ಎಡವಟ್ಟು ಗಣಪನ ಸಮ್‌ಕಷ್ಟ


Team Udayavani, Jul 27, 2018, 5:24 PM IST

sankashtakara-ganapathi.jpg

“ನೀನು ಬೇರೆ, ನಿನ್ನ ಎಡಗೈ ಬೇರೇನಾ? ಏನು ಟೈಂಪಾಸ್‌ ಮಾಡೋಕೆ ಬಂದಿದ್ದೀಯಾ?’ ಅಂತ ರೇಗುತ್ತಾರೆ ಡಾಕ್ಟರ್‌. ಅವನು ಹೇಳುವುದು ಅವರಿಗೆ ನಂಬಲಿಕ್ಕೆ ಆಗುವುದೇ ಇಲ್ಲ. ಅವನು ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ಅವರ ಬಲವಾದ ನಂಬಿಕೆ. ಆದರೆ, ಅವನ ಸಮಸ್ಯೆಯೇ ಬೇರೆ. ಅದೊಂದು ಆಪರೇಷನ್‌ ಆದ ನಂತರ, ಒಮ್ಮೆ ತಲೆ ಸುತ್ತಿ ಬೀಳುತ್ತಾನೆ. ಅಲ್ಲಿಂದ ಅವನಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ.

ಏನೋ ಕೆಮಿಕಲ್‌ ರಿಯಾಕ್ಷನ್‌ ಆಗಿ, ಅವನ ಮೆದುಳಿಗೂ, ಎಡಗೈಗೂ ಸಂವಹನ ನಿಂತು ಹೋಗುತ್ತದೆ. ಅಲ್ಲಿಂದ ಅವನ ಎಡಗೈ ಅವನ ಮಾತು ಕೇಳುವುದಿಲ್ಲ. ಯಾರೋ ಹುಡುಗಿಗೆ ಪುಂಡರ ಬಗ್ಗೆ ಎಚ್ಚರಿಸುವುದಕ್ಕೆ ಹೋಗಿ ಅವಳಿಗೆ ಹೊಡೆಯಬಾರದ ಜಾಗಕ್ಕೆ ಹೊಡೆದು ಕೆಟ್ಟವನಾಗುತ್ತಾನೆ. ಇನ್ನೊಮ್ಮೆ ಎಳೆ ಮಗುವನ್ನು ಬ್ಯಾಗ್‌ ಹಿಡಿದ ಹಾಗೆ ಕೈಯಲ್ಲಿ ಹಿಡಿದು ಬರುತ್ತಾನೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಇನ್ನೇನು ಮಗುವಿನಿಂದ ಚೆಂದದ ಕೇಕ್‌ ಕಟ್‌ ಮಾಡಿಸಬೇಕು ಎನ್ನುವಷ್ಟರಲ್ಲಿ ಆ ಕೇಕ್‌ನ ಅಪ್ಪಚ್ಚಿ ಮಾಡಿ ನಗೆಪಾಟಲಿಗೀಡಾಗುತ್ತಾನೆ. ಹೀಗೆ ಅವನು (ಅಲ್ಲಲ್ಲ ಅವನ ಎಡಗೈ) ಮಾಡುವ ಅವಾಂತರಗಳು ಒಂದಲ್ಲ, ಎರಡಲ್ಲ. ಒಂದು ಕಡೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದರೆ, ಇನ್ನೊಂದು ಕಡೆ ಇಷ್ಟಪಟ್ಟ ಹುಡುಗಿ ಕಣ್ಣೆದುರೇ ದೂರವಾಗುತ್ತಾಳೆ. ಇಂಥ ಸಂದರ್ಭದಲ್ಲಿ ಗಣಪತಿ ಏನು ಮಾಡಬೇಕು.

ಕನ್ನಡ ಚಿತ್ರರಂಗದಲ್ಲಿ ಅನೇಕ ಖಾಯಿಲೆಗಳ ಬಗ್ಗೆ ಚಿತ್ರಗಳಾಗಿವೆ. ಈ ಬಾರಿ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಕನ್ನಡಕ್ಕೆ ಹೊಸದಾದ ಖಾಯಿಲೆಯನ್ನು ತಂದು ಸಿನಿಮಾ ಮಾಡಿದ್ದಾರೆ. ಈ ಖಾಯಿಲೆಯ ಕುರಿತಾದ ಸಿನಿಮಾ ತಮಿಳಿನಲ್ಲಿ ಬಂದಿದ್ದರೂ, ಇದು ಯಾವುದೇ ಚಿತ್ರದ ರೀಮೇಕ್‌ ಅಲ್ಲ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಗಣಪತಿ ಎಂಬ ವ್ಯಂಗ್ಯಚಿತ್ರಕಾರನೊಬ್ಬನ ಕಥೆಯನ್ನು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ.

