ಫೆ.22 ರಿಂದ ಯಾರಿಗೆ ಯಾರುಂಟು


Team Udayavani, Feb 8, 2019, 12:30 AM IST

24.jpg

ನಿರ್ದೇಶಕ ಕಿರಣ್‌ ಗೋವಿ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, ಅವರ “ಯಾರಿಗೆ ಯಾರುಂಟು’ ಚಿತ್ರದ ಹಾಡುಗಳಿಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿರುವುದು. ಅಷ್ಟೇ ಅಲ್ಲ, ಚಿತ್ರ ಫೆಬ್ರವರಿ 22 ರಂದು ಬಿಡುಗಡೆಯಾಗುತ್ತಿರುವುದು. ಆ ಖುಷಿಯಲ್ಲಿ ಚಿತ್ರತಂಡದೊಂದಿಗೆ ಮಾತಿಗೆ ಆಗಮಿಸಿದ್ದರು ಕಿರಣ್‌ಗೋವಿ. ಮೊದಲು ಮಾತು ಶುರು ಮಾಡಿದ್ದು ಗೋವಿ. “ಈ ಚಿತ್ರಕ್ಕೆ ಶೀರ್ಷಿಕೆ ಯಾವುದನ್ನು ಇಡಬೇಕು ಅಂತ ಚರ್ಚಿಸುತ್ತಿರುವಾಗ, ನಮ್ಮ ಗುರೂಜಿ ಒಬ್ಬರು “ಯಾ’ ಅಕ್ಷರದಿಂದಲೇ ಶುರುಮಾಡಿ ಒಳ್ಳೆಯದಾಗುತ್ತೆ ಎಂಬ ಸಲಹೆ ಕೊಟ್ಟರು. “ಯಾ’ ಅಕ್ಷರದಿಂದ ಏನನ್ನು ಇಡಬಹುದು ಎಂದು ಯೋಚಿಸುತ್ತಿರುವಾಗ, ಕಥೆಗೆ ಪೂರಕವಾಗಿ “ಯಾರಿಗೆ ಯಾರುಂಟು’ ಶೀರ್ಷಿಕೆ ಸೂಕ್ತವೆನಿಸಿ ಇಡಲಾಗಿದೆ. ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದೊಮ್ಮೆ “ಯಾರಿಗೆ ಯರುಂಟು’ ಎಂಬ ಪದ ನೆನಪಾಗುತ್ತೆ. ಹಾಗಾಗಿ ಅದನ್ನೇ ಆಯ್ಕೆ ಮಾಡಿದ್ದೇವೆ. ಇನ್ನು, ಈ ಕಥೆಯನ್ನು ಮೊದಲು ಮೂರ್‍ನಾಲ್ಕು ನಿರ್ಮಾಪಕರಿಗೆ ಹೇಳಿದ್ದೆ. ಕಥೆ ಇಷ್ಟವಾದರೂ ಯಾರೊಬ್ಬರೂ ಆಸಕ್ತಿ ತೋರಲಿಲ್ಲ. ಕೊನೆಗೆ ನನ್ನ ಚಿಕ್ಕಪ್ಪ ಎಸ್‌.ಎ.ರಘುನಾಥ್‌, ಕಥೆ ಕೇಳಿ, ನಿರ್ದೇಶನಕ್ಕೆ ಅವಕಾಶ ಕೊಟ್ಟರು. ಆರಂಭದಲ್ಲಿ ಬಜೆಟ್‌ ಕಮ್ಮಿ ಇತ್ತು. ಎರಡನೇ ಹಂತದಲ್ಲಿ ಜಾಸ್ತಿಯಾಯ್ತು. ಆದರೆ, ಕಥೆಗೆ ಪೂರಕವಾಗಿದ್ದರಿಂದ ನಿರ್ಮಾಪಕರು ಕೇಳಿದ್ದೆಲ್ಲಾ ಕೊಟ್ಟು, ಅದ್ಭುತ ಸಿನಿಮಾ ಆಗಲು ಕಾರಣರಾಗಿದ್ದಾರೆ. ಈಗ ಅವರಿಗೆ ಸಿನಿಮಾ ಮಾಡಿದ್ದಕ್ಕೂ ಹೆಮ್ಮೆ ಇದೆ. ಇನ್ನು, ಎರಡು ತಿಂಗಳ ಹಿಂದೆಯೇ ಚಿತ್ರ ರಿಲೀಸ್‌ ಆಗಬೇಕಿತ್ತು. ದೊಡ್ಡ ಚಿತ್ರಗಳು ಇದ್ದುದರಿಂದ ಫೆ.22 ರಂದು ಬಿಡುಗಡೆ ಮಾಡುತ್ತಿದ್ದೇವೆ. ಇನ್ನು, ಇದೊಂದು ಆರೋಗ್ಯಧಾಮದಲ್ಲಿ ನಡೆಯುವಂತಹ ಕಥೆ. ಪ್ರಶಾಂತ್‌ ಇಲ್ಲಿ ಮುಗ್ಧ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನೀಟ್‌ ಆಗಿ ನಿಭಾಯಿಸಿದ್ದಾರೆ’ ಎಂದು ವಿವರ ಕೊಟ್ಟರು ಕಿರಣ್‌ಗೋವಿ.

