ಕಾಪು: ಈದ್ ಮಿಲಾದ್; ಸೌಹಾರ್ದ ಮೆರೆದ ಹಿಂದೂಗಳು
Team Udayavani, Nov 21, 2018, 2:15 AM IST
ಕಾಪು: ಪ್ರವಾದಿ ಮಹಮ್ಮದ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳವಾರ ಜರಗಿದ ಮಿಲಾದುನ್ನಬಿ ಜಾಥಾದ ಸಂದರ್ಭದಲ್ಲಿ ಕಾಪು ಪೇಟೆಯ ವರ್ತಕರು ಮತ್ತು ಹಿಂದೂಗಳು ಸಿಹಿ ತಿಂಡಿ, ತಂಪು ಪಾನೀಯ ಮತ್ತು ನೀರು ಪೂರೈಕೆ ಮಾಡುವ ಮೂಲಕ ಸೌಹಾರ್ದ ಮೆರೆದರು.
2,500 ನೀರಿನ ಬಾಟಲಿ ವಿತರಣೆ
ಮುಸ್ಲಿಮರು ನಡೆಸಿದ ಈದ್ ಮಿಲಾದ್ ಮೆರವಣಿಗೆಯು ಕಾಪು ಪೇಟೆಯನ್ನು ಹಾದು ಹೋಗುವ ಸಂದರ್ಭದಲ್ಲಿ ಕಾಪು ಪೇಟೆಯ ಹಿಂದೂಗಳು ಸುಮಾರು 2,500 ಬಾಟಲಿಗಳಷ್ಟು ಕುಡಿಯುವ ನೀರು ಮತ್ತು ಸಿಹಿ ತಿಂಡಿಗಳನ್ನು ಹಂಚಿ ಮೆರವಣಿಗೆಯನ್ನು ಬೀಳ್ಕೊಟ್ಟರು. ಕಾಪು ಪೇಟೆಯ ವರ್ತಕರು, ರಿಕ್ಷಾ, ಟೆಂಪೋ, ಕಾರು ಚಾಲಕರು ಮತ್ತು ಮಾಲಕರು ಹಾಗೂ ಕಾಪು ಪುರಸಭೆಯ ಜನಪ್ರತಿನಿಧಿಗಳು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ವಿವಿಧ ಸಂಘ – ಸಂಸ್ಥೆಗಳ ಪ್ರತಿನಿಧಿಗಳು ಸೌಹಾರ್ದ ಕಾರ್ಯಕ್ರಮದೊಂದಿಗೆ ಕೈ ಜೋಡಿಸಿದರು.
ಕಾಪು – ಪೊಲಿಪು ಮಸೀದಿಯಿಂದ ಪ್ರಾರಂಭಗೊಂಡ ಮಿಲಾದುನ್ನಬಿ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ, ಮಲ್ಲಾರು – ಪಕೀರಣಕಟ್ಟೆಯಿಂದ ಮೆರವಣಿಗೆಯನ್ನು ಕೊಪ್ಪಲಂಗಡಿಯಲ್ಲಿ ಕೂಡಿಕೊಂಡು ಕಾಪು ಪೇಟೆಯ ಮೂಲಕ ಸಾಗಿ ಪೊಲಿಪು ಜಂಕ್ಷನ್ನಲ್ಲಿ ಸಮಾಪನಗೊಂಡಿತು. ಸಾವಿರಾರು ಮಂದಿ ಮುಸ್ಲಿಮರು ಪಾಲ್ಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ
ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′
Udupi: ವಿಡಿಯೋ ಕರೆ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ
Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