ಗಾಂಧೀಜಿ ಕಟ್ಟಿಸಿದ ಬಾವಿ ಪುನರ್‌ನವೀಕರಣಕ್ಕೆ ಪ್ರಯತ್ನ


Team Udayavani, Jan 5, 2019, 6:18 AM IST

5-january-6.jpg

ಪುತ್ತೂರು : ಕಾಲನಿ ಜನರ ಬಗ್ಗೆ ಮಹಾತ್ಮಾ ಗಾಂಧೀಜಿ ಅವರಿಗಿದ್ದ ಕಾಳಜಿಯ ಪರಿಣಾಮ ಪುತ್ತೂರಿನ ರಾಗಿಕುಮೇರಿನಲ್ಲಿ ಬಾವಿಯನ್ನು ಕೊರೆಸ ಲಾಗಿತ್ತು. ಕಾಲಕ್ರಮೇಣ ಈ ಬಾವಿ ಅನಾಥವಾಗಿದ್ದು, ಇದೀಗ ಮತ್ತೊಮ್ಮೆ ಗಾಂಧೀಜಿಯ ನೆನಪಿಗಾಗಿ ಈ ಬಾವಿ ಯನ್ನು ನವೀಕರಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ರಾಗಿಕುಮೇರು ಬಾವಿಯನ್ನು ಶುಕ್ರವಾರ ವೀಕ್ಷಿಸಿದರು. ಮುಂದೆ ಜಾಗ ಯಾರ ಹೆಸರಿನಲ್ಲಿದೆ ಮತ್ತು ಇದನ್ನು ಅನುಸರಿಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಲೋಚಿಸಲಿದ್ದಾರೆ.

ಪುತ್ತೂರು- ಬಲ್ನಾಡು ರಸ್ತೆಯಲ್ಲಿ ಬೈಪಾಸ್‌ ರಸ್ತೆಯನ್ನು ತುಂಡರಿಸಿ ಮುಂದೆ ಸಾಗಿದಾಗ ಬಪ್ಪಳಿಗೆ ಎಂಬಲ್ಲಿ ಅಂಬಿಕಾ ವಿದ್ಯಾಸಂಸ್ಥೆಯ ರಸ್ತೆ ಎದುರಾಗುತ್ತದೆ. ಇದೇ ರಸ್ತೆಯ ಎಡಬದಿಯಲ್ಲಿ ಮುಖ್ಯರಸ್ತೆಗೆ ಕಾಣುವಂತೆ ಈ ಬಾವಿ ಇದೆ. ಸಮೀಪದಲ್ಲೇ ಗದ್ದೆಗಳಿದ್ದ ಕಾರಣ ಬಾವಿ ಹೆಚ್ಚು ಆಳವಾಗಿ ಕೊರೆಸಿದಂತಿಲ್ಲ. ಇದೀಗ ಗದ್ದೆಗಳು ತೋಟಗಳಾಗಿವೆ. ಆಸುಪಾಸಿನಲ್ಲಿ ಬೋರ್‌ ವೆಲ್‌ಗ‌ಳು ತಲೆ ಎತ್ತಿವೆ. ಕಾಲನಿ ನಿವಾಸಿಗಳಿಗೆ ನಗರಸಭೆಯ ನೀರು ಪೂರೈಕೆ ಆಗುತ್ತಿವೆ. ಹೀಗೆಲ್ಲ ಇರುವಾಗ ಮಹಾತ್ಮಾ ಗಾಂಧೀಜಿ ಕೊರೆಸಿದ ಬಾವಿ ನಿಷ್ಪ್ರಯೋಜಕ ಆದದ್ದು ವಿಶೇಷವೇನಲ್ಲ.

