ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ: ಭಾರತದ ಪ್ರಯತ್ನಕ್ಕೆ ಏಕೆ ಚೀನದ ಅಡ್ಡಗಾಲು?


Team Udayavani, Aug 14, 2022, 7:35 AM IST

ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ: ಭಾರತದ ಪ್ರಯತ್ನಕ್ಕೆ ಏಕೆ ಚೀನದ ಅಡ್ಡಗಾಲು?

ಹೊಸದಿಲ್ಲಿ: ಜಮ್ಮು- ಕಾಶ್ಮೀರ ಸಹಿತ ದೇಶದಲ್ಲಿ ಪದೇಪದೆ ಉಗ್ರ ಕೃತ್ಯಗಳನ್ನು ಸಂಘಟಿಸುವ ಜೈಶ್‌-ಎ-ಮೊಹಮ್ಮದ್‌ ಮತ್ತು ಲಷ್ಕರ್‌- ಎ-ತಯ್ಯಬಾಗಳ ಕುತ್ಸಿತ ನಾಯಕರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಚೀನ ಮೇಲಿಂದ ಮೇಲೆ ಅಡ್ಡಗಾಲು ಹಾಕುತ್ತಿದೆ. ಭಾರತದ ಶಕ್ತಿ ಸಾಮರ್ಥ್ಯದ ಬಹು ಭಾಗ ಈ ಉಗ್ರರು ಸಂಘಟಿಸುವ ಛಾಯಾಸಮರವನ್ನು ನಿಭಾಯಿಸುವುದರಲ್ಲಿಯೇ ಸೋರಿಹೋಗಬೇಕು ಎಂಬ ಚೀನದ ದುರುದ್ದೇಶವೇ ಇದಕ್ಕೆ ಪ್ರಧಾನ ಕಾರಣ.

ಭಾರತದ ಗಮನ ಉಗ್ರರನ್ನು ಮಟ್ಟ ಹಾಕುವತ್ತ ಇದ್ದರೆ ಎಲ್‌ಎಸಿಯಲ್ಲಿ ತನಗೆ ಅನುಕೂಲ. ಜತೆಗೆ ಭಾರತದ ಪ್ರಗ ತಿಯೂ ಕುಂಠಿತವಾಗುತ್ತದೆ ಎಂಬುದು ಚೀನದ ಹುನ್ನಾರ.

ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ನ ಸಹೋದರ ಅಬ್ದುಲ್‌ ರವೂಫ್ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕಗಳ ಪ್ರಯತ್ನಕ್ಕೆ ಚೀನ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ತಡೆಯೊಡ್ಡಿದೆ. ಚೀನ ಹೀಗೆ ಅಡ್ಡಗಾಲು ಹಾಕುತ್ತಿರುವುದು ಎರಡು ತಿಂಗಳುಗಳಲ್ಲಿ ಇದು ಎರಡನೇ ಬಾರಿ. ಚೀನದ ಈ ನಡೆ ಅದರ ಅತ್ಯಾಪ್ತ ಸ್ನೇಹಿತನಾದ ಪಾಕಿಸ್ಥಾನದ ಪರವಾದದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಜೂನ್‌ನಲ್ಲೂ ಅಡ್ಡಗಾಲು
ಕಳೆದ ಜೂನ್‌ನಲ್ಲಿ ಲಷ್ಕರ್‌ ಎ ತಯ್ಯಬಾ (ಎಲ್‌ಇಟಿ)ದ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಮತ್ತು ಮುರಿದ್ಕೆ ಯಲ್ಲಿರುವ ಉಗ್ರರ ತರಬೇತಿ ಶಿಬಿರಗಳಿಗೆ ಪ್ರಧಾನ ನಿಧಿ ಸಂಗ್ರಹಕಾರ ಅಬ್ದುಲ್‌ ರಹಮಾನ್‌ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವುದಕ್ಕೆ ಕೂಡ ಚೀನ ತಡೆ ಹಾಕಿತ್ತು. ಮಕ್ಕಿಯು ಎಲ್‌ಇಟಿ ಮುಖ್ಯಸ್ಥ, ಜಾಗತಿಕ ಉಗ್ರ ಹಫೀಜ್‌ ಸಯೀದನ ನಿಕಟ ಸಂಬಂಧಿ, ಎಲ್‌ಇಟಿಯ ತಥಾಕಥಿತ ವಿದೇಶ ವ್ಯವಹಾರ ವಿಭಾಗದ ಮುಖ್ಯಸ್ಥ.

