ಪ್ಲಾಸ್ಟಿಕ್‌ ವಿರುದ್ಧ ಶ್ರೀಸಾಮಾನ್ಯನ ಹೋರಾಟ


Team Udayavani, May 4, 2018, 6:00 AM IST

s-36.jpg

ಹಂಸಲೇಖರ ಅನೇಕಲವ್ಯರ ಪೈಕಿ ಸಂಗೀತ ನಿರ್ದೇಶಕ ಇಂದ್ರಸೇನ ಅವರೂ ಒಬ್ಬರಂತೆ. ಹಾಗಾಗಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಂಸಲೇಖ ಅವರಿಂದ ಬಿಡುಗಡೆ ಮಾಡಿಸಬೇಕು ಎಂಬುದು ಇಂದ್ರಸೇನರ 17 ವರ್ಷಗಳ ಕನಸಾಗಿತ್ತಂತೆ. ಆ ಕನಸು ನನಸಾಗಿದೆ. ಇಂದ್ರಸೇನ ಸಂಗೀತ ಸಂಯೋಜಿಸಿರುವ “ಶ್ರೀಸಾಮಾನ್ಯ’ ಚಿತ್ರದ ಹಾಡುಗಳನ್ನು ಹಂಸಲೇಖ ಬಿಡುಗಡೆ ಮಾಡುವ ಮೂಲಕ ಅವರ ಕನಸು ನನಸು ಮಾಡಿದ್ದಾರೆ.

ಅಂದಹಾಗೆ, “ಶ್ರೀಸಾಮಾನ್ಯ’ ಹಾಡುಗಳನ್ನು ಬಿಡುಗಡೆಯಾಗಿದ್ದು ಕಲಾವಿದರ ಸಂಘದ ನೂತನ ಕಟ್ಟಡದಲ್ಲಿ. ಹಂಸಲೇಖ ಬಿಟ್ಟರೆ ಇದ್ದ ಇನ್ನೊಬ್ಬ ಮುಖ್ಯ ಅತಿಥಿ ಎಂದರೆ ಅದು ಲಹರಿ ವೇಲು. ಮಿಕ್ಕಂತೆ ನಿರ್ದೇಶಕ ಗುಣವಂತ ಮಂಜು, ನಾಯಕಿ ಶಕ್ತಿ ಶೆಟ್ಟಿ, ನಿರ್ಮಾಪಕರಾದ ಭಾರತಿ ಎಂ ಸುರೇಶ್‌ ಮತ್ತು ಸುರೇಶ್‌, ಇಂದ್ರಸೇನ ಮುಂತಾದವರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆ ಮಾಡಲಾಯಿತು.

ನಿರ್ಮಾಪಕ ಸುರೇಶ್‌ಗೆ ಚಿತ್ರ ಮಾಡುವ ಯೋಚನೆ ಇರಲಿಲ್ಲವಂತೆ. ಆದರೆ, ಗುಣವಂತ ಮಂಜು ಹೇಳಿದ ಕಥೆ ಕೇಳಿ ಚಿತ್ರ ಮಾಡಬೇಕಂತನಿಸಿತಂತೆ. ಅಂತದ್ದೇನಿದೆ ಈ ಚಿತ್ರದಲ್ಲಿ ಎಂದರೆ, ಪರಿಸರ ಕಾಳಜಿ ಎಂಬ ಉತ್ತರ ಬರುತ್ತದೆ. “ಚಿತ್ರದಲ್ಲಿ ಪ್ಲಾಸ್ಟಿಕ್‌ ಮತ್ತು ಪರಿಸರದ ಬಗ್ಗೆ ಸಂದೇಶವಿದೆ. ಇವತ್ತು ಪ್ಲಾಸ್ಟಿಕ್‌ನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿವೆ. ಅದೇ ರೀತಿ ಸಮಾರಂಭಗಳಲ್ಲಿ ಗಿಫ್ಟ್ ಕೊಡುವ ಬದಲು, ಹಾರ-ತುರಾಯಿ ಹಾಕುವ ಬದಲು ಒಂದು ಗಿಡ ಕೊಡಿ. ಸುಮ್ಮನೆ ದುಡ್ಡು ಖರ್ಚು ಮಾಡುವ ಬದಲು, ದಾನ-ಧರ್ಮ ಮಾಡಿದರೆ, ಆಗ ಪುಣ್ಯ ಸಿಗುತ್ತದೆ. ಇದು ನನ್ನ ಕಾಳಜಿ. ನನಗೆ ವೈಯಕ್ತಿವಾಗಿ ಎಲ್ಲರಿಗೂ ಸಂದೇಶ ಹೇಳುವುದು ಕಷ್ಟ. ಅದೇ ಕಾರಣಕ್ಕೆ “ಶ್ರೀಸಾಮಾನ್ಯ’ ಚಿತ್ರದ ಮೂಲಕ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದೇನೆ. ಶ್ರೀಸಾಮಾನ್ಯ, ಅಸಮಾನ್ಯರಾದರೆ ಬದಲಾವಣೆ ಕಾಣಬಹುದು’ ಎಂದು ಹೇಳಿದರು. ನಿರ್ಮಾಪಕರು ಹೇಳಿದಂತೆ, ಅಂದು ಗಣ್ಯರಿಗೆ ಹಾರ-ತುರಾಯಿ ಯಾವುದೂ ಹಾಕಲಿಲ್ಲ. ಅದರ ಬದಲು ಗಿಡಗಳನ್ನು ಕೊಡಲಾಯ್ತು. ಅಷ್ಟೇ ಅಲ್ಲ, ಚಿತ್ರದ ಹಾಡುಗಳ ಸಿಡಿಗಳನ್ನು ಬಾಳೆಎಲೆಗಳಲ್ಲಿ ಪೊಟ್ಟಣ ಕಟ್ಟಲಾಗಿತ್ತು. ಬಾಳೆ ಎಲೆ ತೆಗೆಯುವ ಮೂಲಕ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು. ಇನ್ನು ಹಂಸಲೇಖ ಅವರು ಶಿಳ್ಳೆ ಹೊಡೆಯುವುದರ ಮೂಲಕ ಟ್ರೇಲರ್‌ ತೋರಿಸುವುದಕ್ಕೆ ಅನುಮತಿ ಕೊಟ್ಟರು.

