ಚಿತ್ರಾನ್ನವೂ ಅಲ್ಲ; ಮೊಸರನ್ನವೂ ಅಲ್ಲ: ಇದು ವರ್ತಮಾನ
Team Udayavani, Mar 23, 2018, 7:30 AM IST
ಏನು ಟ್ರೇಲರ್ ಹೀಗಿದೆ?
“ವರ್ತಮಾನ’ ಚಿತ್ರದ ಟ್ರೇಲರ್ ನೋಡಿದವರೆಲ್ಲಾ ಈ ಮಾತು ಹೇಳಿದರಂತೆ. ಇದಕ್ಕೆ ನಿರ್ದೇಶಕ ಉಮೇಶ್ ಹೇಳುವುದೇನೆಂದರೆ, ಯಾಕೆ ಹೀಗೆ ಇರಬಾರದು ಅಂತ? ಜನಕ್ಕೆ ಚಿತ್ರಾನ್ನ ಗೊತ್ತು, ಮೊಸರನ್ನವೂ ಗೊತ್ತು. ಹೊಸದೇನಾದರೂ ಬಡಿಸೋಣ ಅಂತ ಬೇರೆ ತರಹ ಚಿತ್ರ ಮಾಡಿದ್ದೀವಿ. ಸುಮಾರು ಮೂರು ವರ್ಷದ ಕಷ್ಟ ಈ ಚಿತ್ರದಲ್ಲಿದೆ. ಎಡಿಟಿಂಗ್ಗೇ ಆರು ತಿಂಗಳ ಕಾಲ ಕೆಲಸ ಮಾಡಿದ್ದೇವೆ. ಒಟ್ಟಿನಲ್ಲಿ ಒಂದು ವಿಭನ್ನ ಪ್ರಯತ್ನ ಮಾಡಿದ್ದೀವಿ’ ಎನ್ನುತ್ತಾರೆ ನಿರ್ದೇಶಕ ಉಮೇಶ್.
“ವರ್ತಮಾನ’ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಹೇಮಾ ಮತ್ತು ಮನು ಬಿಲ್ಲೇಮನೆ ನಿರ್ಮಿಸಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೃಳುವುದಕ್ಕೆಂದೇ ಉಮೇಶ್, ತಮ್ಮ ಚಿತ್ರತಂಡದವರ ಜೊತೆಗೆ ಬಂದಿದ್ದರು. ಉಮೇಶ್ ಗಮನಿಸಿರುವಂತೆ, ಈ ತರಹದ ಚಿತ್ರಗಳನ್ನು ಜನ ಸ್ವೀಕರಿಸುವುದು ಕರ್ನಾಟಕ ಮತ್ತು ಫ್ರಾನ್ಸ್ನಲ್ಲಿ ಮಾತ್ರವಂತೆ.
“ಎಷ್ಟೋ ವರ್ಷಗಳ ಹಿಂದೆ ಉಪೇಂದ್ರ ತಮ್ಮ ಚಿತ್ರಗಳ ಮೂಲಕ ಕಥೆ ಹೇಳುವ ಪ್ಯಾಟರ್ನ್ ಬದಲಾಯಿಸಿದರು. ಆಮೇಲೆ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದಿಂದ ದುಡ್ಡು ಬರುತ್ತಾ ಎಂದು ಎಲ್ಲಾ ಕೇಳ್ತಾರೆ. ಬಂದರೆ ಗೆಲ್ತಿವಿ. ಇಲ್ಲಾ ಮುಳುಗ್ತಿವಿ. ಆದರೆ, ಈ ಚಿತ್ರವನ್ನು ಜನ ನೋಡುತ್ತಾರೆ ಎಂಬ ನಂಬಿಕೆ ನಮಗಿದೆ’ ಎನ್ನುತ್ತಾರೆ ಉಮೇಶ್.
ಇದು ಭೂತ ಮತ್ತು ಭವಿಷ್ಯದ ನಡುವೆ ನಡೆಯುವ ಒಂದು ಜರ್ನಿ ಎನ್ನುತ್ತಾರೆ ಸಂಚಾರಿ ವಿಜಯ್. “ಉಮೇಶ್ ಫಾರ್ಮುಲಾ ಮುರಿದು ಈ ಚಿತ್ರ ಮಾಡಿದ್ದಾರೆ. ಇದರ ನಿರೂಪಣಾ ಶೈಲಿ ಬೇರೆ ತರಹ ಇದೆ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ
ಮಾಡಲಾಗಿದೆ’ ಎಂದರು. ನಾಯಕಿ ಸಂಜನಾ ಪ್ರಕಾಶ್ ಗೆ ಇದುವರೆಗೂ ಕಥೆ ಗೊತ್ತಿಲ್ಲವಂತೆ. ನಿರ್ದೇಶಕರ ಮೇಲಿನ ನಂಬಿಕೆ ಮೇಲೆ ಅವರು ಚಿತ್ರದಲ್ಲಿ ನಟಿಸಿದ್ದಾರಂತೆ. ಇನ್ನು ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ವಾಣಿಶ್ರೀ ಸಹ ಅದೇ ತರಹ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