ಪುತ್ತೂರು: ಇಂದಿರಾ ಕ್ಯಾಂಟೀನ್ ಪ್ರಕ್ರಿಯೆಗೂ ಬ್ರೇಕ್
Team Udayavani, Mar 29, 2018, 5:04 PM IST
ನಗರ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವ ರಾಜ್ಯ ಸರಕಾರದ ಯೋಜನೆಯ ಭಾಗವಾಗಿ ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್ಗೆ ಜಾಗ ಗೊತ್ತುಪಡಿಸಿ, ನೆಲ ಸಮತಟ್ಟು ಮಾಡಲಾಗಿತ್ತು. ಮಂಗಳವಾರದಿಂದ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇಂದಿರಾ ಕ್ಯಾಂಟೀನ್ ಆರಂಭಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದ್ವಾರದ ಬಳಿಯಲ್ಲೇ ಇಂದಿರಾ ಕ್ಯಾಂಟೀನ್ ಗೆ ಜಾಗ ಗೊತ್ತುಪಡಿಸಲಾಗಿ, ಸಮತಟ್ಟು ಮಾಡುವ ಸಂದರ್ಭ, ಅತೀ ಶೀಘ್ರ ಇಂದಿರಾ ಕ್ಯಾಂಟೀನ್ ಕೆಲಸ ಆರಂಭಗೊಳ್ಳಲಿದೆ ಎಂದು ಶಾಸಕಿ ಭರವಸೆ ನೀಡಿದ್ದರು.
ಎರಡೇ ದಿನ ಸಾಕಿತ್ತು!
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಎರಡೇ ದಿನ ಸಾಕು. ಸ್ಸ್ಲ್ಯಾಬ್ ಗಳನ್ನು ತಂದು ನೆಡುವುದಷ್ಟೇ. ಗೋಡೆ ಕಟ್ಟುವ ಪ್ರಶ್ನೆಯೇ ಇಲ್ಲ. ಎರಡೇ ದಿನಗಳಲ್ಲಿ ಕಟ್ಟಡ ತಲೆ ಎತ್ತುತ್ತದೆ. ಬಳಿಕ ಕ್ಯಾಂಟೀನ್ ಕೆಲಸ ಶುರು ಎಂದೇ ಹೇಳಲಾಗಿತ್ತು. ಪುತ್ತೂರು ಪೇಟೆಯಲ್ಲಿ ಜಾಗದ ಕೊರತೆ ತುಂಬಾ ಇದೆ. ಇಂದಿರಾ ಕ್ಯಾಂಟೀನ್ಗೆ ಜಾಗ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಕೊನೆಗೂ ಬಿಇಒ ಕಚೇರಿ ಬಳಿಯಲ್ಲೇ ಸಣ್ಣ ಜಾಗ ಗೊತ್ತುಪಡಿಸಲಾಯಿತು.
ಶೀಘ್ರ ಗುದ್ದಲಿ ಪೂಜೆ ನೆರವೇರಿಸುವಂತೆ ಆಗ್ರಹ ವ್ಯಕ್ತವಾಯಿತು. ಸಾಕಷ್ಟು ವಿಳಂಬವಾಗಿ ಕೊನೆಗೂ ಜಾಗ ಸಮತಟ್ಟು ಮಾಡಲಾಯಿತು. ಅದಾಗಿ ಎರಡು ತಿಂಗಳು ಕಳೆದರೂ ಗುದ್ದಲಿ ಪೂಜೆ ನೆರವೇರಿಲ್ಲ. ಎರಡು ದಿನ ಬಿಡಿ, ಎರಡು ತಿಂಗಳು ಕಳೆದರೂ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಳ್ಳದೆ, ಕಡಿಮೆ ಬೆಲೆಯ ಆಹಾರ- ತಿಂಡಿ ಹೇಗಿರಲಿದೆ ಎಂಬ ರುಚಿಯೂ ಸಾರ್ವಜನಿಕರಿಗೆ ತಿಳಿಯದಂತಾಯಿತು.
ನಿಧಾನವಾದ ಕಾರ್ಯಗಳು
ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ಹೊರಡಿ ಸಲಾಗಿದೆ ಎಂದಿದ್ದರು. ಆದರೆ ಕ್ಯಾಂಟೀನ್ ತಲೆ ಎತ್ತಲೇ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ದೊಡ್ಡ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಆರಂಭವಾಗಿವೆ. ಆದರೆ, ಪುತ್ತೂರಿನಲ್ಲಿ ಪ್ರಕ್ರಿಯೆಯ ವಿಳಂಬದಿಂದಾಗಿ ಅದು ಕಾರ್ಯಗತವಾಗಲೇ ಇಲ್ಲ.
ಇನ್ನು ಅಸಾಧ್ಯ
ಪುತ್ತೂರಿನಲ್ಲೂ ಇಂದಿರಾ ಕ್ಯಾಂಟೀನ್ ಮಾಡಬೇಕೆಂಬ ಆಸೆ ತುಂಬಾ ಇತ್ತು. ನೀತಿ ಸಂಹಿತೆ ಪ್ರಕಟ ಆಗುವ ಒಂದು ದಿನದ ಮೊದಲು ಈ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಇನ್ನು ಅಸಾಧ್ಯವೇ ಸರಿ.
– ಶಕುಂತಳಾ ಟಿ. ಶೆಟ್ಟಿ,
ಶಾಸಕಿ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