ಡಿಎಸ್ಪಿ ದೇವೀಂದರ್ ಸಿಂಗ್ ಪ್ರಕರಣ : ಮರುತನಿಖೆಗೆ ಆಗ್ರಹ
Team Udayavani, Jan 18, 2020, 1:00 AM IST
ಹೊಸದಿಲ್ಲಿ: ಹಿಜ್ಬುಲ್ ಉಗ್ರರ ಜತೆ ಸಿಕ್ಕಿಬಿದ್ದ ಡಿಎಸ್ಪಿ ದೇವೀಂದರ್ ಸಿಂಗ್ ಪ್ರಕರಣದ ಕುರಿತು 6 ತಿಂಗಳೊಳಗೆ ನ್ಯಾಯಯುತ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಜತೆಗೆ, ಕಳೆದ ವರ್ಷದ ಪುಲ್ವಾಮಾ ದಾಳಿ ಪ್ರಕರಣದ ಮರು ತನಿಖೆಗೂ ಪಕ್ಷ ಆಗ್ರಹಿಸಿದೆ.
ಇನ್ನೊಂದೆಡೆ, ಈ ಪ್ರಕರಣವನ್ನು ಎನ್ಐಎಗೆ ವಹಿಸಿರುವ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೇವೀಂದರ್ ಸಿಂಗ್ರನ್ನು ಮೌನವಾಗಿಸುವ ಉದ್ದೇಶದಿಂದಲೇ ಈ ಕೇಸನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗಿದೆ. ಎನ್ಐಎ ಮುಖ್ಯಸ್ಥ ವೈ.ಸಿ.ಮೋದಿ ಅವರ ನೇತೃತ್ವದಲ್ಲಿ ಈ ಕೇಸನ್ನು ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದಿದ್ದಾರೆ.