ ಜೋಗಿ’ ಪ್ರದರ್ಶನ ಮತ್ತು ಉಪನ್ಯಾಸ ಇತ್ತೀಚೆಗೆ ಕದ್ರಿ ಉದ್ಯಾನವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಡಾ| ಆರೂರು ಪ್ರಸಾದ್ ರಾವ್ ಮಾತನಾಡಿ, ಹಳ್ಳಿಯಲ್ಲಿ ನಡೆಯುವ ಸೋಣದ ಜೋಗಿಯನ್ನು ಪೇಟೆಯ ಜನರಿಗೂ ತಿಳಿಸುವ ಕಾರ್ಯ ಅಭಿನಂದನೀಯ ಎಂದರು. ಅಧ್ಯಕ್ಷತೆಯನ್ನು ದಯಾನಂದ ಕತ್ತಲ್ ಸಾರ್ ವಹಿಸಿದ್ದರು.
ದೈವಾರಾಧನೆ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಕುಲಾಲ್, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ|ಸದಾನಂದ ಪೆರ್ಲ, ಉದ್ಯಮಿ ಎಚ್. ಕೆ. ಪುರುಷೋತ್ತಮ್, ನ್ಯಾಯವಾದಿ ರಾಮಪ್ರಸಾದ್, ತುಳುವೆರೆ ಆಯನೊ ಕೂಟದ ಶ್ರೀನಿವಾಸ ಆಳ್ವ, ಡಾ| ರಾಜೇಶ್ ಆಳ್ವ ಬದಿಯಡ್ಕ, ಆಶಾ ಶೆಟ್ಟಿ ಅತ್ತಾವರ, ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಕಿಶೋರ್ ಕುಮಾರ್ ರೈ ಶೇಣಿ ಉಪಸ್ಥಿತರಿದ್ದರು. ಪೆರ್ಲದ ಸುರೇಶ್, ಸುನಿಲ್, ನಾರಾಯಣ ಬಳಗ ಸೋಣದ ಜೋಗಿ ಪ್ರದರ್ಶನ ನಡೆಸಿಕೊಟ್ಟರು.