ಉಪಯೋಗವಿಲ್ಲದ ಕೊಳವೆ ಬಾವಿಗಳಿಗೆ ಜಲಮರುಪೂರಣ ಏಕೆ ಮಾಡಬಾರದು?


Team Udayavani, Apr 27, 2017, 11:56 PM IST

Borewell-27-4.jpg

ಬಜಪೆ: ದ.ಕ.ಜಿಲ್ಲೆಯಲ್ಲಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಕೊಳವೆ ಬಾವಿಗಳು ಈಗಾಗಲೇ ತೆಗೆಯಲಾಗಿದ್ದು, ಈ ಪೈಕಿ ಹಲವು ಬಾವಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಹಾಗಾದರೆ ಇವುಗಳನ್ನು ಮುಚ್ಚುವ ಬದಲು ಇಂಗು ಗುಂಡಿಯ ಮೂಲಕ ಜಲ ಮರುಪೂರಣ ಮಾಡಿ ಮುಂದಿನ ದಿನಗಳಲ್ಲಿ ಬಳಸಬಾರದೇ ಎಂಬ ಪ್ರಶ್ನೆ ಮೂಡಿದೆ. 

ಹೆಚ್ಚಿನವು 6.5ಇಂಚಿನವು
ಜಿಲ್ಲೆಯಲ್ಲಿ ಕೊರೆಯಲಾದ ಕೊಳವೆ ಬಾವಿಗಳು ಈ ಹಿಂದೆ 4 ಇಂಚು, ತದನಂತರ 6 ಇಂಚು ಆಗಿದ್ದು, ಈಗ ಸುಮಾರು 15 ವರ್ಷದಿಂದ 6.5 ಇಂಚು ವ್ಯಾಸ ಹೊಂದಿರುತ್ತವೆ. ಇದರಿಂದ ಇದರೊಳಗೆ ಮಗು ಬೀಳುವ ಸಾಧ್ಯತೆ ಕಡಿಮೆ. ಈ ಮಾದರಿಯನ್ನು ಹೆಚ್ಚಿನ ರಾಜ್ಯದಲ್ಲಿ ಉಪಯೋಗಿಸಿದರೆ ಒಳ್ಳೆಯದು. ಇಂಥ ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚಲಾಗುತ್ತಿದೆ. ಹಲವು ಕಡೆ ಕೃಷಿಕರು ತಮ್ಮ ಬತ್ತಿದ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಿ ಗೆದ್ದ ಪ್ರಸಂಗಗಳಿವೆ. ಮಂಗಳೂರು ತಾಲೂಕು ಅಲ್ಲದೇ ಜಿಲ್ಲೆಯ ಹಲವೆಡೆ ಹಲವು ಕೃಷಿಕರು ಈ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಎರಡು ವರ್ಷ ನೀರಿಲ್ಲದೇ ಸೋತವರೂ ಕೊನೆಗೆ ಈ ಉಪಾಯಕ್ಕೆ ಮೊರೆ ಹೋದವರೂ ಇದ್ದಾರೆ.

