ಭ್ರಷ್ಟತೆಯ ಸದ್ದಿಗೆ ಬುಲೆಟ್‌ ಮದ್ದು!


Team Udayavani, Nov 17, 2018, 12:08 PM IST

8mm.jpg

“ಒಂದು ಗನ್ನು, ಅದರೊಳಗಿನ 8 ಎಂಎಂ ಬುಲೆಟ್‌, ಬ್ಯಾಂಕ್‌ ದರೋಡೆ ಮತ್ತು ಆ ದರೋಡೆಕೋರರನ್ನು ಪತ್ತೆ ಹಚ್ಚುವ ಪೊಲೀಸರು…’ ಇವಿಷ್ಟೇ ಅಂಶಗಳನ್ನಿಟ್ಟುಕೊಂಡು ಮುಂದೇನಾಗುತ್ತೆ ಎಂಬ ಪ್ರಶ್ನೆ ಮತ್ತು ಕುತೂಹಲದೊಂದಿಗೆ ಸಾಗುವ ಈ ಕ್ರೈಮ್‌ ಥ್ರಿಲ್ಲರ್‌ ಚಿತ್ರ ಅಕ್ಷರಶಃ ನೋಡುಗರನ್ನು ತಕ್ಕಮಟ್ಟಿಗೆ ರಂಜಿಸುತ್ತೆ ಮತ್ತು ಗಂಭೀರತೆಗೂ ದೂಡುತ್ತೆ. ಅದಕ್ಕೆ ಕಾರಣ, ಚಿತ್ರದೊಳಗಿರುವ ಕಥೆ, ಚಿತ್ರಕಥೆ ಹಾಗು ತೆರೆ ಮೇಲೆ ಕಾಣುವ ಬೆರಳೆಣಿಕೆಯ ತರಹೇವಾರಿ ಪಾತ್ರಗಳು. ಸಿನಿಮಾ ರಂಜಿಸಬೇಕು ನಿಜ.

ಹಾಗಂತ, ಸಿನಿಮಾದ ಉದ್ದೇಶ ಕೇವಲ ಮನರಂಜನೆಯಾಗಿರಬೇಕೇ? ಅದರಾಚೆಗಿನ ಅಂಶಗಳ ಬಗ್ಗೆ ಯೋಚಿಸುವುದಾದರೆ, ಸಂದೇಶವೂ ಇರಬೇಕು, ವಾಸ್ತವತೆಯನ್ನು ಬಿಂಬಿಸುವಂತೆಯೂ ಇರಬೇಕು. ಆ ಅಂಶಗಳಿಲ್ಲಿ ಅಡಕವಾಗಿವೆ. ಇಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಪಾಯಕಾರಿ ವ್ಯಕ್ತಿಗಳಿದ್ದಾರೆ. ಅಂತಹವರ ವಿರುದ್ಧ ಸಿಡಿದೇಳುವ ಅಪರೂಪದ ವ್ಯಕ್ತಿತ್ವಗಳೂ ಕಾಣಸಿಗುತ್ತವೆ. ಇಂತಹ ಸೂಕ್ಷ್ಮವಿಷಯಗಳೇ “8 ಎಂಎಂ’ ಚಿತ್ರದ ಗಟ್ಟಿ ಅಡಿಪಾಯ ಅಂದರೆ ತಪ್ಪಿಲ್ಲ. ಇಲ್ಲಿ ಕಥೆ ಇದೆ.

ಅದಕ್ಕೆ ತಕ್ಕಂತಹ ನಿರೂಪಣೆಯೂ ಇದೆ. “8 ಎಂಎಂ’ ಬುಲೆಟ್‌ ಸ್ಪೀಡ್‌ನ‌ಷ್ಟೇ ಚಿತ್ರಕಥೆಯೂ ವೇಗ ಕಾಯ್ದುಕೊಂಡಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಒಂದು ಕ್ರೈಮ್‌ ಕಥೆ ಇಟ್ಟುಕೊಂಡು ಅಲ್ಲಲ್ಲಿ, ಭಾವನಾತ್ಮಕ ಅಂಶಗಳನ್ನು ತೋರಿಸುವ ಮೂಲಕ ನೋಡುಗರಲ್ಲಿ ಆಗಾಗ ಒಂದಷ್ಟು ಭಾವುಕತೆ ಹೆಚ್ಚಿಸುವ ತಾಕತ್ತು ಈ ಚಿತ್ರಕ್ಕಿದೆ. “8ಎಂಎಂ’ ಸುಮ್ಮನೆ ನೋಡಿಸಿಕೊಂಡು ಹೋಗುತ್ತಾದರೂ, ಕೆಲವೆಡೆ ಸಣ್ಣಪುಟ್ಟ ತಪ್ಪುಗಳನ್ನು ಹರಡಿದೆ. ಚಿತ್ರದ ಹಿನ್ನೆಲೆ ಸಂಗೀತ, ಕೆಲ ಪಾತ್ರಗಳ ಮಾತುಗಳು ಚಿತ್ರದ ಗಂಭೀರತೆಗೆ ಸಾಕ್ಷಿಯಾಗುವ ಮೂಲಕ ಸಣ್ಣಪುಟ್ಟ ತಪ್ಪುಗಳನ್ನು ಮರೆಮಾಚಿಸುತ್ತವೆ.