ನಿರ್ಮಾಪಕ ಎಸ್‌.ಎ.ರಘುನಾಥ್‌ ಅವರಿಗೆ “ಯಾರಿಗೆ ಯಾರುಂಟು’ ಚಿತ್ರ ಮಾಡಿದ್ದಕ್ಕೆ ಈಗ ಖುಷಿ ಇದೆಯಂತೆ. ಇದೊಂದು ದೃಶ್ಯಕಾವ್ಯ. ಒಳ್ಳೆಯ ಕಥೆಗೆ ಬಂಡವಾಳ ಹಾಕುವುದು ನಿರ್ಮಾಪಕನ ಕರ್ತವ್ಯ. ನನ್ನ ಕೆಲಸವನ್ನು ನೀಟಾಗಿ ಮಾಡಿದ್ದೇನೆ. ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ರಿಲೀಸ್‌ ಮಾಡುವುದು ಕಷ್ಟದ ಕೆಲಸ. ಬೆಂಗಳೂರು ಫಿಲ್ಮ್ಸ್ನ ಕುಮಾರ್‌ ವಿತರಣೆ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು ರಘುನಾಥ್‌.

ನಾಯಕ “ಒರಟ’ ಪ್ರಶಾಂತ್‌ಗೆ ಇದು ಕಿರಣ್‌ಗೋವಿ ಜೊತೆ ಮೊದಲ ಚಿತ್ರ. “ಒಳ್ಳೆಯ ತಂಡ ಸೇರಿದರೆ ಒಳ್ಳೆಯ ಚಿತ್ರ ಆಗುತ್ತೆ. ಅದಕ್ಕೆ ಕಾರಣ “ಯಾರಿಗೆ ಯಾರುಂಟು’ ಚಿತ್ರ. ಇಂತಹ ಚಿತ್ರ ಆಗೋಕೆ ಕಾರಣ, ನಿರ್ಮಾಪಕರ ಸಹಕಾರ ಮತ್ತು ಪ್ರೋತ್ಸಾಹ. ಅವರು ಖರ್ಚು ಮಾಡಿದ್ದು ತೆರೆ ಮೇಲೆ ಕಾಣುತ್ತದೆ. ನನಗಿಲ್ಲಿ ತುಂಬಾ ಚಾಲೆಂಜಿಂಗ್‌ ಪಾತ್ರವಿದೆ. ಮೂವರು ನಾಯಕಿಯರ ಜೊತೆ ವಿಭಿನ್ನವಾಗಿ ಕಾಣಿಸಿಕೊಳ್ಳುವಂತಹ ಪಾತ್ರವದು. ಆ್ಯಕ್ಷನ್‌ ಸಿನಿಮಾ ಮಾಡಿದವನಿಗೆ ಒಂದೇ ಸಲ, ಬದಲಾವಣೆ ಕೊಡುವಂತಹ ಪಾತ್ರ ಇಲ್ಲಿದೆ’ ಎಂದರು ಪ್ರಶಾಂತ್‌. ನಾಯಕಿ ಲೇಖಾಚಂದ್ರ ಅವರಿಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರಂತೆ. ಶೀರ್ಷಿಕೆಗೆ ಕ್ಲೈಮ್ಯಾಕ್ಸ್‌ ಅರ್ಥ ಕಲ್ಪಿಸಿಕೊಡಲಿದೆ ಎಂಬುದು ಅವರ ಮಾತು.

ಕೃತಿಕಾ ಅವರಿಲ್ಲಿ ಸಿನಿಮಾದೊಳಗೆ ಸೆಲೆಬ್ರಿಟಿ ಆಗಿ ಕಾಣಿಸಿಕೊಂಡಿದ್ದು, ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದ ಪಾತ್ರವಂತೆ. ಅವರನ್ನು ಕೆಣಕಿದರೆ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವ ಪಾತ್ರ ಚಾಲೆಂಜ್‌ ಆಗಿದೆಯಂತೆ. ಇನ್ನು, ಚಿತ್ರಕ್ಕೆ ಬಿ.ಜೆ.ಭರತ್‌ ಸಂಗೀತ ನೀಡಿದ್ದಾರೆ. ಆರು ಹಾಡುಗಳು ಚೆನ್ನಾಗಿ ಮೂಡಿ ಬರಲು ಕಾರಣ, ನಿರ್ದೇಶಕರು ಎನ್ನುವ ಭರತ್‌, “ನನ್ನ ಇಲ್ಲಿಯವರೆಗೆ ಬಂದ ಹಾಡುಗಳಿಗಿಂತ ಈ ಚಿತ್ರದ ಹಾಡುಗಳು ಭಿನ್ನವಾಗಿವೆ. ಹಾಡಲ್ಲಿ ಕಿರಣ್‌ಗೋವಿ ಕಾಣಿಸುತ್ತಾರೆ. ಬಾಲಿವುಡ್‌ ಮತ್ತು ಕನ್ನಡದ ಗಾಯಕರು ಹಾಡಿದ್ದಾರೆ’ ಅನ್ನುತ್ತಾರೆ ಭರತ್‌.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.