ಭಾರತ ಈಗ ಆರು ಸಮುದಾಯಗಳಿಗೆ ಹೊಸ ಮನೆ: ನಡ್ಡಾ
Team Udayavani, Dec 19, 2019, 7:00 AM IST
ಸಾರಾತ್: ಪೌರತ್ವ ಕಾಯ್ದೆ ಜಾರಿಗೊಂಡ ಅನಂತರ ಭಾರತ ಈಗ ಆರು ಮುಸ್ಲಿಮೇತರ ಸಮುದಾಯಗಳಿಗೆ ಹೊಸ ಮನೆಯಾಗಿದೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಜಾರ್ಖಂಡ್ನ ಸಾರಾತ್ನಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಕಾಂಗ್ರೆಸ್ ಕಾರಣವಿಲ್ಲದೆ ಹೊಸ ಕಾಯ್ದೆಗೆ ವಿರೋಧ ಮಾಡುತ್ತಿದೆ ಎಂದು ದೂರಿದರು.
ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ಶಿಕ್ಷೆ ಅನುಭವಿಸಿದ ಹಿಂದೂ, ಸಿಕ್ಖ್, ಬೌದ್ಧ, ಜೈನರು, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಬೇರೆ ಎಲ್ಲಿಗೆ ಹೋಗಬೇಕು? ಅವರಿಗೆ ಏಕೆ ಪೌರತ್ವ ನೀಡಬಾರದು ಎಂದೂ ನಡ್ಡಾ ಪ್ರಶ್ನಿಸಿದ್ದಾರೆ.
ಜತೆಗೆ, ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ಗೆ ಹಾಕಿದ್ದ ಸವಾಲನ್ನೇ ಪುನರುಚ್ಚರಿಸಿರುವ ನಡ್ಡಾ, ‘ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ತಾಕತ್ತಿದ್ದರೆ ಪಾಕಿಸ್ತಾನಿಯರಿಗೆ ಪೌರತ್ವ ನೀಡುವುದಾಗಿಯೂ, ಸಂವಿಧಾನದ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವುದಾಗಿಯೂ ಘೋಷಿಸಲಿ’ ಎಂದು ಹೇಳಿದ್ದಾರೆ.