ತ್ಯಾಗದ ಸಂದೇಶ ಪ್ರಸಾರ: ಡಾ| ಹೆಗ್ಗಡೆ
Team Udayavani, Mar 18, 2019, 6:22 AM IST
ಬೆಳ್ತಂಗಡಿ : ಜೈನ ಧರ್ಮ ಇಂದು ಅತ್ಯಂತ ಪ್ರಸ್ತುತವಾಗಿದ್ದು, ಬಾಹುಬಲಿ ಮಹಾ ಮಸ್ತಕಾಭಿಷೇಕದ ಮೂಲಕ ತ್ಯಾಗದ ಸಂದೇಶ ಪ್ರಸಾರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಧರ್ಮಸ್ಥಳದ ರತ್ನಗಿರಿಯಲ್ಲಿ ಮಂಡ್ಯದ ಶ್ರೀ ಅನಂತನಾಥ ಜೈನ ಸಮಾಜದ ವತಿಯಿಂದ ನಡೆದ ಬಾಹುಬಲಿ ಮಹಾ ಮಸ್ತಕಾಭಿಷೇಕದ ಸಂದರ್ಭ ಅವರು ಮಾತನಾಡಿದರು.
ಮಾಧ್ಯಮದವರಿಗೆ ಅಭಿನಂದನೆ
ಮಸ್ತಕಾಭಿಷೇಕದ ಬಗ್ಗೆ, ಭಗವಾನ್ ಬಾಹುಬಲಿ ಜೀವನ -ಸಾಧನೆ ಕುರಿತು ದೃಶ್ಯ ಹಾಗೂ ಮುದ್ರಣ ಮಾಧ್ಯಮ ಸಮಗ್ರ ವರದಿ ನೀಡಿ ಜನರಿಗೆ ಸಂಪೂರ್ಣ ಮಾಹಿತಿ ನೀಡಿದೆ. ಬಾಹುಬಲಿ ಮೂರ್ತಿ ಸಾಗಾಟ, ಪ್ರತಿಷ್ಠಾಪನೆ, ಮಸ್ತಕಾಭಿಷೇಕದ ಪೂರ್ವತಯಾರಿ ಹಾಗೂ ಮಹತ್ವದ ಸಮಗ್ರ ಮಾಹಿತಿ ಕಲೆ ಹಾಕಿ ಲೇಖನ ಪ್ರಕಟಿಸಿದ್ದಾರೆ.ಅವರ ವರದಿಯ ಶೈಲಿ, ಸಂಗ್ರಹ ಹಾಗೂ ಪೂರ್ವತಯಾರಿ ನನಗೆ ಆಶ್ಚರ್ಯ ಹಾಗೂ ಕೆಲವು ಘಟನೆಗಳು ನನ್ನಲ್ಲಿ ಸಂತೋಷ ತರಿಸಿತು ಎಂದು ಡಾ| ಹೆಗ್ಗಡೆ ಹೇಳಿದರು.
ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಪತ್ರಕರ್ತರನ್ನು ವಿಶೇಷವಾಗಿ ಗೌರವಿಸಿದರು. ಮಾಧ್ಯಮದ ಸರ್ವ ಸದಸ್ಯರಿಗೂ ಮಸ್ತಕಾಭಿಷೇಕ ಮಾಡಲು ಹೆಗ್ಗಡೆಯವರು ಅವಕಾಶ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದ್ರಾಜೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇನ್ದ್ರ ಕುಮಾರ್, ಸುಪ್ರಿಯಾ ಹರ್ಷೇನ್ದ್ರಕುಮಾರ್, ಡಿ. ರಾಜೇಂದ್ರಕುಮಾರ್, ನೀತಾ ರಾಜೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಡಾ| ಬಿ. ಯಶೋವರ್ಮ, ಪೂರಣ್ ವರ್ಮ ಉಪಸ್ಥಿತರಿದ್ದರು.
ಮಾ. 24: ಮಸ್ತಕಾಭಿಷೇಕ
ಮಾ. 24ರಂದು ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಈ ಬಾರಿಯ ಕೊನೆಯ ಮಹಾ ಮಸ್ತಕಾಭಿಷೇಕ ಜರಗಲಿದೆ.
ಅನರ್ಘ್ಯ ರತ್ನ ಡಾ| ಹೆಗಡೆ
ಧರ್ಮಸ್ಥಳದಲ್ಲಿ ನಡೆದ ಮಸ್ತಕಾಭಿಷೇಕದ ಸವಿನೆನಪಿಗಾಗಿ ರಾಜ್ಯದ ಇನ್ನೂರು ಕೆರೆಗಳ ಸಂರಕ್ಷಣ ಕಾರ್ಯ ಅತ್ಯಂತ ಪುಣ್ಯದ ಕೆಲಸ. ಡಾ| ಹೆಗ್ಗಡೆಯವರು ಜೈನ ಧರ್ಮದ ಅನರ್ಘ್ಯ ರತ್ನ ಎಂದು ಮಂಡ್ಯದ ಆರತಿಪುರ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಹೇಮಾವತಿ ವೀ. ಹೆಗ್ಗಡೆಯವರ ಧರ್ಮ ಪ್ರಭಾವನಾ ಕಾರ್ಯ, ಸಾಹಿತ್ಯದ ಬಗ್ಗೆ ಚಿಂತನ-ಮಂಥನ, ಮುನಿಗಳ ಸೇವೆ, ಆಹಾರದಾನ, ಮಹಿಳಾ ಸಶಸಕ್ತೀಕರಣ ಮೊದಲಾದ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