ವಡೋದರಾದಲ್ಲಿ ಮುಸಲಧಾರೆ : ಹನ್ನೆರಡು ಗಂಟೆ ಸುರಿದ ಮಳೆಗೆ ಕಕ್ಕಾಬಿಕ್ಕಿ!


Team Udayavani, Aug 1, 2019, 10:42 PM IST

Vododara-726

ವಡೋದರಾ : ಬರೋಬ್ಬರಿ ಹನ್ನೆರಡು ಗಂಟೆ ಸುರಿದ ಮಳೆಗೆ ಕಕ್ಕಾಬಿಕ್ಕಿಯಾಗಿಬಿಟ್ಟಿದ್ದೆ. ಮಲೆನಾಡಿನವನಾದ ನಾನು ಇದುವರೆಗೂ ಕಾಣದಂಥ ಮಳೆ ಎಂದು ಉದ್ಘರಿಸಿದವರು ಕಲಾವಿದ ಶೈಲೇಶ್.

ವಡೋದರಾದ ಕಲಾಶಾಲೆಯಲ್ಲಿ ಕಲಿತು ಈಗ ದಿಲ್ಲಿಯಲ್ಲಿ ಕಲಾವಿದನಾಗಿರುವ ಶೈಲೇಶ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. ಎರಡು ದಿನದ ಕೆಲಸಕ್ಕೆಂದು ವಡೋದರದಲ್ಲಿರುವ ತಮ್ಮ ಸ್ಟುಡಿಯೋಗೆ ಹೋಗಿದ್ದರು.

ಬುಧವಾರ ಎಡೆಬಿಡದೇ ಸುರಿದ ಮಳೆ ವಡೋದರವನ್ನು ಮುಳುಗಿಸಿದೆ. ಮೊಸಳೆಗಳೂ ನೀರಿನಲ್ಲಿ ಹರಿದು ಮನೆ ಬಾಗಿಲಿಗೆ ಬಂದ ವಿಡಿಯೋಗಳು ವೈರಲ್ ಆಗಿವೆ.


ಸುಮಾರು 11.30 ಸಮಯ. ಸಣ್ಣಗೆ ಮಳೆ ಆರಂಭವಾಯಿತು. ಎರಡೇ ಕ್ಷಣಗಳಲ್ಲಿ ರಾಶಿ ರಾಶಿ ಸುರಿಯಲಾರಂಭಿಸಿತು. ಈಗ ನಿಲ್ಲಬಹುದು, ಇನ್ನೂ ಸ್ವಲ್ಪ ಹೊತ್ತು ಸುರಿಯಬಹುದು ಎಂದುಕೊಂಡವಷ್ಟೇ. ಆದರೆ ನಿಲ್ಲಲೇ ಇಲ್ಲ. ನಾವೆಲ್ಲಾ ಮನೆಯೊಳಗೆ ಇದ್ದವರು ಮನೆಯೊಳಗೇ. ವಿಚಿತ್ರವೆಂದರೆ, ಮನೆಯೊಳಗೂ ನೀರು ನುಗ್ಗಲಾರಂಭಿಸಿತು. ನಾನು, ನನ್ನ ಗೆಳೆಯನ ಮನೆಗೂ ನೀರು ನುಗ್ಗಿತು. ಸುಮಾರು ಒಂದರಿಂದ ಮೂರು ಅಡಿಯಷ್ಟು ನೀರು. ಏನೂ ಮಾಡದ ಅಸಹಾಯಕತೆ ಎಂದು ವಿವರಿಸುತ್ತಾರೆ ಶೈಲೇಶ್.

ಕೆಲವೇ ಗಂಟೆಗಳಲ್ಲಿ ಇಡೀ ನಗರ ನೀರಿನಲ್ಲಿ ಮುಳುಗಿತು. ಮಧ್ಯಯರಾತ್ರಿ 12 ರವರೆಗೂ ಮಳೆ ನಿಲ್ಲಲಿಲ್ಲ. ಬರೋಬ್ಬರಿ 12 ಗಂಟೆಗಳ ಕಾಲ ಸುರಿದ ಮಳೆ. ನನ್ನ ಎದುರಿನ ಪರಿಚಯಸ್ಥರ ಮನೆ ಮುಕ್ಕಾಲು ವಾಸಿ ಮುಳುಗಿತು. ಇಂದು (ಗುರುವಾರ) ಬೆಳಗ್ಗೆ ಹಾಲು ಸಿಕ್ತಾ ಇರಲಿಲ್ಲ. ವಡೋದರಾ ಬಸ್ಸು ನಿಲ್ದಾಣ ನಿನ್ನೆಯೇ ಮುಳುಗಿತ್ತು, ರೈಲುಗಳು ರದ್ದಾಗಿದ್ದವು. ಇವತ್ತು ಕೆಲವು ರೈಲುಗಳು ಓಡುತ್ತಿವೆ. ಸಮಾ ಮತ್ತು ನ್ಯೂ ಸಮಾ ಪ್ರದೇಶದಲ್ಲಂತೂ ಕೇಳುವಂತಿಲ್ಲ. ಈ ಪ್ರದೇಶದ ನಾಲ್ಕು ಸರ್ಕಲ್‌ಗಳೂ ನೀರಿನಲ್ಲಿ ಮುಳುಗಿವೆ, ಓಡಾಡುವುದೇ ಕಷ್ಟವಾಗಿದೆ ಎಂದು ಹೇಳಿದರು ಶೈಲೇಶ್.

ಹಾಗಾಗಿ 2.5 ಕಿ.ಮೀನ ರೈಲು ನಿಲ್ದಾಣಕ್ಕೆ 14 ಕಿ.ಮೀ ಸುತ್ತಿ ಬಳಸಿ ತಲುಪಬೇಕು. ಹೇಗಾದರೂ ಮಾಡಿ ದಿಲ್ಲಿಗೆ ತಲುಪಿಬಿಟ್ರೆ ಸಾಕೆನಿಸಿ ಬಿಟ್ಟಿದೆ. ಇಂದು ಶೈಲೇಶ್ ದಿಲ್ಲಿಗೆ ವಾಪಸಾಗುತ್ತಿದ್ದಾರೆ.

ಬುಧವಾರ ವಡೋದರಾದಲ್ಲಿ ಸುಮಾರು 400 ಮಿ.ಮೀ ಗೂ ಹೆಚ್ಚು ಮಳೆ ಸುರಿದಿದೆ. ಗುರುವಾರವೂ ಭಾರೀ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಈ ಹೊತ್ತಿನವರೆಗೆ ಹೆಚ್ಚಿನ ಮಳೆ ಇಲ್ಲ.

ಇದಲ್ಲದೇ, ಮಳೆ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಜ್ವಾ ಅಟೆಕಟ್ಟಿನ 62 ಗೇಟುಗಳನ್ನು ತೆಗೆಯಲಾಗಿತ್ತು. ಆರು ಮಂದಿ ಮೃತಪಟ್ಟಿದ್ದು, ಹಲವಾರು ಪ್ರದೇಶ ಮುಳುಗಡೆಯಾಗಿದೆ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.