ಮೀನು ಹೊತ್ತುಕೊಂಡು ಪ್ರಚಾರ
Team Udayavani, Feb 3, 2022, 9:30 PM IST
ಭುವನೇಶ್ವರ: ಒಡಿಶಾದ ನವರಂಗಪುರ ಜಿಲ್ಲೆಯ ಪತ್ರಿ ಎಂಬ ಗ್ರಾ.ಪಂ. ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಭಗವತಿ ಭೋತಾ ಅವರು ಸಜೀವ ಮೀನನ್ನು ಪ್ರದರ್ಶಿಸುತ್ತಾ ಪ್ರಚಾರ ನಡೆಸುತ್ತಿದ್ದಾರೆ.
ಫೆ.16ರಿಂದ 24ರವರೆಗೆ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರ ನಡೆಸುತ್ತಿದ್ದಾರೆ. ಸದ್ಯ ಜಿ.ಪಂ. ಅಧ್ಯಕ್ಷೆಯಾಗಿರುವ ಅವರು ಗ್ರಾ.ಪಂ.ಗೆ ಸ್ಪರ್ಧಿಸುತ್ತಿದ್ದಾರೆ.
ಇನ್ನೂ ಅನೇಕ ಅಭ್ಯರ್ಥಿಗಳು ತಮ್ಮ ಚಿಹ್ನೆಯಾದ ಟಿವಿ, ಲಾಟೀನು, ಪುಸ್ತಕವನ್ನೇ ಜನರ ಬಳಿ ತೆಗೆದುಕೊಂಡು ಹೋಗಿ ಮತ ಯಾಚಿಸುತ್ತಿದ್ದಾರೆ. ಅಭ್ಯರ್ಥಿಗಳ ಪ್ರಚಾರ ವೈಖರಿ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.