ಪುತ್ತೂರು ಪೇಟೆ ನಡುವೆ ಅಶ್ವತ್ಥ ಕಟ್ಟೆಯೊಂದಿದೆ. ಮಹಾತ್ಮಾ ಗಾಂಧೀಜಿ ಇದರಲ್ಲಿ ಕುಳಿತು ಭಾಷಣ ಮಾಡಿದ್ದರು. ಈ ಕಟ್ಟೆಯನ್ನು ಉಳಿಸಬೇಕು ಹಾಗೂ ಕಟ್ಟೆ ಬೇಕಾಗಿಲ್ಲ ಎಂಬ ವಾದ- ವಿವಾದ ನಡೆಯುತ್ತಿದೆ. ಇದರ ನಡುವೆ ಗಾಂಧೀಜಿ ಮುತುವರ್ಜಿಯಲ್ಲಿ ನಿರ್ಮಿಸಿದ ಬಾವಿ ಯಾರ ಗಮನಕ್ಕೂ ಬಂದೇ ಇರಲಿಲ್ಲ. ಮರೆಯಾಗುತ್ತಿರುವ ಬಾವಿ – ಕೆರೆಗಳ ನಡುವೆ ಒಂದು ಬಾವಿಯನ್ನು ಉಳಿಸಿದ ಪುಣ್ಯದ ಕಾರ್ಯಕ್ಕೆ ಸಹಾಯಕ ಆಯುಕ್ತರು ಮುಂದಾಗಿರುವುದು ಶ್ಲಾಘನೀಯ. ಇದು ಪೂರ್ಣರೂಪದಲ್ಲಿ ನಿರ್ಮಾಣವಾದರೆ, 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿ ಅವರಿಗೆ ನೀಡಿದ ಕೊಡುಗೆ ಇದೆಂದೂ ಪರಿಗಣಿಸಬಹುದು. ಸಹಾಯಕ ಆಯುಕ್ತರ ಜತೆಗೆ ಕಂದಾಯ ನಿರೀಕ್ಷಕ ದಯಾನಂದ್‌, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಎಂಜಿನಿಯರ್‌ ದಿವಾಕರ್‌, ವಸಂತ್‌ ಭೇಟಿ ನೀಡಿದರು.

ಯಾಕಾಗಿ ನಿರ್ಮಾಣ?
ರಾಗಿಕುಮೇರಿನಲ್ಲಿ ಬಾವಿ ಕೊರೆಸಲು ಮಹಾತ್ಮಾ ಗಾಂಧೀಜಿ ಸೂಚನೆ ನೀಡಿದ್ದರು. ಆದರೆ ಇದನ್ನು ನಿರ್ಮಿಸಿದವರು ಡಾ| ಶಿವರಾಮ ಕಾರಂತ, ಸದಾಶಿವ ರಾವ್‌, ಸುಂದರ ರಾವ್‌ ಅವರು. 1934ರ ಮಾರ್ಚ್‌ ನಲ್ಲಿ ಗಾಂಧೀಜಿ ಪುತ್ತೂರಿಗೆ ಬಂದಾಗ ಮೊದಲಿಗೆ ಭೇಟಿ ಕೊಟ್ಟದ್ದು ರಾಗಿಕುಮೇರು ಕಾಲನಿಗೆ. ಆಗ ಅಲ್ಲಿನ ನಿವಾಸಿಗಳು ತೋಡಿನ ನೀರನ್ನು ಕುಡಿಯಲು ಬಳಸುತ್ತಿ ದ್ದರು. ಇದನ್ನು ನೋಡಿ ಬೇಸರಗೊಂಡ ಗಾಂಧೀಜಿ, ನಿಮ್ಮೂರಿನ ಜನರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಜತೆಗಿದ್ದ ಶಿವರಾಮ ಕಾರಂತ, ಸದಾಶಿವ ರಾವ್‌, ಸುಂದರ ರಾವ್‌ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಅಲ್ಲದೇ, ಈ ಪ್ರದೇಶದಲ್ಲಿ ಒಂದು ಬಾವಿ ನಿರ್ಮಿಸಲು ಸೂಚನೆ ನೀಡಿದರು. ಅದರಂತೆ ಬಾವಿ ನಿರ್ಮಿಸಲಾಯಿತು. ಪಕ್ಕದಲ್ಲೇ ಇರುವ ರಾಗಿಕುಮೇರು ಶಾಲೆಯನ್ನು ಕೂಡ ಗಾಂಧೀಜಿ ಸೂಚನೆಯಂತೆ ಕಾಲನಿ ನಿವಾಸಿಗಳಿಗಾಗಿ ನಿರ್ಮಿಸಲಾಗಿತ್ತು. ಎಂಬ ಮಾಹಿತಿ ಇದೆ.