ಉಗ್ರರಿಗೆ ಹಣ
ಮತ ಪ್ರಸರಣಕ್ಕಾಗಿ ಎಂಬ ನೆಪ ಹೇಳಿ ಮಕ್ಕಿ ಪೂರ್ವ ಏಷ್ಯಾದ ದೇಶಗಳಿಂದ ನಿಧಿ ಸಂಗ್ರಹಿಸುತ್ತಾನೆ. ಆದರೆ ಅವನದನ್ನು ಉಪಯೋಗಿಸುವುದು ಮಾತ್ರ ಮತಾಂಧ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಎಸಗುತ್ತಾರೆ, ಅಮೆರಿಕ ಮತ್ತು ಅಫ್ಘಾನಿಸ್ಥಾನಗಳಲ್ಲಿ ಭಾರತೀಯ ಹಿತಾಸಕ್ತಿಗಳನ್ನು ಕೆಡವಲು ಪ್ರಯತ್ನಿಸುತ್ತಾರೆ.

ಪಾಕಿಸ್ಥಾನದಲ್ಲಿ ನೆಲೆಯಾಗಿರುವ 40ಕ್ಕೂ ಹೆಚ್ಚು ಭಯೋತ್ಪಾದಕ ಗುಂಪುಗಳಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರ ಕುಟುಂಬಗಳಿಂದಲೇ ನಡೆಸಲ್ಪಡುವಂಥವು. ಇವೆರಡಕ್ಕೂ ರಾವಲ್ಪಿಂಡಿ ಮತ್ತು ಪಾಕಿಸ್ಥಾನದಲ್ಲಿ ಗಾಢವಾದ ನೆರವು, ಸಹಾನುಭೂತಿ ಇದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆ ನಡೆಸಲು ಮುಕ್ತ ಸ್ವಾತಂತ್ರ್ಯ, ಧನ ಸಹಾಯ ಮತ್ತು ಆಶ್ರಯ – ಮೂರು ಬಗೆಯ ಸಹಾಯಗಳನ್ನು ಎಲ್‌ಇಟಿ ಮತ್ತು ಜೆಇಎಂ ಪಾಕಿಸ್ಥಾನದಿಂದ ಪಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನದ ಸೂಚನೆಯಂತೆ ಕಾಶ್ಮೀರ ಸಹಿತ ಭಾರತದಲ್ಲಿ ಉಗ್ರ ಕೃತ್ಯಗಳನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತವೆ.

ಭಾರತದ ಶಕ್ತಿ ಸೋರಿಕೆಗೆ ಚೀನ ಪ್ರಯತ್ನ
ಜೈಶ್‌ ಎ ಮೊಹಮ್ಮದ್‌ ನೆಲೆಯಾಗಿರುವುದು ಬಹವಾಲ್ಪುರದಲ್ಲಿ. ಮಸೂದ್‌ ಅಜರ್‌ ಇದರ ನಾಯಕ. ಈ ಅಂತಾರಾಷ್ಟ್ರೀಯ ಉಗ್ರ ಗುಂಪಿನ ಕಾರ್ಯಾಚರಣೆಗಳ ಸೂತ್ರಧಾರ ರವೂಫ್ . 2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲಣ ದಾಳಿ ಮತ್ತು 2019ರ ಪುಲ್ವಾಮಾ ದಾಳಿಗಳ ಸೂತ್ರಧಾರನೂ ಇವನೇ.

ಭಾರತದ ಮೇಲೆ ನಖಶಿಖಾಂತ ದ್ವೇಷ ಹೊಂದಿರುವ ಮಸೂದ್‌ ಅಜರ್‌ನ ಸೂಚನೆಯಂತೆ ಜಮ್ಮು – ಕಾಶ್ಮೀರದಲ್ಲಿ ಉಗ್ರ ದಾಳಿಗಳನ್ನು ಯೋಜಿಸುವವನು ರವೂಫ್ . 1994ರಲ್ಲಿ ಶ್ರೀನಗರದ ಹೊರವಲಯದಲ್ಲಿ ಮಸೂದ್‌ ಅಜರ್‌ನನ್ನು ಸೆರೆಹಿಡಿಯಲಾಗಿತ್ತು. ಆಗ ಭಾರತೀಯ ಪಡೆಗಳು ತನ್ನನ್ನು ನೋಡಿಕೊಂಡದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ತವಕ ಮಸೂದ್‌ ಅಜರ್‌ಗೆ.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ 1267 ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ 2019ರ ಮೇ 1ರಂದು ಚೀನ ಕನಿಷ್ಠ ನಾಲ್ಕು ಬಾರಿ ತಡೆ ಒಡ್ಡಿತ್ತು. ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸದೆ ಇರುವುದಕ್ಕೆ ಸಂಬಂಧಿಸಿದ ಸೂಚನೆಯನ್ನು ಚೀನದ ಉನ್ನತ ನಾಯಕರೇ ನೀಡಿದ್ದರು.