ಜಿ.ಪಂ. ಏಕೆ ಮಾಡಬಾರದು? 
ಈ ಪ್ರಸಂಗಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಜಿ.ಪಂ. ಮತ್ತು ತಾ.ಪಂ. ಸ್ಥಳೀಯ ಕೆಟ್ಟು ಹೋದ ಬೋರ್‌ವೆಲ್‌ಗ‌ಳಿಗೆ ಜಲ ಮರುಪೂರಣ ಮಾಡಿದರೆ ಪರ್ಯಾಯ ಜಲಮೂಲಗಳಿಗೆ ವೆಚ್ಚ ಮಾಡುವ ಸಮಸ್ಯೆ ಬಗೆಹರಿಯಲಿದೆ. ಇದರೊಂದಿಗೆ ಸ್ಥಳೀಯವಾಗಿ ಜಲಸಂಪನ್ಮೂಲವನ್ನು ಹೊಂದಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಇದರಿಂದ ಅಪಾಯವೂ ತಪ್ಪಲಿದೆ ಹಾಗೂ ಸಮರ್ಪಕ ನಿರ್ವಹಣೆಯೂ ಸಾಧ್ಯವಾಗಲಿದೆ. ಯಾಕೆಂದರೆ ಅಂತರ್ಜಲ ಕುಸಿತವೇ ಈ ಕೊಳವೆಬಾವಿಗಳು ಬತ್ತಲು ಕಾರಣ. ಹಾಗಾಗಿ ಸಮೀಪದಲ್ಲಿರುವ ಮನೆಯ ಛಾವಣಿಗೆ ಪೈಪ್‌ ಹಾಕಿ ಸೋಸುವ ಮೂಲಕ ನೇರ ಕೊಳವೆ ಬಾವಿಗೆ ಬಿಟ್ಟರೆ ಅಂತರ್ಜಲವೃದ್ಧಿಗೆ ಕಾರಣವಾಗಲಿದೆ. ಗ್ರಾಮ ಪಂಚಾಯತ್‌ ಹಾಗೂ ಖಾಸಗಿ ಕೊಳವೆ ಬಾವಿ ಕೊರೆದವರೂ ಇದರತ್ತ ಆಲೋಚಿಸುವುದು ಸೂಕ್ತ ಎನ್ನುತ್ತಾರೆ ಪರಿಣಿತರು. 

43%
ಕೀನ್ಯಾದಲ್ಲಿರುವ 44 ಮಿಲಿಧಿಯನ್‌ ಜನರಲ್ಲಿ ಸುಮಾರು 18 ಮಿಲಿಯನ್‌ ಅಂದರೆ ಶೇ. 43ರಷ್ಟು ಮಂದಿಗೆ ಪರಿಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ. 

2,110
ನಾವು ಹೆಚ್ಚಾಗಿ ಬಳಸುವ ಲೆದರ್‌ ಶೂ ನ ಒಂದು ಜತೆ ತಯಾರಿಸಬೇಕಾದರೆ 2,110 ಗ್ಯಾಲನ್‌ ನೀರು ಬೇಕಾಗುತ್ತದೆ.

ಹೀಗೂ ಉಳಿಸಿ
ಮಕ್ಕಳು ನೀರಿನಲ್ಲಿ ಆಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಬೇಕಾದ ರೀತಿಯ ಆಟಿಕೆಗಳು ಮಾರುಕಟ್ಟೆಯಲ್ಲಿವೆ. ಮಕ್ಕಳು ಆಟವಾಡುವಾಗ ಹೆಚ್ಚಿನ ನೀರು ಪೋಲು ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ನೀರು ತುಂಬಿಸಿ ಆಡಬಹುದಾದ ಆಟಿಕೆಗಳನ್ನು ತಂದುಕೊಡಬೇಡಿ. ಇದರಿಂದ ಸಾಕಷ್ಟು ನೀರನ್ನು ಉಳಿಸಬಹುದು.

ನೀರಿನ ಗಣಿತ
ನಾವು ಜೀನ್ಸ್‌ ಪ್ಯಾಂಟ್‌ ಶರ್ಟ್‌ ಹಾಕಿಕೊಂಡು ಸಂಭ್ರಮಿಸುವುದು ಇದ್ದೇ ಇದೆ. ಆದರೆ, ಅವುಗಳು ಕಬಳಿಸುವ ನೀರಿನ ಪ್ರಮಾಣ ಎಷ್ಟು ಗೊತ್ತೇ? ಒಂದು ಅಂದಾಜಿನ ಪ್ರಕಾರ ಒಂದು ಜೊತೆ ಜೀನ್ಸ್‌ ತಯಾರಿಸಲು ಸುಮಾರು ಹತ್ತು ಸಾವಿರ ಲೀಟರ್‌ ನೀರು ಬೇಕು.

ಅರ್ಥ ಹನಿ
ಪ್ರತಿ ಬಾರಿ ಸೋತಾಗಲೂ ನೆರವಿಗೆ ಬರುವುದು ನೀರೇ. ಹಾಗಾಗಿ ನೀರನ್ನು ಸಂರಕ್ಷಿಸಿ.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.