ಡಿಸಿಗೆ ಪ್ರಸ್ತಾವನೆ
ನಗರಸಭೆಯ ಕಾಮಗಾರಿಗಳಲ್ಲಿ ಇದನ್ನು ಸೇರಿಸಿಕೊಳ್ಳಬಹುದು. ಡಿಸಿಗೆ ಪ್ರಸ್ತಾವನೆ ಕಳುಹಿಸುವಾಗ ಇದನ್ನು ಸೇರಿಸಿಕೊಳ್ಳಬಹುದು. ಅದಕ್ಕೆ ಜಾಗದ ಮಾಲೀಕರ ಜತೆ ಮಾತುಕತೆ ನಡೆಸಬೇಕು. ಅವರೇ ಬಾವಿಯನ್ನು ಅಭಿವೃದ್ಧಿ ಪಡಿಸಿದರೆ ಉತ್ತಮ. ಅಥವಾ ಜಾಗವನ್ನು ನಗರಸಭೆಗೆ ನೀಡಿದರೆ, ಅಭಿವೃದ್ಧಿ ಮಾಡಬಹುದು.
– ರೂಪಾ ಶೆಟ್ಟಿ,
ಪೌರಾಯುಕ್ತೆ, ನಗರಸಭೆ

ಉಳಿಸುವ ಪ್ರಯತ್ನ
ಮಹಾತ್ಮಾ ಗಾಂಧೀಜಿ ಸೂಚನೆಯಂತೆ ಕಾಲನಿ ನಿವಾಸಿಗಳಿಗಾಗಿ ಬಾವಿ ನಿರ್ಮಿಸಲಾಗಿದ್ದು, ಇದನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ. ಬಾವಿಗೆ ರಿಂಗ್‌ ಹಾಕಿ, ಇನ್ನಷ್ಟು ಆಳ ಮಾಡಬೇಕು. ಸುತ್ತಲಿನ ಪರಿಸರವನ್ನು ಶುಚಿತ್ವವಾಗಿಟ್ಟು, ಅಭಿವೃದ್ಧಿ ಪಡಿಸಬೇಕು ಎಂಬ ಆಲೋಚನೆ ಇದೆ.
– ಎಚ್.ಕೆ. ಕೃಷ್ಣಮೂರ್ತಿ,
 ಸಹಾಯಕ ಆಯುಕ್ತ, ಪುತ್ತೂರು

ಎಸಿ ನೇತೃತ್ವ
ಇತ್ತೀಚೆಗೆ ತಾ| ಪತ್ರಕರ್ತರ ಸಂಘದ ವತಿಯಿಂದ ಗಾಂಧಿ ಸ್ಮೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಾಂಧೀಜಿ ಸೂಚನೆಯಂತೆ ನಿರ್ಮಿಸಿದ ಬಾವಿ ಅನಾಥ ಆಗಿರುವುದರ ಬಗ್ಗೆ ಗಮನ ಸೆಳೆಯಲಾಗಿತ್ತು. ತಕ್ಷಣ ಪ್ರತಿಕ್ರಿಯಿಸಿದ ಎಸಿ  ಎಚ್.ಕೆ. ಕೃಷ್ಣಮೂರ್ತಿ ಅವರು ಪರಿಶೀಲಿಸಿ, ಅಭಿವೃದ್ಧಿ ಪಡಿಸುವ ಬಗ್ಗೆ ಭರವಸೆ ನೀಡಿದ್ದರು. ಈಡೇರಿಸುವಲ್ಲಿ ಕ್ರಮ ಜರುಗಿಸಿದ್ದಾರೆ.

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.