ತನ್ನ ನೆಲದಲ್ಲಿ ಮಸೂದ್‌ ಅಜರ್‌ ಇಲ್ಲ ಎಂಬುದಾಗಿ ಪಾಕಿಸ್ಥಾನವು ಜಾಗತಿಕ ಮಟ್ಟದಲ್ಲಿ ಉಗ್ರರಿಗೆ ಹಣಕಾಸು ನೆರವು ಲಭಿಸುವುದರ ಮೇಲೆ ನಿಗಾ ಇರಿಸಿರುವ ಎಫ್ಎಟಿಎಫ್ಗೆ ಸಾಕಷ್ಟು ಬಾರಿ ಹೇಳಿದೆ. ಆದರೆ ನಿಜಾಂಶ ಎಂದರೆ, ಪಾಕಿಸ್ಥಾನದ ಪಂಜಾಬ್‌ ಪ್ರಾಂತದ ಮದರಸ ವೊಂದರಲ್ಲಿ ಮಸೂದ್‌ ಅಜರ್‌ ಸಾಕಷ್ಟು ಕಾಲದಿಂದ ಆರಾಮವಾಗಿ ನೆಲೆಸಿದ್ದಾನೆ. ಹೀಗೆ ಮಸೂದ್‌ ಅಜರ್‌ ಸಹಿತ ಉನ್ನತ ಉಗ್ರ ನಾಯಕರಿಗೆಲ್ಲ ಆಶ್ರಯ ನೀಡಿ ಸಾಕಿ ಸಲಹುತ್ತ ಭಾರತದತ್ತ ಛೂಬಿಟ್ಟು ಭಾರತದ ಶಕ್ತಿ ಸಾಮರ್ಥ್ಯದ ಬಹುಭಾಗ ಈ ಛಾಯಾಸಮರವನ್ನು ನಿಭಾಯಿಸುವುದ ರಲ್ಲಿಯೇ ಕಳೆದುಹೋಗುವಂತೆ ಮಾಡುತ್ತಿರುವುದಕ್ಕೆ ಉಡು ಗೊರೆ ಎಂಬಂತೆ ಚೀನವು ಇವರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ತಡೆ ಒಡ್ಡುತ್ತಲೇ ಬರುತ್ತಿದೆ.

ಚೀನ ಒಡ್ಡಿದ ತಡೆಗಳು
1.ಅಬ್ದುಲ್‌ ರವೂಫ್ ಅಜರ್‌: ಜೈಶ್‌ ಎ ಮೊಹಮ್ಮದ್‌ನ ಕಾರ್ಯಾಚರಣೆಗಳ ಸೂತ್ರಧಾರ.
2.ಅಬ್ದುಲ್‌ ರಹಮಾನ್‌ ಮಕ್ಕಿ: ಎಲ್‌ಇಟಿಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ
3.ಅಜಂ ಚೀಮಾ, ಎಲ್‌ಇಟಿಯ ಗುಪ್ತಚರ ಮುಖ್ಯಸ್ಥ: ಜಕಿ ಉರ್‌ ರೆಹಮಾನ್‌ನ ನಾಯಕತ್ವದಲ್ಲಿ 26/11 ದಾಳಿ ಕೋರರಿಗೆ ತರಬೇತಿ ನೀಡಿದವನು.
4.ಮೊಹಮ್ಮದ್‌ ಯೂಸುಫ್ ಶಾ ಆಲಿಯಾಸ್‌ ಸಯ್ಯದ್‌ ಸಲಾಹುದ್ದೀನ್‌: ಹಿಜ್ಬುಲ್‌ ಮುಜಾಹಿದೀನ್‌ ನಾಯಕ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.