ತುಳು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ
Team Udayavani, Sep 26, 2018, 2:14 PM IST
ಸುಳ್ಯ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶಾರದಾಂಬ ಸೇವಾ ಸಮಿತಿ ಮತ್ತು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಆಶ್ರಯದಲ್ಲಿ ಅ. 16ರಂದು ನಡೆಯಲಿರುವ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ವಿರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯ ಕೆ.ಟಿ. ವಿಶ್ವನಾಥ, ಎಂ.ಜೆ. ಶಶಿಧರ್, ಜೆ.ಕೆ. ರೈ, ಪ್ರಶಾಂತ್ ರೈ ಮರುವಂಜ, ಪ್ರವೀಣಾ ರೈ ಮರುವಂಜ, ಜಯರಾಮ ಶೆಟ್ಟಿ ಕೆ.ಎನ್., ವಾಸುದೇವ ನಟುಬೆಟ್ಟು ಉಪಸ್ಥಿತರಿದ್ದರು.