ಬ್ಯಾಂಕ್ ಎಟಿಎಂನಿಂದ 18 ಲಕ್ಷ ರೂ. ದೋಚಿದ ‘ಇಂಜಿನಿಯರ್ ‘
Team Udayavani, Mar 7, 2018, 10:58 AM IST
ಮುಜಫರನಗರ : ತಾನು ಇಂಜಿನಿಯರ್ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಓವರ್ಸೀಸ್ ಬ್ಯಾಂಕ್ ಎಟಿಎಂ ನಿಂದ 18 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ತಾನು ಇಂಜಿನಿಯರ್ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ತಾನು ಎಟಿಎಂ ದುರಸ್ತಿಗಾಗಿ ಬಂದಿರುವುದಾಗಿ ಹೇಳಿಕೊಂಡಿದ್ದ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿರುವುದಾಗಿ ಸದರ್ ಪೊಲೀಸ್ ಠಾಣೆಯ ಅಧಿಕಾರಿ ಅವನೀಶ್ ಗೌತಮ್ ಹೇಳಿದರು.
ಇಂಜಿನಿಯರ್ ಎಂದು ಹೇಳಿಕೊಂಡು ಬಂದ ವ್ಯಕ್ತಿಯು ಬ್ಯಾಂಕ್ ಅಧಿಕಾರಿಗಳ ಮೂಲಕ ಬ್ಯಾಂಕಿನ ಸ್ಟ್ರಾಂಗ್ ರೂಮ್ ಪ್ರವೇಶಿಸಿ ಸೀಕ್ರೆಟ್ ಪಾಸ್ ವರ್ಡ್ ಭೇದಿಸಿ ಎಟಿಎಂನಿಂದ 18.37 ಲಕ್ಷ ರೂ. ದೋಚಿದ ಎಂದು ಠಾಣಾಧಿಕಾರಿ ಗೌತಮ್ ತಿಳಿಸಿದರು.
ಎಟಿಎಂ ನಲ್ಲಿ ನಗದು ಕೊರತೆ ಇರುವುದನ್ನು ಗ್ರಾಹಕರು ಬ್ಯಾಂಕಿನವರ ಗಮನಕ್ಕೆ ತಂದಾಗಲೇ ದೊಡ್ಡ ಪ್ರಮಾಣದ ಹಣ ದೋಚಲಾಗಿರುವುದು ಬೆಳಕಿಗೆ ಬಂತು.
ಪೊಲೀಸರೀಗ ಎಟಿಎಂ ನ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸುತ್ತಿದ್ದು ಇದೇ ವೇಳೆ ಬ್ಯಾಂಕ್ ಸಿಬಂದಿಗಳನ್ನು ಕೂಡ ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
M K Stalin: ತಮಿಳುನಾಡಲ್ಲಿ ಗೂಗಲ್ ಪಿಕ್ಸೆಲ್ ಫೋನ್ ತಯಾರಿಕೆ ಆರಂಭ: ಸ್ಟಾಲಿನ್
Punjab ಡ್ರಗ್ಸ್ ದಂಧೆ ಜೋರಾಗಿದೆ : ಆಪ್, ಕಾಂಗ್ರೆಸ್ ವಿರುದ್ಧ ಪ್ರಧಾನಿ ಕಿಡಿ
Court; ನಿರಂತರ ರೇಪ್ ಮಾಡಿ ಮಲ ಮಗಳನ್ನು ಗರ್ಭಿಣಿಯಾಗಿಸಿದವನಿಗೆ ಜೀವಾವಧಿ ಶಿಕ್ಷೆ
Air India; ಕೊನೆಗೂ ಸಿಬಂದಿಗೆ ವೇತನ ಹೆಚ್ಚಳ; ಪೈಲಟ್ಗಳಿಗೆ ಕಾರ್ಯಕ್ಷಮತೆಯ ಗುರಿ
Kaamya;ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿದ 16ರ ಬಾಲಕಿ
MUST WATCH
ಹೊಸ ಸೇರ್ಪಡೆ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಸ್ಪತ್ರೆಗೆ ದಾಖಲು
Sagara ತಾಳಗುಪ್ಪ,ಕಾರ್ಗಲ್; ಬಿರುಗಾಳಿ ಮಳೆಗೆ ಅಪಾರ ಹಾನಿ
ಸಂಸದ ಪ್ರಜ್ವಲ್ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ
Nikhil Kumaraswamy: “ಅಧಿಕಾರ ದುರುಪಯೋಗ ಬಿಟ್ಟು ನ್ಯಾಯಯುತ ಆಡಳಿತ ನಡೆಸಲಿ’: ನಿಖಿಲ್
ಬಿ.ಸಿ.ರೋಡುನಲ್ಲಿ ಕಳ್ಳತನಕ್ಕೆ ಬೀಳದ ಕಡಿವಾಣ; ಬಸ್ಸೇರುತ್ತಿದ್ದ ಮಹಿಳೆಯ ಚಿನ್ನ ಕಳವು