ಮನೋಸಮಸ್ಯೆಗಳ ಹೊತ್ತು ಬದಲಾಗುತ್ತಿದೆ ಜಗತ್ತು!


Team Udayavani, Mar 11, 2018, 12:30 AM IST

bottom-left.jpg

ಪೋಷಕರು ಒಂದು ವಿಷಯವನ್ನು ಅರ್ಥಮಾಡಿ ಕೊಳ್ಳಬೇಕು. ಕೆಲವೊಮ್ಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಆರೋಗ್ಯ ಸಮಸ್ಯೆಗಳಿವೆಯಲ್ಲ, ಅವು ಪ್ರೌಢರು ಎದುರಿಸುವ ಸಮಸ್ಯೆಗಳಿಗಿಂತಲೂ ಭಿನ್ನವಾಗಿರುತ್ತವೆ. ಮಕ್ಕಳೆಂದರೆ “ಪುಟ್ಟ ಪ್ರೌಢ’ರಲ್ಲ. ಹೀಗಾಗಿ ಅವರನ್ನು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ವಿಶೇಷ ಅಭಿವೃದ್ಧಿ ದೃಷ್ಟಿಕೋನ ಅಗತ್ಯ.

ಕಳೆದೊಂದು ದಶಕದಲ್ಲಿ ಸಾಮಾಜಿಕ ಪ್ಯಾಟರ್ನ್ಗಳಲ್ಲಿ(ಮಾದರಿಗಳು) ಮತ್ತು ಟ್ರೆಂಡ್‌ಗಳಲ್ಲಿ ಮಹತ್ತರ ಪಲ್ಲಟಗಳಾಗಿವೆ. ಗಮನಾರ್ಹ ಸಂಗತಿಯೆಂದರೆ ಮಕ್ಕಳು, ಯುವ ಜನರು ಮತ್ತು ಕುಟುಂಬಗಳ ಮೇಲೆ ಈ ಬದಲಾವಣೆಗಳು/ ಪಲ್ಲಟಗಳು ಬಹಳಷ್ಟು ಪರಿಣಾಮ ಬೀರಿವೆ. ಉದಾಹರಣೆಗೆ, ಕಳೆದೊಂದು ದಶಕದಲ್ಲಿ ಮಕ್ಕಳು ಮತ್ತು ಹರೆಯದವರು/ಯುವಕರಲ್ಲಿನ ಖನ್ನತೆಯ ಪ್ರಮಾಣ ದುಪ್ಪಟ್ಟಾಗಿರುವುದು. 

20 ವರ್ಷಗಳ ಹಿಂದಕ್ಕೆ ಹೋಲಿಸಿ ನೋಡಿದಾಗ ಕಳೆದ ದಶಕದಲ್ಲಿ ಬೋರ್ಡ್‌ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪರ್ಸಟೇಂಜ್‌ ತೆಗೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಸಹಜವಾಗಿಯೇ ಇದರಿಂದ ಸ್ಪರ್ಧಾತ್ಮಕತೆ, ಪರೀಕ್ಷಾ ಒತ್ತಡ ಮತ್ತು ಖನ್ನತೆಯಂಥ ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಭಾವ್ಯತೆ ಹೆಚ್ಚುತ್ತಿದೆ. ಇದೇ ನಾಣ್ಯದ ಇನ್ನೊಂದು ಮುಖವೆಂದರೆ, ಶೈಕ್ಷಣಿಕವಾಗಿ ತುಸು ದುರ್ಬಲವಾಗಿ ರುವವರ ತುಲನಾತ್ಮಕ ವೈಫ‌ಲ್ಯ. ಇದು  ಕೂಡ ನಿಜಕ್ಕೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ರಿಸ್ಕ್ ಫ್ಯಾಕ್ಟರ್‌ ಆಗಿ ಬದಲಾಗಬಲ್ಲದು.
 
