ಲಾಲು ಪುತ್ರರ ನಡುವೆ ಒಡಕು?
Team Udayavani, Jun 10, 2018, 6:00 AM IST
ಪಾಟ್ನಾ: ಆರ್ಜೆಡಿಯಲ್ಲೀಗ ದಾಯಾದಿ ಕಲಹ ಶುರುವಾಗಿದೆಯೇ? ಲಾಲು ಪ್ರಸಾದ್ ಯಾದವ್ ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಮಧ್ಯೆ ವೈಮನಸ್ಸುಂಟಾಗಿದೆಯೇ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ತೇಜ್ ಪ್ರತಾಪ್ ಮಾಡಿರುವ ಟ್ವೀಟ್ವೊಂದು ಇಂಥ ಅನುಮಾನ ಮೂಡಿಸಿದೆ.
ಶನಿವಾರ ಟ್ವೀಟ್ ಮಾಡಿಕೊಂಡಿರುವ ತೇಜ್ ಪ್ರತಾಪ್ ಯಾದವ್, “ನಾನು ಯಾವುದೇ ಹುದ್ದೆಗೆ ಆಸೆ ಇಟ್ಟುಕೊಂಡಿರುವ ವ್ಯಕ್ತಿಯಲ್ಲ. ಅರ್ಜುನನಂತೆ ಹುದ್ದೆಯನ್ನು ತ್ಯಾಗ ಮಾಡಬಲ್ಲೆ. ನಾವೆಲ್ಲರೂ ರಾಜಕೀಯ ಮಾಡುತ್ತೇವೆ, ಆದರೆ, ಪ್ರಸ್ತುತ ಆರ್ಜೆಡಿಯಲ್ಲಿ ನಡೆಯುತ್ತಿರುವ ರಾಜಕೀಯವನ್ನು ನೋಡಿದರೆ, ಬಹಳ ಬೇಸರವಾಗುತ್ತಿದೆ. ಕೆಲವು ಸಮಾಜವಿರೋಧಿ ಶಕ್ತಿಗಳು ಪಕ್ಷದೊಳಕ್ಕೆ ಪ್ರವೇಶ ಪಡೆದಿದ್ದು, ಪಕ್ಷವನ್ನು ಹಾಳು ಮಾಡುತ್ತಿವೆ’ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸ ಲಾಗುತ್ತಿದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಇಂಥ ಸಮಾಜದ್ರೋಹಿ ಶಕ್ತಿಗಳನ್ನು ತೇಜಸ್ವಿಯೇ ಪಕ್ಷದೊಳಕ್ಕೆ ಬಿಟ್ಟುಕೊಂಡಿದ್ದಾರೆ ಎಂದೂ ತೇಜ್ ಆರೋ ಪಿಸಿದ್ದಾರೆ. ಟ್ವೀಟ್ ಹರಿದಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ತೇಜ್, ಇದು ಸಮಾಜ ವಿರೋಧಿ ಕೃತ್ಯಗಳನ್ನು ಉದ್ದೇಶಿಸಿ ಮಾಡಿದ ಟ್ವೀಟ್. ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸಿ ನನ್ನ ಮತ್ತು ತೇಜಸ್ವಿ ನಡುವೆ ಒಡಕು ಉಂಟುಮಾಡಬೇಡಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…