ರಾಜಕಾರಣಿಗಳಿಂದ ಅಖಂಡ ಕರ್ನಾಟಕದ ಭವ್ಯತೆ ಮಂಕಾಗದು: ವೈ.ಎಸ್‌.ವಿ. ದತ್ತ


Team Udayavani, Nov 18, 2018, 10:40 AM IST

18-november-2.gif

ವಿದ್ಯಾಗಿರಿ (ಮೂಡಬಿದಿರೆ): ಅಖಂಡ ಕರ್ನಾಟಕದ ಸಾಮರಸ್ಯ ಹಾಗೂ ಸುದೀರ್ಘ‌ ಕಾಲದ ಕನ್ನಡದ ಅಸ್ಮಿತೆಯನ್ನು ಅಳಿಸಲು ಅಥವಾ ಮುರಿದು ಹಾಕಲು ಐದು ವರ್ಷಕ್ಕೆ ಬಂದು ಹೋಗುವ ರಾಜಕಾರಣಿಯಿಂದ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ವೈ.ಎಸ್‌.
ವಿ. ದತ್ತ ಹೇಳಿದ್ದಾರೆ. ಆಳ್ವಾಸ್‌ ನುಡಿಸಿರಿಯ ಎರಡನೇ ದಿನವಾದ ಶನಿವಾರ ‘ಅಖಂಡ ಕರ್ನಾಟಕ’ ವಿಚಾರದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು.

ಅಖಂಡ ಕರ್ನಾಟಕದ ಭವ್ಯತೆ ಯಾವುದೇ ಕಾರಣಕ್ಕೂ ಮುಕ್ಕಾಗದು. ಆದರೂ ಕೆಲವು ಭಾಗಗಳಿಗೆ ಆಗಿರುವ ತಾರತಮ್ಯದಿಂದ ಜನರಲ್ಲಿ ಅಸಮಾಧಾನ ಇದೆ ಎಂಬುದನ್ನು ಎಚ್ಚರದಿಂದ ಪರಿಗಣಿಸಬೇಕಿದೆ ಎಂದರು. ಕರ್ನಾಟಕಕ್ಕೆ ಏಕೀಕರಣ ಭಾಗ್ಯ ದೊರೆತರೂ ಪ್ರಾದೇಶಿಕ ಅಸಮಾನತೆ ತೊಡೆಯಲು ಸಾಧ್ಯವಾಗಿಲ್ಲ. ದಕ್ಷಿಣ ಕರ್ನಾಟಕದ ಒಂದು ಹೋಬಳಿಯ ಭೌಗೋಳಿಕ ವಿಸ್ತಾರ ಹಾಗೂ ಜನಸಂಖ್ಯೆಯ ಆಧಾರದಲ್ಲಿ ಉತ್ತರ ಕರ್ನಾಟಕದ ಒಂದು ಹೋಬಳಿಯನ್ನು ಪರಿಗಣಿಸಿದಾಗ ಅಜಗಜಾಂತರವಿದೆ.

ದ.ಕರ್ನಾಟಕದ ಒಂದು ಹೋಬಳಿ ಉತ್ತರ ಕರ್ನಾಟಕದ ಮೂರು ಹೋಬಳಿಗಳ ವಿಸ್ತಾರ ಪಡೆದಿರುತ್ತದೆ. ಸರಕಾರ ಮಾತ್ರ ಇದಾವುದನ್ನೂ ಪರಿಗಣಿಸದೆ ಒಂದೊಂದು ಹೋಬಳಿಗೆ ಸಾವಿರ ಕೋಟಿ ರೂ. ಎಂದು ಪ್ರಕಟಿಸುತ್ತದೆ. ಇದು ಸರಿಯಲ್ಲ, ಅನುದಾನ ಹಂಚಿಕೆ ವ್ಯತ್ಯಾಸ ಸರಿಪಡಿಸಲು ಆಯೋಗವೊಂದನ್ನು ಜಾರಿಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಏಕೀಕರಣ ಸಂದರ್ಭ ಕೆಂಗಲ್‌ ಹನುಮಂತಯ್ಯ ‘ಬಂಡೆಯೊಂದನ್ನು ಬೆಟ್ಟದಿಂದ ಉರುಳಿಸಿದ್ದೇನೆ. ಅದರ ವೇಗದಲ್ಲಿ ನಾನೂ ಓಡಬೇಕಿದೆ. ಇಲ್ಲವಾದರೆ ನಾನು ಹಿಂದೆ ಉಳಿಯುವ ಅಪಾಯವಿದೆ’ ಎಂದಿದ್ದರು. ಇಂದಿನ ಪರಿಸ್ಥಿತಿಗೆ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು. ಸಮ್ಮೇಳನಾಧ್ಯಕ್ಷೆ ಡಾ| ಮಲ್ಲಿಕಾ ಎಸ್‌. ಘಂಟಿ, ಡಾ| ಎಂ. ಮೋಹನ ಆಳ್ವ ಉಪಸ್ಥಿತರಿದ್ದರು

ಸಂಪತ್ತಿಗೆ ಸವಾಲ್‌!
ಉತ್ತರ ಕರ್ನಾಟಕ ಭಾಗದ ಜನರ ರಾಷ್ಟ್ರೀಕೃತ ಬ್ಯಾಂಕ್‌ ಠೇವಣಿ ಹಾಗೂ ನಗದೀಕರಣ ಲೆಕ್ಕಹಾಕಿದಾಗ ರಾಜ್ಯದಲ್ಲಿಯೇ ಮುಂದಿದೆ. ಆದರೆ ಬಡತನದ ಸೂಚ್ಯಂಕದಲ್ಲಿ ಉತ್ತರ ಕರ್ನಾಟಕವನ್ನು ಲೆಕ್ಕಹಾಕಿದಾಗ ಸರಾಸರಿ 21.02 ದರದ ಪೈಕಿ 40ರ ದರ ಪಡೆಯುವ ಮೂಲಕ ಹಿಂದಿದೆ. ಅಂದರೆ ಎಲ್ಲೋ ಒಂದು ಕಡೆ ವ್ಯತ್ಯಾಸ ಆಗಿದೆ ಎಂಬುದು ಸ್ಪಷ್ಟ. ಇದನ್ನು ಆಳವಾಗಿ ಪರಿಶೀಲಿಸಿದಾಗ ಉ.ಕ.ದಲ್ಲಿ ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ನಿಜವಾಗಿಯೂ ರಾಜಕಾರಣಿಗಳೇ ಹೊಣೆ .
– ವೈ.ಎಸ್‌.ವಿ. ದತ್ತ

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.