ದುರಂತವೆಂದರೆ ಇಂದು ಮದ್ಯ ಮತ್ತು ಮಾದಕ ದ್ರವ್ಯಗಳು ಸುಲಭವಾಗಿ ಕೈಗೆಟಕುತ್ತಿರುವುದರಿಂದ ಹಾಗೂ ಸಹವಯಸ್ಕರ ನಡುವಿನ ಸಹಜ ಒತ್ತಡಗಳಿಂದಾಗಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಬೆಳೆಯುತ್ತಿರುವ ಹುಡು ಗಿಯರೂ ಅನೇಕಾನೇಕ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ತೀರಾ ಅಸಹಜವೆನಿಸುವಂಥ, ತೆಳು ಮೈಕಟ್ಟಿನ ಮಾಡೆಲ್‌ಗ‌ಳ ಫೋಟೋಶಾಪ್ಡ್ ಚಿತ್ರಗಳು ಬೆಳೆಯುತ್ತಿರುವ ಹುಡುಗಿಯರಲ್ಲಿ ಅಸಾಧ್ಯವೆನಿಸುವಂಥ ಸ್ಟಾಂಡರ್ಡ್‌ಗಳನ್ನು ಸ್ಥಾಪಿಸಿಬಿಟ್ಟಿವೆ. ಇದರಿಂದಾಗಿ ತಮ್ಮ ದೇಹದ ಬಗ್ಗೆ ಕೀಳರಿಮೆ ಅನುಭವಿಸುವ, ಆಹಾರ ಸೇವನೆಯನ್ನು ಏರುಪೇರು ಮಾಡಿಕೊಳ್ಳುವ ಹುಡುಗಿಯರ ಪ್ರಮಾಣ ಹೆಚ್ಚುತ್ತಿದೆ. ಇದೆಲ್ಲದರ ಒಟ್ಟಾರೆ ಪರಿಣಾಮವೆಂಬಂತೆ ಕಚ್ಚಾ ಭಾವನಾತ್ಮಕ ನೋವನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ ಕೈ ಕುಯ್ದುಕೊಳ್ಳುವುದು ಅಥವಾ ಓವರ್‌ಡೋಸ್‌ ಮಾಡಿಕೊಳ್ಳುವ ಪ್ರವೃತ್ತಿ ಯುವಜನರಲ್ಲಿ ಹೆಚ್ಚುತ್ತಿದೆ. 

ಈ ಸಹಸ್ರಮಾನದ ಆರಂಭದಿಂದಂತೂ ಅಂತರ್ಜಾಲದ ಸುಲಭ ನಿಲುಕು ಹಾಗೂ ಅದರ ಅಪಾಯಗಳು ಯುವ ಜನರಲ್ಲಿ ತಮ್ಮ ಸಹ ವಯಸ್ಕರೊಂದಿಗೆ (ನಿರ್ದಿಷ್ಟವಾಗಿ) ಮತ್ತು ಸಮಾಜದಲ್ಲಿ(ಒಟ್ಟಾರೆಯಾಗಿ) ಅಂಗೀಕಾರಕ್ಕೊಳ ಬೇಕಾದ ಒತ್ತಡವನ್ನು ಹೆಚ್ಚಿಸಿಬಿಟ್ಟಿದೆ.
 
ಇತ್ತೀಚಿನ ದಿನಗಳಲ್ಲಿ ಸೈಬರ್‌ ಪುಂಡಾಟಿಕೆ ಕಣ್ಣು ಕುಕ್ಕುವಷ್ಟು ಅಧಿಕವಾಗುತ್ತಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳ ಸಮಕಾಲೀನ ಟ್ರೆಂಡ್‌ಗಳಿಗೆ ತಕ್ಕಂತೆ ಹೆಜ್ಜೆ ಹಾಕಬೇಕೆಂಬ ಸಮಾನಸ್ಕಂದರ ಒತ್ತಡವೂ ಕೂಡ! ಕಾಮುಕರಿಂದ ಮಕ್ಕಳ ಪೀಡನೆ(ಅಂತರ್ಜಾಲದ ಮೂಲಕ ಅಥವಾ ಕುಟಂಬ/ಪರಿಚಯಸ್ಥ ವಲಯ ದೊಳಗಿಂದ), ವಯೋ ಸಹಜವಲ್ಲದ ಲೈಂಗಿಕ ಅರಿವು, ಆರಂಭಿಕ ಪ್ರಾಯೋಗಿಕ ಸಾಮರ್ಥ್ಯವೆಲ್ಲವೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಬಲ್ಲವು. ಕೌಟುಂಬಿಕ ವ್ಯವಸ್ಥೆಯಲ್ಲಾಗಿರುವ ಬದಲಾವಣೆ, ವಿಚ್ಛೇದಿತ/ಏಕ-ಪೋಷಕ ಕುಟುಂಬಗಳ ಸಂಖ್ಯೆ ಇಂದು ಏರುಗತಿಯಲ್ಲಿದೆ. ಪರಿಚಿತ ಕೌಟುಂಬಿಕ ರಚನೆ ಮತ್ತು ಸಂವಹನಕ್ಕೆ ಹೊಂದಿಕೊಳ್ಳಲು ಮಗುವಿಗೆ ಸಮಯ ಬೇಕಾಗುತ್ತದೆ. ಹೀಗಾಗಿ, ಇದೇ ವೇಳೆಯಲ್ಲೇ ಪ್ರೌಢರ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಅವರ ಮನೆಯಲ್ಲಿನ ಮಕ್ಕಳಿಗೂ ಹಾನಿ ಉಂಟಾಗುತ್ತಿದೆ. ಮಾನಸಿಕ ಅಸ್ವಸ್ಥ ಪೋಷಕರಿದ್ದಾಗ ಮಕ್ಕಳು “ಚಿಕ್ಕ ಆರೈಕೆಗಾರರ’ ಪಾತ್ರ ವಹಿಸಿಕೊಳ್ಳಬೇಕಾಗುತ್ತದೆ. 

ಪೋಷಕರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಆರೋಗ್ಯ ಸಮಸ್ಯೆಗಳಿವೆಯಲ್ಲ, ಅವು ಪ್ರೌಢರು ಎದುರಿಸುವ ಸಮಸ್ಯೆಗಳಿಗಿಂತಲೂ ಭಿನ್ನವಾಗಿರುತ್ತವೆ. ಮಕ್ಕಳೆಂದರೆ “ಪುಟ್ಟ ಪ್ರೌಢ’ರಲ್ಲ. ಹೀಗಾಗಿ ಅವರನ್ನು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ವಿಶೇಷ ಅಭಿವೃದ್ಧಿ ದೃಷ್ಟಿಕೋನ ಅಗತ್ಯವಿರುತ್ತದೆ. ಒಂದು ವೇಳೆ ಮಗುವೊಂದರ ವರ್ತನೆ ಅಥವಾ ಭಾವನೆಗಳು ಅದರ ಸ್ವಾಭಾವಿಕ ಗುಣಕ್ಕೆ ಹೊಂದಿಕೆಯಾಗದಿದ್ದರೆ ಅಥವಾ ಮೇಲ್ನೋಟಕ್ಕೆ ಯಾವ ಗುರುತುಗಳು ಕಾಣಿಸದಿದ್ದರೂ ಅದಕ್ಕೆ ದೈಹಿಕ ಅನಾರೋಗ್ಯ ಬಾಧಿಸಿದಾಗ ಕೂಡಲೇ ಚೈಲ್ಡ್‌ ಮತ್ತು ಅಡೋಲ್ಸೆಂಟ್‌ ಸೈಕಿಯಾಟ್ರಿಸ್ಟ್‌ರ ಬಳಿ  ಕರೆದೊಯ್ಯುವುದು ಅಗತ್ಯ. ಹೆಸರೇ ಸೂಚಿಸುವಂತೆ ಈ ವೈದ್ಯರು ಮಕ್ಕಳು ಮತ್ತು ಹರೆಯದವರ ಮಾನಸಿಕ ಬೆಳವಣಿಗೆಯನ್ನು ಅರ್ಥಮಾಡಿಕೊಂಡು, ಬೆಂಬಲಿಸುವಲ್ಲಿ ಪರಿಣತಿ ಹೊಂದಿರುತ್ತಾರೆ. ಈ ಅನುಭವಿ ವೈದ್ಯರು ವಿಶೇಷ ಅಭಿವೃದ್ಧಿ ದೃಷ್ಟಿಕೋನವನ್ನು ಒದಗಿಸುವ ವಿಚಾರದಲ್ಲಿ ಪರಿಣತರಾಗಿರುತ್ತಾರೆ. ಅವರ ಈ ಪರಿಣತಿ ಯುವ ಜನರಲ್ಲಿನ ಮಾನಸಿಕ ಆರೋಗ್ಯ, ಬೆಳವಣಿಗೆ ಮತ್ತು ಭಾವನಾತ್ಮಕ ಸಮಸ್ಯೆಗಳ ನಿರ್ವಹಣೆಯಲ್ಲಿ ಮತ್ತು ಅವುಗಳು ಇನ್ನೊಮ್ಮೆ ಹೆಡೆಯೆತ್ತದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಮಕ್ಕಳಲ್ಲಿನ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಸರಿಯಾದ ಸಮಯಕ್ಕೆ ಅವರಿಗೆ ಸಹಾಯ ಮಾಡಿದರೆ, ಇದರಿಂದ ಮಕ್ಕಳ ಸಾಮರ್ಥಯ ವೃದ್ಧಿಸಲು ಸಾಧ್ಯವಾಗುತ್ತದೆ. 

ಮಕ್ಕಳು ಮತ್ತು ಹರೆಯದವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ. ಮಕ್ಕಳು ಮತ್ತು ಯುವ ಜನರು ಸುರಕ್ಷಿತವಾಗಿ ಇರಲು ಪೋಷಕರು, ಕುಟುಂಬ ಸದಸ್ಯರು, ಶಿಕ್ಷಕರು/ಶಾಲೆಗಳು ಪ್ರಮುಖ ಪಾತ್ರ ವಹಿಸಬೇಕಿದೆ. 

ಇದೆಲ್ಲದರ ನಡುವೆಯೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಣೆ ವಿಚಾರದಲ್ಲಿ ಪೋಷಕರು ಜಾಗೃತರಾಗಿರುವುದು, ಮಕ್ಕಳು ಮತ್ತು ಹರೆಯದವರು ಎದುರಿಸುವ ಸಹಜ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದು ಹೃದಯಸ್ಪರ್ಶಿ ಸಂಗತಿಯಾಗಿದೆ. ಈ ಅಂಶಗಳನ್ನೆಲ್ಲ ಒಗ್ಗೂಡಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ. 

– ಡಾ. ರಮ್ಯಾ ಮೋಹನ್‌

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.