ಇಡೀ ಚಿತ್ರದ ಕೇಂದ್ರ ಬಿಂದು ಜಗ್ಗೇಶ್‌ ಮತ್ತು 8 ಎಂಎಂ ಬುಲೆಟ್‌ ಹೊಂದಿದ ಗನ್ನು. ಒಂದು ಕ್ರೈಮ್‌ ಥ್ರಿಲ್ಲರ್‌ಗೆ ಏನೆಲ್ಲಾ ಇರಬೇಕು, ಇರಬಾರದು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿದೆ. ಹಾಗಾಗಿ ಇಲ್ಲಿ, ಅನಗತ್ಯ ವಿಷಯಗಳು ಇಣುಕುವುದಿಲ್ಲ. ಇದು ತಮಿಳಿನ “8 ತೊಟ್ಟಕ್ಕಲ್‌’ ಚಿತ್ರದ ರೀಮೇಕ್‌. ಆ ಚಿತ್ರ ನೋಡಿದವರಿಗೆ ಇದು ಅಷ್ಟಾಗಿ ರುಚಿಸುತ್ತಾ? ಗೊತ್ತಿಲ್ಲ. ಆದರೆ, ಅದನ್ನು ಕನ್ನಡೀಕರಿಸಿರುವ ಜಾಣ್ಮೆ ಮೆಚ್ಚಬೇಕು.

ಇಲ್ಲಿ ಯಾವುದನ್ನೂ ವೈಭವೀಕರಿಸಿಲ್ಲ. ಎಲ್ಲವನ್ನೂ ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಿಸಿರುವುದು, ಪಾತ್ರಗಳ ಆಯ್ಕೆಯಲ್ಲಿ ಜಾಣತನ ಪ್ರದರ್ಶಿಸಿರುವುದು ಪ್ಲಸ್‌ ಎನ್ನಬಹುದು. ಇನ್ನು, ಸಸ್ಪೆಂಡ್‌ ಆದ ಪೊಲೀಸ್‌ ಅಧಿಕಾರಿ ತನಿಖೆ ನಡೆಸುವುದು ಸೇರಿದಂತೆ ಇನ್ನೂ ಕೆಲ ವಿನಾಕಾರಣ ಅಂಶಗಳು ನೋಡುಗರಿಗೆ ಪ್ರಶ್ನೆಯಾಗುತ್ತವೆ. ಜೊತೆಗೆ ಇಂತಹ ಚಿತ್ರಗಳಿಗೆ ಎಷ್ಟರಮಟ್ಟಿಗೆ ಲವ್‌ಟ್ರ್ಯಾಕ್‌ ಅಗತ್ಯವಾಗುತ್ತವೋ ಗೊತ್ತಿಲ್ಲ.

ಎಲ್ಲೋ ಒಂದು ಕಡೆ, ಗಂಭೀರವಾಗಿ ಸಾಗುವ ಚಿತ್ರದ ಮಧ್ಯೆ, ಲವ್‌ಟ್ರ್ಯಾಕ್‌ ಇಣುಕಿ, ಕೊಂಚ ತಾಳ್ಮೆ ಕೆಡಿಸುತ್ತದೆ ಎಂಬುದನ್ನು ಬಿಟ್ಟರೆ, ಕೆಲ ಅಂಶಗಳು ಆಪ್ತವಾಗಿಸಿ ನೋಡಿಸಿಕೊಂಡು ಹೋಗುತ್ತದೆ. ಈ ಚಿತ್ರ ನೋಡಿದರೆ, ಜಗ್ಗೇಶ್‌ ಸಂಪೂರ್ಣ ಬದಲಾಗಿರುವುದು ಗೊತ್ತಾಗುತ್ತೆ. ಅಂದರೆ, ಅವರನ್ನು ಇಲ್ಲಿಯ ತನಕ ಹಾಸ್ಯದ ಝಲಕ್‌ನಲ್ಲಿ ನೋಡಿದವರಿಗೆ ಇಲ್ಲೊಂದು ದೊಡ್ಡ ಬದಲಾವಣೆ ಕಂಡರೆ ಅಚ್ಚರಿಯಿಲ್ಲ. ಅವರ ಈ ಬದಲಾವಣೆಗೆ ಕಾರಣ ಕಥೆ ಮತ್ತು ಪಾತ್ರ.