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆಯಿಂದ ಬಳಲುತ್ತಿರುವ ಅವನು, ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಮತ್ತು ಅದೆಲ್ಲದರಿಂದ ಹೇಗೆ ಆಚೆ ಬರುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಅವರು ಪ್ರಯತ್ನಿಸಿದ್ದಾರೆ. ಖುಷಿಯ ವಿಚಾರ ಏನೆಂದರೆ, ಚಿತ್ರಕ್ಕೆ ಏನು ಬೇಕು, ಎಷ್ಟು ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಅರ್ಜುನ್‌ ಅನಾವಶ್ಯಕವಾಗಿ ಎಳೆದಾಡುವುದಿಲ್ಲ ಮತ್ತು ಬೋರ್‌ ಹೊಡೆಸುವುದಿಲ್ಲ. ಅವರ ಸ್ಕ್ರಿಪ್ಟ್ ಅಷ್ಟೊಂದು ಗಟ್ಟಿಯಾಗಿದೆಯೋ ಅಥವಾ ಸಂಕಲನಕಾರ ವಿಜೇತ್‌ ಚಂದ್ರ ಅವರ ಕೈಚಳಕವೋ, ಒಟ್ಟಾರೆ ಇಡೀ ಚಿತ್ರ ಕೇವಲ ಎರಡು ಗಂಟೆಯ ಅವಧಿಯಿದ್ದು, ಅದರಲ್ಲೂ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ ಎನ್ನುವಷ್ಟು ವೇಗವಾಗಿ ಮುಗಿದು ಹೋಗುತ್ತದೆ.

ದ್ವಿತೀಯಾರ್ಧ ಅಲ್ಲಲ್ಲಿ ನಿಧಾನವಾಗಿದೆಯಾದರೂ ಒಟ್ಟಾರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎಂಬುದು ಚಿತ್ರದ ಹೆಗ್ಗಳಿಕೆ. ಚಿತ್ರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಬಹುದು. ಹೀಗಲ್ಲ, ಹಾಗೆ ಮಾಡಬಹುದಿತ್ತು ಎಂದನಿಸಬಹುದು. ಆದರೆ, ಮೊದಲ ಪ್ರಯತ್ನಕ್ಕೆ ಇದೊಂದು ನೀಟ್‌ ಆದ ಚಿತ್ರ ಎನ್ನಬಹುದು. ಇಡೀ ಚಿತ್ರ ಸುತ್ತುವುದು ಲಿಖೀತ್‌ ಶೆಟ್ಟಿ ಸುತ್ತ ಮತ್ತು ಅವರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇಲ್ಲಿ ಅವರಿಗೆ ಅನಾವಶ್ಯಕ ಬಿಲ್ಡಪ್‌ಗ್ಳಿಲ್ಲ ಅಥವಾ ಹೀರೋಯಿಸಂ ಇಲ್ಲ. ಒಬ್ಬ ಸಾಮಾನ್ಯ ಹುಡುಗನಂತೆ ಅವರು ಸರಳವಾಗಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಬಣ್ಣ ಹಚ್ಚಿರುವ ಶ್ರುತಿ ಗೊರಾಡಿಯಾ ಸಹ ಅಭಿನಯ ಮತ್ತು ಚೆಲುವಲ್ಲಿ ಕಡಿಮೆ ಇಲ್ಲ. ಮಿಕ್ಕಂತೆ ಪೋಷಕ ಪಾತ್ರಗಳೇ ಈ ಚಿತ್ರದ ಜೀವಾಳ.

ಅಚ್ಯುತ್‌ ಕುಮಾರ್‌ ಅಸಹಾಯಕ ತಂದೆಯಾಗಿ ಎಂದಿನಂತೆ ವೈನಾಗಿ ಅಭಿನಯಿಸಿದ್ದಾರೆ. ಇನ್ನು ನಾಗಭೂಷಣ್‌, ಮಂಜುನಾಥ ಹೆಗಡೆ ಮತ್ತು ಮನ್‌ದೀಪ್‌ ರಾಯ್‌ ಸಹ ಇಷ್ಟವಾಗುತ್ತಾರೆ. ಉದಯ್‌ ಲೀಲಾ ಛಾಯಾಗ್ರಹಣದಲ್ಲಿ ಇಡೀ ಪರಿಸರ ಕಣ್ಣಿಗೆ ಖುಷಿಕೊಟ್ಟರೆ, ರಿತ್ವಿಕ್‌ ಮುರಳೀಧರ್‌ರ ಎರಡು ಹಾಡುಗಳು ಕಿವಿಗೆ ಖುಷಿಕೊಡುತ್ತದೆ.

ಚಿತ್ರ: ಸಂಕಷ್ಟಕರ ಗಣಪತಿ
ನಿರ್ದೇಶನ: ಅರ್ಜುನ್‌ ಕುಮಾರ್‌
ನಿರ್ಮಾಣ: ರಾಜೇಶ್‌ ಬಾಬು, ಫೈಜಾನ್‌ ಖಾನ್‌ ಮುಂತಾದವರು
ತಾರಾಗಣ: ಲಿಖೀತ್‌ ಶೆಟ್ಟಿ, ಶ್ರುತಿ ಗೊರಾಡಿಯಾ, ಅಚ್ಯುತ್‌ ಕುಮಾರ್‌, ಮಂಜುನಾಥ ಹೆಗಡೆ, ನಾಗಭೂಷಣ್‌, ಮನದೀಪ್‌ ರಾಯ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.