ಅತ್ತಿ ವರದ ಮೂರ್ತಿ ನೋಡಲು ಜನಸಾಗರ; ಕಾಲ್ತುಳಿತಕ್ಕೆ ನಾಲ್ವರು ಭಕ್ತರು ಬಲಿ
Team Udayavani, Jul 19, 2019, 11:06 AM IST
ಚೆನ್ನೈ: ನಲವತ್ತು ವರ್ಷಕ್ಕೊಮ್ಮೆ ಸರೋವರದಿಂದ ಹೊರತೆಗೆದು, 48 ದಿನಗಳ ಕಾಲ ಪೂಜಿಸಲ್ಪಡುವ ಕಾಂಚಿಯ ವರದರಾಜಸ್ವಾಮಿ ಮೂಲ ವಿಗ್ರಹ ನೋಡಲು ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದು, ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಕಾಂಚಿಪುರಂ-ನಲವತ್ತು ವರ್ಷಗಳಿಗೊಮ್ಮೆ ಹೊರಬರುವ ಅತ್ತಿ ವರದ
ಸೇಲಂನ ಆನಂದನ್, ಚೆನ್ನೈನ ಶಾಂತಿ, ಚೆನ್ನೈನ ನಟರಾಜನ್ ಹಾಗೂ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಲಕ್ಷ್ಮೀ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. 40ವರ್ಷಗಳಿಗೊಮ್ಮೆ ಹೊರತೆಗೆಯುವ ಅತ್ತಿ ವರದ ಮೂರ್ತಿಯನ್ನು ನೋಡಲು ಕಿಲೋ ಮೀಟರ್ ಗಟ್ಟಲೇ ಸರದಿ ಸಾಲಿನಲ್ಲಿ ಭಕ್ತರು ನಿಂತಿರುವುದಾಗಿ ವರದಿ ತಿಳಿಸಿದೆ.
ಅತ್ತಿ ವರದ ಮೂರ್ತಿ ನೋಡಲು ಸಾವಿರಾರು ಭಕ್ತರ ನೂಕುನುಗ್ಗಲು, ತಳ್ಳಾಟ ಸಂಭವಿಸಿದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಹಲವರು ಉಸಿರಾಟದ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿ ವಿವರಿಸಿದೆ.