ಚಳಿಗಾಲ, ಆಹಾರದಲ್ಲಿರಲಿ ಹೆಚ್ಚು ತರಕಾರಿ


Team Udayavani, Jan 15, 2019, 8:01 AM IST

15-january-12.jpg

ತಾಪಮಾನ ಇಳಿಕೆಯಾಗುತ್ತಿದ್ದಂತೆ ಹೆಚ್ಚಿನ ಜನರ ತೂಕ ಹೆಚ್ಚಳವಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದ ಸಂದರ್ಭದಲ್ಲಿನ ಹೆಚ್ಚು ಆಹಾರ ಸೇವನೆ ಹಾಗೂ ಹೆಚ್ಚು ಓಡಾಟ ನಡೆಸದೇ ಇರುವುದು. ಈ ಅಭ್ಯಾಸದಿಂದಾಗಿ ಪ್ರಮುಖವಾಗಿ ಹೊಟ್ಟೆಯ ಸುತ್ತ ಹೆಚ್ಚು ಕೊಬ್ಬಿನಾಂಶ ಶೇಖರಣೆಯಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಕೊಬ್ಬಿನಾಂಶವಿರುವ ಆಹಾರ, ತಾಜಾಹಣ್ಣುಗಳು, ತರಕಾರಿಗಳ ಸೇವೆನೆಯಿಂದ ದೇಹದ ತೂಕ ಹೆಚ್ಚಾಗುತ್ತಿರುವುದು ಎಂದು ಭಾವಿಸಿದರೆ ಇದು ತಪ್ಪು ಕಲ್ಪನೆ. ನಿಮ್ಮ ಡಯೆಟ್ ಯೋಜನೆಯನ್ನು ನೀವೇ ನಾಶ ಮಾಡುತ್ತಿದ್ದೀರಿ ಎಂಬುದು ಇದರ ಅರ್ಥ.

ವಾಸ್ತವವಾಗಿ ಋತುಮಾನಕ್ಕೆ ತಕ್ಕಂತೆ ಡಯೆಟ್ ಯೋಜನೆಯಿದ್ದರೆ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಸುಲಭ. ಋತುವಿಗೆ ಸೂಕ್ತವಾದ ತರಕಾರಿಗಳನ್ನು ಬಳಸುವುದರಿಂದ ದೇಹದ ತೂಕವನ್ನು ಕಡಿಮೆಗೊಳಿಸಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಋತುಮಾನದ ತರಕಾರಿಗಳನ್ನು ಸಾಕಷ್ಟು ಸೇವಿಸುವುದರೊಂದಿಗೆ ಚಳಿಗಾಲದಲ್ಲಿ ಶೇಖರಣೆಯಾದ ಕೊಬ್ಬಿನಾಂಶಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ.

·ಬ್ರೊಕ್‌ಲಿ
ಹೂಕೋಸು ತರಕಾರಿಯ ಸೋದರ ಸಂಬಂಧಿಯಂತಿರುವ ಬ್ರೊಕ್‌ಲಿಯು ಹೆಚ್ಚಿನ ಫೈಬರ್‌ ಅಂಶವುಳ್ಳ ತರಕಾರಿ. ಈ ತರಕಾರಿ ದೀರ್ಘ‌ಕಾಲಿನ ಪ್ರಯೋಜನವನ್ನು ಹೊಂದಿದೆ. ಬ್ರೊಕ್‌ಲಿಯಲ್ಲಿ ಕಡಿಮೆ ಕ್ಯಾಲೋರಿ ಇರುವುದು ಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ ಹಾಗೂ ಖನಿಜಾಂಶಗಳಿವೆ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ಪ್ರೊಟೀನ್‌ ಅಂಶವಿರುವುದರಿಂದ ಡಯೆಟ್ ಆಹಾರದಲ್ಲಿ ಇದರ ಬಳಕೆ ಪ್ರಯೋಜನಕಾರಿ. ಬ್ರೊಕ್‌ಲಿ ಸೇವನೆಯೂ ಕೆಲವೊಂದು ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುವ ಗುಣವಿದೆ.