ಎಲ್ಲದ್ದಕ್ಕೂ ಹೆಚ್ಚಾಗಿ, ಕೊನೆಯ ಇಪ್ಪತ್ತು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರಲ್ಲೂ ಭಾವುಕತೆ ಹೆಚ್ಚಿಸುವ ನಟನೆ. ಇಲ್ಲಿ ಜಗ್ಗೇಶ್‌ ಅವರಿಗೆ ವಯಸ್ಸಾಯ್ತಾ ಅಂತ ಅಂದುಕೊಂಡರೂ, ವಯಸ್ಸು ಮುಖ್ಯವಲ್ಲ, ಚಿಂತನೆಯಷ್ಟೇ ಮುಖ್ಯ ಎಂಬುದನ್ನು ಆ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಷ್ಟು ದಿನ ನೋಡಿದ ಜಗ್ಗೇಶ್‌, ಇಲ್ಲಿ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ನಿರ್ವಹಿಸುವ ಮೂಲಕ ಒಬ್ಬ ಅಸಹಾಯಕ ವ್ಯಕ್ತಿಯಾಗಿ, ಭಾವನೆಗಳನ್ನು ಕೆದಕಿ ಎಲ್ಲರ ಎದೆಭಾರವಾಗಿಸಿ, ಹತ್ತಿರವಾಗುತ್ತಾರೆ.

ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಯೊಬ್ಬನ “8ಎಂಎಂ’ ಬುಲೆಟ್‌ ಇರುವ ಗನ್‌ ಕಳುವಾಗುತ್ತೆ. ಆ ಕಳುವಾದ ಗನ್‌ ಬಳಸಿ, ದರೋಡೆಯಾಗುತ್ತೆ, ಶೂಟೌಟ್‌ ಮಾಡಲಾಗುತ್ತೆ. ಆ ಗನ್‌ ಕದ್ದವರ್ಯಾರು, ಕೊಲೆ ಮಾಡಿದವರ್ಯಾರು, ಆ ಗನ್‌ ಕದ್ದವನು ಸಿಗುತ್ತಾನಾ, ಅವನು ಯಾತಕ್ಕಾಗಿ ದರೋಡೆ ಮಾಡ್ತಾನೆ, ಕೊಲೆಗೈಯುತ್ತಾನೆ ಎಂಬುದೇ ಕಥೆ. ಕುತೂಹಲವಿದ್ದರೆ, “8ಎಂಎಂ’ ನೋಡಲು ಯಾವ ತಕರಾರಿಲ್ಲ.

ಇಷ್ಟು ದಿನ ವಿಲನ್‌ ಆಗಿ ನೋಡುತ್ತಿದ್ದ ವಸಿಷ್ಠ ಸಿಂಹ ಅವರನ್ನಿಲ್ಲಿ ಒಬ್ಬ ಮುಗ್ಧ ಪೊಲೀಸ್‌ ಅಧಿಕಾರಿಯನ್ನಾಗಿ ಕಾಣಬಹುದು. ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ದಕ್ಷ ಅಧಿಕಾರಿಯಾಗಿ ರಾಕ್‌ಲೈನ್‌ ವೆಂಕಟೇಶ್‌ ಇರುವಷ್ಟು ಕಾಲ ಇಷ್ಟವಾದರೆ, ಶೋಭರಾಜ್‌ ಭ್ರಷ್ಟ ಅಧಿಕಾರಿಯಾಗಿ ಗೇಮ್‌ಗೊಂದು ಮಜ ಕೊಡುತ್ತಾರೆ. ಮಯೂರಿ ಗ್ಲಾಮರ್‌ಗಷ್ಟೇ ಸೀಮಿತ. ಆದಿಲೋಕೇಶ್‌ ಸೇರಿದಂತೆ ಇತರೆ ಪಾತ್ರಗಳು ಕಥೆಯ ವೇಗಕ್ಕೆ ಹೆಗಲು ಕೊಟ್ಟಿವೆ. ಜೂಡಾ ಸ್ಯಾಂಡಿ ಸಂಗೀತ ಪರವಾಗಿಲ್ಲ. ಎ.ಆರ್‌.ವಿನ್ಸೆಂಟ್‌ ಛಾಯಾಗ್ರಹಣ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಚಿತ್ರ: 8 ಎಂಎಂ
ನಿರ್ಮಾಣ: ನಾರಾಯಣ ಬಾಬು, ಪ್ರದೀಪ್‌, ಸಲೀಂ ಶಾ
ನಿರ್ದೇಶನ: ಹರಿಕೃಷ್ಣ ಎಸ್‌.
ತಾರಾಗಣ: ಜಗ್ಗೇಶ್‌, ವಸಿಷ್ಠ ಸಿಂಹ, ಮಯೂರಿ, ರಾಕ್‌ಲೈನ್‌ ವೆಂಕಟೇಶ್‌, ಶೋಭರಾಜ್‌, ಆದಿಲೋಕೇಶ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

blink kannada movie review

Blink movie review; ಸಮಯದ ಹಿಂದೆ ಸವಾರಿ…

ranganayaka movie review

Ranganayaka Movie Review; ಗುರುವಿನ ಆದಿ ಪುರಾಣ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.