![Rajeev Chandrasekhar hits back at Elon Musk](https://www.udayavani.com/wp-content/uploads/2024/06/musk-1-415x229.jpg)
Nikhil Kumaraswamy: “ಅಧಿಕಾರ ದುರುಪಯೋಗ ಬಿಟ್ಟು ನ್ಯಾಯಯುತ ಆಡಳಿತ ನಡೆಸಲಿ’: ನಿಖಿಲ್
Team Udayavani, May 23, 2024, 10:45 PM IST
![Nikhil Kumaraswamy: “ಅಧಿಕಾರ ದುರುಪಯೋಗ ಬಿಟ್ಟು ನ್ಯಾಯಯುತ ಆಡಳಿತ ನಡೆಸಲಿ’: ನಿಖಿಲ್](https://www.udayavani.com/wp-content/uploads/2024/05/36-1-620x372.jpg)
ಬೆಂಗಳೂರು: ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ನ್ಯಾಯಯುತವಾಗಿ ಆಡಳಿತ ನಡೆಸಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರ ಕುಟುಂಬವನ್ನು ಈ ಸರಕಾರ ಗುರಿ ಮಾಡುತ್ತಿದೆ ಎಂದು ನಾವು ಹೇಳುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ ಜನರೇ ಮಾತನಾಡುತ್ತಿದ್ದಾರೆ ಎಂದರು.
ಎಚ್.ಡಿ.ರೇವಣ್ಣ ಅವರನ್ನು ಜೈಲಿಗೆ ಕಳುಹಿಸಲೇಬೇಕೆಂದು ನಿರ್ಧರಿಸಿ ಬಂಧಿಸಿದಂತಿದೆ. ಅಧಿಕಾರ ಶಾಶ್ವತ ಅಲ್ಲ, ಹೀಗಾಗಿ ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ಕಾನೂನಾತ್ಮಕವಾಗಿ ಆಡಳಿತ ನಡೆಸಲಿ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರಕಾರದ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪ ಮಾಡುತ್ತಿರುವುದು ಪ್ರಜ್ವಲ್ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಎಂಬ ಆರೋಪ ಸುಳ್ಳು. ತಪ್ಪು ಮಾಡಿದ್ದರೆ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಲಿ ಎಂದರು.
ಟಾಪ್ ನ್ಯೂಸ್
![Rajeev Chandrasekhar hits back at Elon Musk](https://www.udayavani.com/wp-content/uploads/2024/06/musk-1-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.