ಚಿಪ್ ಅಭಾವ : ಡಿಜಿಟಲ್ ವಹಿವಾಟಿನ ಮೇಲೆ ಪರಿಣಾಮ..!
Team Udayavani, Jun 28, 2021, 3:11 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ವಿಶ್ವ ಡಿಜಿಟಲ್ ವಹಿವಾಟಿನತ್ತ ಸಂಪೂರ್ಣವಾಗಿ ಮುಖ ಮಾಡುತ್ತಿದೆ. ಆನ್ ಲೈನ್ ವ್ಯವಹಾರವೇ ಈಗ ಮೇಲಾಗಿದೆ. ಈ ಆನ್ ಲೈನ್ ವ್ಯವಹಾರಗಳೇ ಈಗಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಪ್ ಗಳ ಅಭಾವ ಕಂಡುಬಂದಿದೆ.
ಚಿಪ್ ಗಳ ಕೊರತೆಯ ಕಾರಣದಿಂದಾಗಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೇಲೂ ಕೂಡ ಪರಿಣಾಮ ಬೀರಬಹುದು ಎಂದು ಸ್ಮಾರ್ಟ್ ಪೇಮೆಂಟ್ ಅಸೋಸಿಯೇಷನ್ ಎಚ್ಚರಿಕೆ ಕೊಟ್ಟಿದೆ.
ನಗದು ರಹಿತ ಆನ್ ಲೈನ್ ವ್ಯವಹಾರ ಮಾಡುವವರು ಶೇಕಡಾ 90ರಷ್ಟು ಡೆಬಿಟ್, ಕ್ರೆಡಿಟ್ ಕಾರ್ಡ್ಗಳನ್ನು ಬಳಕೆ ಮಾಡುತ್ತಾರೆ. ಆನ್ ಲೈನ್ ಪೇಮೆಂಟ್ ಗೆ ಕಾರ್ಡ್ಗಳು ನೇರವಾಗಿ ಅಥವಾ ಪರೋಕ್ಷವಾಗಿ ಶೇಕಡಾ 40-60 ರಷ್ಟು ಸಹಾಯ ಮಾಡುತ್ತವೆ.
ಇದನ್ನೂ ಓದಿ : ದುಬೈ ಗೆ ಹಾರಿದ ಸಾಂಗ್ಲಿ ಜಿಲ್ಲೆಯ ತಡಾಸರ್ ರೈತರು ಬೆಳೆದ ಡ್ರ್ಯಾಗನ್ ಹಣ್ಣುಗಳು
ಬ್ಯಾಂಕ್ ಖಾತೆ ತೆರೆದವರಿಗೆ ಕನಿಷ್ಠ 1 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬೇಕು. ಪೇಮೆಂಟ್ ಕಾರ್ಡ್ ನ ಅವಧಿ ಮುಗಿದಿದ್ದರೆ ಹೊಸ ಕಾರ್ಡ್ಗಳು ಬೇಕಾಗುತ್ತವೆ. ಚಿಪ್ ಮುರಿದಿದ್ದರೆ ಬದಲಿ ಕಾರ್ಡ್ ಬೇಕಾಗುತ್ತದೆ. ಹೀಗಾಗಿ ಚಿಪ್ ಗಳ ಬೇಡಿಕೆ ಏರಿಕೆಯಾಗಿರುವ ಕಾರಣದಿಂದಾಗಿ ಚಿಪ್ ಗಳ ಕೊರತೆ ಇದೆ ಎಂದು ತಿಳಿಸಿದೆ.
ಇನ್ನು, ಈ ಕುರಿತಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್ ಡಿ ಟಿ ವಿ, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಚಿಪ್ ತಯಾರು ಮಾಡುವ ಕಂಪೆನಿಗಳು ತೆರೆದಿರಲಿಲ್ಲ. ಕೆಲವು ಕಂಪೆನಿಗಳು ತೆರೆದಿದ್ದರೂ ನೌಕರರ ಅಭಾವ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ, ಸದ್ಯಕ್ಕೆ ಬೇಕಾದಷ್ಟು ಚಿಪ್ ಗಳು ಲಭ್ಯವಿಲ್ಲ ಎಂದು ವರದಿ ಮಾಡಿದೆ.
ಒಟ್ಟು ವಿಶ್ವದಾದ್ಯಂತ ಪ್ರತಿವರ್ಷ 300 ಕೋಟಿ ಇಎಂವಿ ಮೂಲದ ಪೇಮೆಂಟ್ ಕಾರ್ಡ್ ಗಳನ್ನು ತಯಾರಿಸಲಾಗುತ್ತದೆ.
ಇದನ್ನೂ ಓದಿ : ಚಂದನವನಕ್ಕೆ ಬಾಲಿವುಡ್ ನಟಿ:ವಿಕ್ರಾಂತ್ ರೋಣನ ಜೊತೆ ಬಿಟೌನ್ ಬೆಡಗಿ ಮಸ್ತ್ ಸ್ಟೆಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