·ಕಾಲೆ
ಕಾಲೆಯಲ್ಲಿ ಕಡಿಮೆ ಕ್ಯಾಲೋರಿಗಳಿದ್ದರೂ ದೇಹಕ್ಕೆ ಬೇಕಾದ ವಿಟಮಿನ್‌ ಎ, ಬಿ6 ಹಾಗೂ ಸಿ, ಫೈಬರ್‌, ಪೊಟ್ಯಾಷಿಯಂನಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ತರಕಾರಿ ಚಳಿಗಾಲದ ಋತುವಿನಲ್ಲಿ ಉತ್ತಮವಾಗಿ ಬೆಳೆಯುವುದರಿಂದ ಕಾಲೆಯಲ್ಲಿ ಐಸೋಥಿಯೋಸೈನಾಟ್‌ಗಳಲ್ಲಿ ಹೆಚ್ಚಿರುವುದರಿಂದ ಇದು ದೇಹದಲ್ಲಿರುವ ನಿರ್ವಿಶೀಕರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಲೆ ದೇಹದ ತೂಕ ಇಳಿಸುವಿಕೆಗೆ ಆರೋಗ್ಯಕರ ಹಾಗೂ ನ್ಯೂಟ್ರಿಷಿಯನ್‌ಗಳನ್ನು ತುಂಬಿರುವ ತರಕಾರಿಯಾಗಿದೆ.

·ಬ್ರಸಲ್ಸ್‌ ಮೊಗ್ಗುಗಳು
ನಿಯಮಿತ ಸಮತೋಲಿತ ಆಹಾರದ ಭಾಗವಾಗಿ ಬ್ರಸಲ್ಸ್‌ ಮೊಗ್ಗುಗಳನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಇಳಿಸಬಹುದು. ಬ್ರಸಲ್ಸ್‌ ಮೊಗ್ಗುಗಳಲ್ಲಿ ಹೆಚ್ಚಿನ ನೀರಿನಾಂಶ ಹಾಗೂ ಫೈಬರ್‌ ಅಂಶವಿರುವುದರಿಂದ ಡಯೆಟ್ ಆಹಾರದಲ್ಲಿ ಫೈಬರ್‌ ಅಂಶವುಳ್ಳ ಬೇರೆ ಪದಾರ್ಥಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಈ ತರಕಾರಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳಿದ್ದು, ವಿಟಮಿನ್‌ ಸಿ ಅನ್ನು ಹೇರಳವಾಗಿ ಹೊಂದಿದೆ. ಇದು ಮಿತವಾದ ದೈಹಿಕ ಚಟುವಟಿಕೆಯಲ್ಲಿ ದೇಹದ ಕೊಬ್ಬನ್ನು ಇಳಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.

·ಕುಂಬಳಕಾಯಿ
ತೂಕ ಇಳಿಸಲು ಪ್ರಯತ್ನ ಪಡುವವರಿಗೆ ಕುಂಬಳಕಾಯಿ ಜಾತಿಗೆ ಸೇರುವ ತರಕಾರಿಗಳು ಉತ್ತಮವಾದದು. ಇದು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುವ ಕಡಿಮೆ ಕ್ಯಾಲೋರಿ ಇರುವ ತರಕಾರಿಗಳಾಗಿವೆ. ಫೈಬರ್‌ ಪ್ರಮಾಣ ಹೆಚ್ಚಾಗಿರುವುದರಿಂದ ಈ ತರಕಾರಿ ಒಟ್ಟು ಕ್ಯಾಲೋರಿ ಸೇವನೆಯನ್ನು ಕಡಿಮೆಗೊಳಿಸುತ್ತದೆ.

ಕ್ವಾಲಿಫ್ಲವರ್‌
ಶೇ.25ರಷ್ಟು ಕ್ಯಾಲೋರಿಯಿರುವ ಒಂದು ಕಪ್‌ ಕ್ವಾಲಿಫ್ಲವರ್‌ನಲ್ಲಿ ಫೈಬರ್‌ ಒಳಗೊಂಡಂತೆ ತೂಕ ಇಳಿಸುವಿಕೆಗೆ ನೆರವಾಗುವ ಪ್ರಮುಖ ಮಿಟಮಿನ್‌ಗಳು, ಖನಿಜಾಂಶಗಳು ಹಾಗೂ ಪೋಷಕಾಂಶಗಳಿವೆ. ಆರೋಗ್ಯಕರ ತರಕಾರಿಯಾಗಿರುವುದರಿಂದ ಡಯೆಟ್‌ನಲ್ಲಿ ಕ್ವಾಲಿಫ್ಲವರ್‌ ಸೇವನೆ ಉತ್ತಮವಾದದು.

•ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.