ಹಾಡುಗಳನ್ನು ಬಹಳ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದ ಹಂಸಲೇಖ, “ರೈತನಿಗೆ ಯೋಗಿ, ಸಾಮಾನ್ಯನಿಗೆ ಶ್ರೀಸಾಮಾನ್ಯ, ಕನ್ನಡಕ್ಕೆ ಕಲ್ಪವೃಕ್ಷ ಅಂತ ಹೇಳಿದವರು ಕುವೆಂಪು. ಶ್ರೀಸಾಮಾನ್ಯ ಎಂದರೆ ಸಾಮಾನ್ಯರಲ್ಲಿ ಮಾನ್ಯರಾದವರು ಅಂತ. ಸಿನಿಮಾ ಮಾಡಿ ಸಂದೇಶ ಕೊಡುವುದು ಹುಚ್ಚು ಸಾಹಸವೇ ಸರಿ. ಎಲ್ಲರೂ ದುಡ್ಡಿಗೆ ಸಿನಿಮಾ ಮಾಡಿದರೆ, ಆದರ್ಶಕ್ಕೆ ಸಿನಿಮಾ ಮಾಡೋರು ಯಾರು ಎಂಬ ಪ್ರಶ್ನೆ ಬರುವುದು ಸಹಜ. ಆದರ್ಶಕ್ಕೂ ಸಿನಿಮಾ ಮಾಡುವ ಜನರಿದ್ದಾರೆ. ಈ ಚಿತ್ರದಲ್ಲಿ ಪ್ಲಾಸ್ಟಿಕ್‌ ಬಿಡಿ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಬರೀ ಹೇಳಿದ್ದಷ್ಟೇ ಅಲ್ಲ, ಇಲ್ಲಿಂದಲೇ ಶುರು ಮಾಡಿದ್ದಾರೆ’ ಎಂದು ಹೇಳಿದರು.

ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಳ್ಳುವುದರ ಜೊತೆಗೆ ಗುಣವಂತ ನಿರ್ದೇಶಕ ಮತ್ತು ಹೃದಯವಂತ ನಿರ್ಮಾಪಕರು ಜೊತೆಯಾದಾಗ ಇದೊಂದು ಶ್ರೀಮಂತ ಚಿತ್ರವಾಗಿದೆ ಎಂದು ಹೇಳಿದರು. “ಈ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಲತಾ ಹಂಸಲೇಖ ಅವರು ಬರಬೇಕಿತ್ತು. ಏಕೆಂದರೆ, ಈ ಚಿತ್ರದಲ್ಲಿ ಅವರು ಹಾಡಿರುವ 500ನೇ ಹಾಡು ಇದೆ. ಈ ಚಿತ್ರಕ್ಕಾಗಿ “ಗಿಡ ನೆಡಿ’ ಎಂಬ ಹಾಡನ್ನು ಹಾಡಿದ್ದಾರೆ’ ಎಂದು ಹೇಳಿದರು.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.