ಬಾಕಿ ಪಾವತಿಸದೆ ಟಿಕೆಟ್ ನೀಡಲ್ಲ ; ಕೇಂದ್ರದ ಸಂಸ್ಥೆಗಳಿಗೆ ಏರ್ ಇಂಡಿಯಾ ಖಡಕ್ ಸೂಚನೆ
Team Udayavani, Dec 27, 2019, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಮುಂಬಯಿ: ನಷ್ಟದಲ್ಲಿರುವ ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಅತ್ಯಂತ ಕಠಿನಕ್ರಮ ತೆಗೆದುಕೊಂಡಿದೆ. 10 ಲಕ್ಷ ರೂ.ಗಿಂತ ಹೆಚ್ಚು ಹಣ ಬಾಕಿಯುಳಿಸಿಕೊಂಡಿರುವ ಪ್ರಮುಖ ಸರಕಾರಿ ಸಂಸ್ಥೆಗಳಿಗೆ ಟಿಕೆಟ್ ನೀಡುವುದಿಲ್ಲವೆಂದು ಪ್ರಕಟಿಸಿದೆ. ಸಿಬಿಐ, ಐಬಿ, ಜಾರಿ ನಿರ್ದೇಶನಾಲಯ, ಕೇಂದ್ರ ಕಾರ್ಮಿಕ ಸಂಸ್ಥೆ (ಸಿಎಲ್ಐ), ಇಂಡಿಯನ್ ಆಡಿಟ್ ಬ್ಯೂರೊ (ಭಾರತೀಯ ಲೆಕ್ಕಪತ್ರ ಮಂಡಳಿ), ಬಿಎಸ್ಎಫ್ನಂತಹ ಪ್ರಮುಖ ಸರಕಾರಿ ಸಂಸ್ಥೆಗಳೂ ಏರ್ಇಂಡಿಯಾಕ್ಕೆ ಹಣ ನೀಡದೇ ಬಾಕಿಯುಳಿಸಿಕೊಂಡಿವೆ!
ಇದೇ ಮೊದಲಬಾರಿ ಇಂತಹ ಸಂಸ್ಥೆಗಳಿಗೆ ಹಣ ನೀಡದೇ ಟಿಕೆಟ್ ನೀಡುವು ದಿಲ್ಲ ವೆಂದು ಏರ್ ಇಂಡಿಯಾ ಕಡ್ಡಿಮುರಿದಂತೆ ಹೇಳಿದೆ. ಸದ್ಯ ಒಟ್ಟಾರೆ ದೇಶದ ಸರಕಾರಿ ಸಂಸ್ಥೆಗಳಿಂದ ಏರ್ ಇಂಡಿಯಾಕ್ಕೆ ಬರಬೇಕಿ ರುವ ಬಾಕಿ ಮೊತ್ತ 268 ಕೋಟಿ ರೂ. ಈ ಪೈಕಿ 50 ಕೋಟಿ ರೂ.ಗಳನ್ನು ಕಳೆದ ಕೆಲವು ವಾರಗಳಲ್ಲಿ ಏರ್ ಇಂಡಿಯಾ ಮರಳಿ ಪಡೆದುಕೊಂಡಿದೆ.
ಇನ್ನೂ ಬಾಕಿಯುಳಿಸಿ ಕೊಂಡಿರುವ ಸಂಸ್ಥೆಗಳ ಪಟ್ಟಿ ತಯಾರಿಸಿದೆ. ಕೇಂದ್ರಸರಕಾರದ ನಿಯಮಗಳ ಪ್ರಕಾರ, ವಿಮಾನ ಯಾನ ಮಾಡುವಾಗ ಸರಕಾರಿ ಸಂಸ್ಥೆಗಳ ಮೊದಲ ಆದ್ಯತೆ ಏರ್ ಇಂಡಿಯಾ ಆಗಿರಬೇಕು. ಒಂದು ವೇಳೆ ಏರ್ ಇಂಡಿಯಾ ಆ ಜಾಗಕ್ಕೆ ತಲುಪದಿದ್ದರೆ ಮಾತ್ರ, ಬೇರೆ ವಿಮಾನದಲ್ಲಿ ಆಸನ ಕಾಯ್ದಿರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್